ವಿದ್ಯುತ್ ತಂತಿ ಸ್ಪರ್ಶ ರೈತ ಸಾವು!

ದಾವಣಗೆರೆ: ವಿದ್ಯುತ್ ತಂತಿ ಸ್ಪರ್ಶಿಸಿ ರೈತನೊರ್ವ ಮೃತಪಟ್ಟ ಘಟನೆ, ತಾಲೂಕಿನ ಆಲೂರು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

ಶಿವರಾಜ್(50) ಮೃತ ರೈತನಾಗಿದ್ದು, ನಿನ್ನೆ ಆಲೂರು ಭಾಗದಲ್ಲಿ ಮಳೆ ಗಾಳಿ ಬಂದಿದ್ದರಿಂದ ಪವರ್ ಲೈನ್ ಕಿತ್ತು ಬಿದ್ದಿತ್ತು. ಬಿದ್ದ ವಿದ್ಯುತ್ ಲೈನ್ ನೋಡದೆ ರೈತ ಶಿವರಾಜ್ ಅದನ್ನು ತುಳಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಬಲಿಯಾಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Related Articles

Comments (0)

Leave a Comment