ಚಿನ್ನಸ್ವಾಮಿ ಸ್ಟೇಡಿಯಂ ಸ್ಪೋಟ ಪ್ರಕರಣ: ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ
- by Suddi Team
- July 10, 2018
- 151 Views
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ತಪ್ಪೊಪ್ಪಿಕೊಂಡಿದ್ದ ಮೂವರು ಆರೋಪಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯ ಏಳು ವರ್ಷ ಕಾರಾಗೃಹ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಬಾಂಬ್ ಸ್ಪೋಟ ಪ್ರಕರಣದ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಿದ್ದಲಿಂಗ ಪ್ರಭು ತಪ್ಪೊಪ್ಪಿಕೊಂಡ ಕಮಲ್ ಹಸನ್,ಗೋಹರ್ ಅಜೀಜ್ ಖೊಮೆನಿ ಹಾಗು ಕಪಿಲ್ ಅಖ್ತರ್ ಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನೊಳಗೊಂಡಂತೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು.
ಅಜೀಜ್ ಖೊಮೆನಿ ಮತ್ತು ಕಮಲ್ ಹಸನ್ ಗೆ 7.50 ಲಕ್ಷ ರೂ. ದಂಡ ಹಾಗು ಪ್ರಕರಣದ ಕಪಿಲ್ ಅಖ್ತರ್ ಗೆ 10 ಲಕ್ಷ ರೂ.ದಂಡವನ್ನು ವಿಧಿಸಲಾಗಿದ್ದು,ಅಪರಾಧಿಗಳು ದಂಡ ಕಟ್ಟಲು ವಿಫಲರಾದರೆ 50 ಸಾವಿರ ರೂ.ಗೆ ಒಂದು ವರ್ಷದಂತೆ ಶಿಕ್ಷೆ ವಿಸ್ತರಿಸುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಿದೆ.
Related Articles
Thank you for your comment. It is awaiting moderation.
Comments (0)