ಲಘು ವಿಮಾನ ಅಪಘಾತ ಐದು ಮಂದಿ ದುರ್ಮರಣ!

ಮುಂಬೈ: ಇಲ್ಲಿನ ಘಾಟ್ಕೋಪರ್ ನಲ್ಲಿ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿ, ಇಬ್ಬರು ಪೈಲಟ್ ಗಳು ಮತ್ತು ಇಬ್ಬರು ಎಂಜಿನಿಯರ್ ಗಳು ಸಾವನ್ನಪ್ಪಿದ್ದಾರೆ. ಜನದಟ್ಟಣೆ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೊಳಗಾದ ಕಾರಣ ಒಬ್ಬ ಸ್ಥಳೀಯ ವ್ಯಕ್ತಿಯೂ ಕೂಡ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶಕ್ಕೆ ಸೇರಿದ ವಿಮಾನ ಇದಾಗಿದ್ದು ಅಪಘಾತವಾದೊಡನೆಯೇ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಘಟನೆ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್  ಪೈಲಟ್
ತನ್ನ ಸಮಯ ಪ್ರಜ್ಞೆಯಿಂದ  ಅನೇಕ ಜೀವಗಳನ್ನು ಉಳಿಸಿದ್ದಾನೆ ಎಂದು ಹೇಳಿದ್ದಾರೆ.

Related Articles

Comments (0)

Leave a Comment