ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗನ ವಿರುದ್ಧವೇ ಸುಫಾರಿ
- by Suddi Team
- August 28, 2020
- 14 Views

ಹಾಸನ: ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮೂರು ವರ್ಷಗಳಿಂದ ಮನೆಯಿಂದ ಹೊರ ಹಾಕಲ್ಪಟ್ಟಿದ್ದ ಯುವಕನೊಬ್ಬ, ಇದೀಗ ತಂದೆಯ ಹಳೆಯ ಸೇಡಿನಿಂದಾಗಿ ಶೂಟೌಟ್ ಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.
ತಾಲೂಕಿನ ಬೇಡಿಗನ ಹಳ್ಳಿ ಗ್ರಾಮದ ಪುನೀತ್(25), ಹತ್ಯೆಯಾದ ಯುವಕ. ಮಗನನ್ನು ತನ್ನ ಪತಿಯೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಇದನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪುನೀತ್ ತಂದೆ ಹೇಮಂತ್ ಮದುವೆಯಾಗಿ ಹಲವು ದಶಕ ಕಳೆದಿದ್ದು, ಬೆಳೆದ ಮಕ್ಕಳಿದ್ದರೂ, ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಪುನೀತ್ ಪ್ರಶ್ನೆ ಮಾಡಿದ್ದಕ್ಕೆ ಹೇಮಂತ್ ಮಗನನ್ನು ಮೂರು ವರ್ಷಗಳ ಹಿಂದೆಯೇ ಮನೆಯಿಂದ ಹೊರ ಹಾಕಿದ್ದ. ನಂತರ ಕೆಲ ದಿನ ಪ್ರತ್ಯೇಕವಾಗಿದ್ದ ಪುನೀತ್, ಬಳಿಕ ಬೆಂಗಳೂರಿಗೆ ಹೋಗಿ ಲಾಕ್ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದ. ಈ ನಡುವೆ ಹೇಮಂತ್ ಪತ್ನಿ ಯಶೋಧ ಪುನೀತ್ ಪರ ನಿಂತಿದ್ದರಿಂದ ಆಕೆಯನ್ನೂ ಹೇಮಂತ್ ದೂರ ಮಾಡಿದ್ದ. ಯಶೋಧ ಮತ್ತು ಪುನೀತ್ ಬೇಡಿಗನಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಹೇಮಂತ್ ಮತ್ತು ಇನ್ನೊಬ್ಬ ಮಗ ಪ್ರಶಾಂತ್ ಹೊಸೂರು ಎಂಬ ಗ್ರಾಮದಲ್ಲಿ ವಾಸವಿದ್ದರು. ಈ ನಡುವೆ ಹೇಮಂತ್ ಪತ್ನಿಗೆ ಯಾವುದೇ ಜೀವನಾಂಶ ನೀಡಿರಲಿಲ್ಲ.
ಹೀಗಿರುವಾಗ ತಂದೆಯ ತೋಟದಲ್ಲಿ ಕೆಲ ದಿನಗಳ ಹಿಂದೆ ಪುನೀತ್ ತೆಂಗಿನಕಾಯಿ ಕೆಡವಿಸಿದ್ದ. ಇದರಿಂದ ಕೆಂಡಾಮಂಡಲನಾದ ಪತಿ ಹೇಮಂತ್, ಹಳೆ ಜಿದ್ದಿನ ಹಿನ್ನೆಲೆಯಲ್ಲಿ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದಾನೆ ಎಂಬುದು ಯಶೋಧಮ್ಮಳ ಗಂಭೀರ ಆರೋಪವಾಗಿದೆ.
Related Articles
Thank you for your comment. It is awaiting moderation.
Comments (0)