ಪೋಕ್ಸೋ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ: ಪೊಲೀಸ್ ಇಲಾಖೆಗೆ ಜನತೆಯ ಸಲಹೆ

ಬೆಂಗಳೂರು: ಶಾಲೆಗಳಲ್ಲಿ ಪೋಸ್ಕೋ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸುವಂತೆ ಮಹಾನಗರದ ಜನತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ #MeetTheBCP ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ  ಬಿ.ದಯಾನಂದ ಸಾರ್ವಜನಿಕರೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡು ಉತ್ತಮ ಬಾಂಧವ್ಯವನ್ನು ಮೆರೆದರು.

ಮಾದಕ ದ್ರವ್ಯ ಸಮಸ್ಯೆ, ಸಂಚಾರಿ ಸಮಸ್ಯೆಗಳು, ಪಾದಚಾರಿಗಳ ಸುರಕ್ಷತೆ, ವಾಹನ ನಿಲುಗಡೆ ಸಮಸ್ಯೆ, ರಸ್ತೆ ಎರಡೂ ಬದಿ ವಾಹನ ನಿಲುಗಡೆ, ಸಾರ್ವಜನಿಕವಾಗಿ ಮದ್ಯಪಾನ, ವ್ಯಾಪಾರಿಗಳಿಂದ ಪಾದಚಾರಿ ಮಾರ್ಗ ಒತ್ತುವರಿ, ಸಾರ್ವಜನಿಕ ತೊಂದರೆ, ರಸ್ತೆಯಲ್ಲಿ ವ್ಹೀಲಿಂಗ್, ಇತರೆ ಟ್ರಾಫಿಕ್ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದ ಕಳಕಳಿಗಳನ್ನು ಪರಿಗಣಿಸಿದ ದಯಾನಂದ್, ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಸಿಸಿಟಿವಿ ಅಳವಡಿಕೆ, ಏಕಪಥ ಸಂಚಾರ ಜಾರಿ, ರಸ್ತೆಗಳ ವೈಟ್ ಟಾಪಿಂಗ್, ಹೆಚ್ಚುವರಿ ಪೊಲೀಸ್ ಚೌಕಿ ಹಾಗೂ ಸಿಬ್ಬಂದಿ ನಿಯೋಜನೆ ಬಗ್ಗೆ ಸಾರ್ವಜನಿಕರ ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲಿಸಿಕೊಂಡರು. ಇದೇ ಸಂದರ್ಭದಲ್ಲಿ ಶಾಲೆಗಳಲ್ಲಿ ಪೋಸ್ಕೋ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸುವಂತೆ ಸಲಹೆಗಳು ವ್ಯಕ್ತವಾದವು.ಇದಕ್ಕೆ ಪೊಲೀಸ್ ಆಯುಕ್ತರು ಸಕಾರಾತ್ಮಕವಾಗಿ ಸ್ಪಂಧಿಸಿದರು.

ನಂತರ ಸಮುದಾಯದೊಂದಿಗೆ ಸಂವಾದ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಮ್ಮ ಬದ್ಧತೆ ಸ್ಥಿರವಾಗಿ ಮುಂದುವರೆಯುತ್ತದೆ.ಒಟ್ಟಾಗಿ, ನಾವು ಸೇರಿ ಬೆಂಗಳೂರು ನಗರವನ್ನು ಇನ್ನಷ್ಟು ಉತ್ತಮಗೊಳಿಸೋಣ! ಎಂದು ನಗರ ಪೊಲೀಸ್ ಆಯುಕ್ತರು ಕರೆ ನೀಡಿದರು.

Related Articles

Comments (0)

Leave a Comment