ಸುಪ್ರೀಂ ಆದೇಶದಿಂದ ಎಚ್ಚೆತ್ತ ಸಾರ್ವಜನಿಕರು: ಪಟಾಕಿ ವ್ಯಾಪಾರ ಠುಸ್!

ಬೆಂಗಳೂರು: ದೀಪಾವಳಿಗೆ ಪಟಾಕಿ ಹಚ್ತೀರಾ ಹಾಗಾದ್ರೆ ಈ ಸ್ಟೋರಿ ನೋಡಿ. ದೀಪಾವಳಿ ಬಂತಂದ್ರೆ ಸಾಕು ಇಡೀ ಊರಿಗೆ ಊರೇ ಸಂಭ್ರಮಿಸುತ್ತೆ. ಎಲ್ಲಾ ಧರ್ಮದವರು ದಿಪಾವಳಿಯನ್ನು ಐಕ್ಯತೆಯ ಸಂಕೇತವಾಗಿ ಆಚರಿಸ್ತಾರೆ. ಊರ ಮಂದಿ ಎಲ್ಲ ಸೇರಿ ಒಟ್ಟಾಗಿ ಪಟಾಕಿ ಸಿಡಿಸೋ ಮಜಾನೇ ಬೇರೆ ಇರುತ್ತೆ. ಆದ್ರೆ ಈಗ ಅದೇ ಪಟಾಕಿಗೆ ಕಂಟಕ ಎದುರಾಗಿದೆ.

ಮಾರುಕಟ್ಟೆಗೆ ಬಣ್ಣ ಬಣ್ಣದ ಪಟಾಕಿಗಳು ಬಂದಿದ್ದರು ಸಹ ಸುಪ್ರೀಂ ಕೋರ್ಟ್ ಆದೇಶದಿಂದ ಪಟಾಕಿ ವ್ಯಾಪಾರ ಠುಸ್ ಆಗಿದೆ. ಕೋರ್ಟ್ ಆದೇಶದಿಂದ ಎಚ್ಚೆತ್ತ ನಾಗರಿಕರು ಪಟಾಕಿ ವ್ಯಾಪಾರಕ್ಕೆ ಒಲ್ಲೆ ಅನ್ನುತಿದ್ದಾರೆ. ಡಿಸ್ಕೌಂಟ್ ಕೊಟ್ರೂ ಪಟಾಕಿ ಪ್ರಿಯರು ಪಟಾಕಿ ಬೇಡ ಅಂತಿದ್ದಾರೆ. ಶೇ 40 ರಿಂದ 50 ರಷ್ಟು ಡಿಸ್ಕೌಂಟ್ ಮಾಡಿ ಮಾರಾಟ ಮಾಡಿದ್ರೂ ನೋ ರೆಸ್ಪಾನ್ಸ್. ಡಿಸ್ಕೌಂಟ್ ಮೇಲೆ ಶೇ 10 ಡಿಸ್ಕೌಂಟ್ ಮಾಡಿದ್ರೂ ಪಟಾಕಿ ಕೊಳ್ಳಲು ಸಾರ್ವಜನಿಕರು ಮುಂದಾಗ್ತಿಲ್ಲ.

ಹೌದು ದೀಪಾವಳಿ ಹಬ್ಬವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಮಂದಿ ತಯಾರಾಗಿದ್ದಾರೆ. ಆದ್ರೆ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹಚ್ಚುವ ಮುನ್ನ ಈ ನಿಯಮಗಳನ್ನು ಮರೆಯದಿರಿ. ಹೌದು ವಾಯು ಮಾಲಿನ್ಯ ಶಬ್ದ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸರ್ಕಾರ ನಿಷೇಧಿಸಿದೆ.ಮಾಲಿನ್ಯ ನಿಯಂತ್ರಣ ಮಂಡಳಿಗೆ 14 ದಿನಗಳ ಕಾಲ ಮೇಲ್ವಿಚಾರಣೆ ಮಾಡುವಂತೆ ಆದೇಶಿಸಿದ್ದು ಒಂದು ವೇಳೆ ಹಾನಿವುಂಟು ಮಾಡುವ ಪಟಾಕಿ ಸಿಡಿಸುವುದು ಕಂಡು ಬಂದ್ರೆ ಕಾನೂನು ಕ್ರಮ ಜರಗಿಸುವಂತೆ ಉಲ್ಲೇಖಿಸಲಾಗಿದೆ.

ಇನ್ನು ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಭಾರಿ ಪಟಾಕಿ ವ್ಯಾಪಾರ ಅಷ್ಟಕಷ್ಟೇ. ಸುಪ್ರೀಂ ಕೋರ್ಟ್ ನ ತೀರ್ಪಿನಿಂದ ಜನರೇ ಎಚ್ಚೆತ್ತುಕೊಂಡು ಪಟಾಕಿ ಕೊಳ್ಳುವುದಕ್ಕೆ ಹಿಂದೇಟುಹಾಕಿದ್ದಾರೆ. ಇನ್ನು ನಗರದ ಬಿಬಿಎಂಪಿ ಗ್ರೌಂಡ್ ಗಳಲ್ಲಿ ಮೂರುದಿನಗಳ ಕಾಲ ಪಟಾಕಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ಕಟ್ಟು ನಿಟ್ಟಿನ ಕ್ರಮ ದಿಂದಾಗಿ ವ್ಯಾಪಾರಿಗಳೂ ಕಂಗಾಲಾಗಿದ್ದು ವರ್ಷಕ್ಕೊಮ್ಮೆ ಭರ್ಜರಿ ವ್ಯಾಪಾರದ ಕನಸು ಕಂಡಿದ್ದ ವ್ಯಾಪಾರಿಗಳು ಪೆಚ್ಚುಮುಖ ಹಾಕಿದ್ದಾರೆ.

ಒಟ್ಟಾರೆ ಅದೇನೇ ಇರಲಿ ಪಟಾಕಿ ಹಚ್ಚಿ ದೀಪ ಬೆಳಕಿ ದೀಪಾವಳಿ ಆಚರಿಸಲು ಜನರು ಮುಂದಾದ್ರೆ ವ್ಯಾಪಾರಿಗಳ ಪಾಲಿಗೆ ವ್ಯಾಪಾರ ಠುಸ್ ಪಟಾಕಿಯಂತಿದೆ. ಸದ್ಯ ಪಟಾಕಿ ಬೆಲೆ ಕೂಡ ಇಳಿದಿದ್ದು ವ್ಯಾಪಾರವೂ ಇಲ್ಲದೆ ಗ್ರಾಹಕರಿಗಾಗಿ ಎದುರು ನೋಡ್ತಾ ಇದ್ದಾರೆ..

Related Articles

Comments (0)

Leave a Comment