ಗೌರಿ ಹಂತಕನ ವಶ ನೀಡಲ್ಲ,ಇಲ್ಲೇ ತನಿಖೆ ನಡೆಸಿ: ಮಹಾ ಎಸ್ಐಟಿಗೆ ಸೂಚನೆ
- by Suddi Team
- June 18, 2018
- 36 Views
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.ಮಹತ್ವದ ಬೆಳವಣಿಗೆಯಲ್ಲಿ
ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ಎಸ್ಐಟಿ ತಂಡ ಸಿಲಿಕಾನ್ ಸಿಟಿಗೆ ಆಗಮಿಸಿದ್ದು ದಾಬೋಲ್ಕರದ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಲು ಆರೋಪಿಗಳನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದೆ.
ಪತ್ರಕರ್ತೆ ಗೌರಿ ಹಂತಕರು ಬಂಧನವಾಗುತ್ತಿದ್ದಂತೆ ಕರ್ನಾಟಕ ಎಸ್ಐಟಿ ಕಛೇರಿಗೆ ಮಹಾರಾಷ್ಟ್ರ ಎಸ್ಐಟಿ ತಂಡ ದೌಡಾಯಿಸಿದೆ.ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳು ಅಗಮಿಸಿದ ಹಿನ್ನೆಲೆಯಲ್ಲಿ ಪ್ಯಾಲೇಸ್ ರಸ್ತೆಯ ಸಿಐಡಿ ಕಚೇರಿ ಅವರಣದಲ್ಲಿರುವ ಎಸ್ಐಟಿಗೆ ತನಿಖಾಧಿಕಾರಿ ಎಂ ಎನ್ ಅನುಚೇತ್ ಸೇರಿ ಹಲವು ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದು ಆರೋಪಿ ವಶ ಸಂಬಂಧ ಮಾತುಕತೆ ನಡೆಸಿದರು.
ಸಧ್ಯ ಈ ವಿಶೇಷ ತನಿಖಾ ತಂಡ ಲೇಖಕ ದಾಬೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕುತ್ತಿದೆ.ದಾಬೋಲ್ಕರ್ ಹತ್ಯೆಯಲ್ಲಿ ಗೌರಿ ಹಂತಕರ ಪಾತ್ರವಿದೆಯಾ ಎನ್ನುವ ಅಂಶದ ಮೇಲೆ ಈ ತನಿಖೆ ನಡೆಸುತ್ತಿದೆ.
ಗೌರಿ ಕೇಸ್ ನಲ್ಲಿ ಬಂಧಿತರ ವಿಚಾರಣೆ ನಡೆಸಲು ಮಹಾರಾಷ್ಟ್ರ ಎಸ್ಐಟಿ ಸಿದ್ದತೆ ನಡೆಸಿದ್ದು ಇದಕ್ಕಾಗಿ ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದೆ.ಆರೋಪಿಗಳನ್ನ ವಶಕ್ಕೆ ನೀಡುವಂತೆ ಕರ್ನಾಟಕ ಎಸ್ಐಟಿಗೆ ಮನವಿ ಮಾಡಿದೆ.
ಬಂಧಿತ ಆರೋಪಿಗಳನ್ನ ಪೂರ್ಣ ಪ್ರಮಾಣದಲ್ಲಿ ವಶಕ್ಕೆ ನೀಡುವಂತೆ ಕರ್ನಾಟಕ ಎಸ್ಐಟಿ ಗೆ ಮನವಿ ಮಾಡಿದೆ.
ಆದರೆ ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳ ಮನವಿಯನ್ನು ಕರ್ನಾಟಕ ಎಸ್ಐಟಿ ತಂಡದ ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.ದಿನಕ್ಕೆ 2 ಗಂಟೆಗಳ ಕಾಲ ಆರೋಪಿಗಳನ್ನ ವಶಕ್ಕೆ ನೀಡುತ್ತೇವೆ, ಬೆಂಗಳೂರಿನಲ್ಲಿ ಇದ್ದುಕೊಂಡು ಆರೋಪಿಗಳನ್ನ ವಿಚಾರಣೆ ನಡೆಸುವಂತೆ ಮಹಾರಾಷ್ಟ ಎಸ್ಐಟಿಗೆ ಕರ್ನಾಟಕ ಎಸ್ಐಟಿ ಸೂಚನೆ ನೀಡಿದೆ.
Related Articles
Thank you for your comment. It is awaiting moderation.
Comments (0)