ಕೆಲಸ ಕೊಡಿಸ್ತೀವಿ ಹಣ ಕೊಡಿ: ಪೊಲೀಸರಿಂದಲೇ ವಂಚನೆ!

ಬೆಂಗಳೂರು: ಕೆಲಸ ಕೊಡಿಸುತ್ತೇವೆ ದುಡ್ಡು ಕೊಡಿ ಅಂತಾ ಅಮಾಯಕರಿಂದ ದುಡ್ಡು ವಸೂಲಿ ಮಾಡಿ ಮೋಸ ಮಾಡೋ ದಳ್ಳಾಳಿಗಳನ್ನ ನಾವು ನೋಡೀದೀವಿ. ಆದ್ರೆ, ಇಂತಹ ದಳ್ಳಾಳಿಗಳಿಂದ ಅಮಾರಕರನ್ನು ರಕ್ಷಿಸ ಬೇಕಾಗಿರೋ ಪೊಲೀಸರೇ ಈ ರೀತಿ ವಂಚನೆ ಮಾಡಿದ್ರೆ ಹೇಗಿರುತ್ತೆ? ಅಂತದೊಂದು ಘಟನೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆಗಳು ಸೇರಿದಂತೆ FDC, SDC ಕೆಲಸ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ೧೮ ಕೋಟಿ ರೂ ಹಣವನ್ನು ಪೊಲೀಸ್ ಪೇದೆಗಳೆ ವಸೂಲಿ ಮಾಡಿದ್ದಾರೆ. ಇತ್ತ ಕೆಲಸ ಸಿಗುತ್ತದೆ ಎಂದು ನಂಬಿ ದುಡ್ಡು ಕೊಟ್ಟವರಿಗೆ ದುಡ್ಡು ಇಲ್ಲ. ಕೆಲಸನೂ ಇಲ್ಲ.

ಸಿಎಆರ್ ಪೇದೆಗಳಾದ ಲೋಕೇಶ್ ಮತ್ತು ಲಕ್ಷ್ಮೀಕಾಂತ್ ರಿಂದ ವಂಚನೆಗೊಳಗಾಗಿದ್ದವರು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಸಂಬಂಧ ದೂರು ದಾಖಲಿಸಿದ್ದು, ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Comments (0)

Leave a Comment