ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಂದ ಗ್ರಾಹಕರ ಮೇಲೆ ಹಲ್ಲೆ!

ಕೋಲಾರ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಸಾರ್ವಜನಿಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದುರಲ್ಲಿಯೇ ಈ ಘಟನೆಯು ನಡೆದಿದ್ದು, ಇಂದು ಡಿಸಿಸಿ ಬ್ಯಾಂಕ್‌ ನ ಶ್ರೀನಿವಾಸಪುರದ ಶಾಖೆಯಲ್ಲಿ ಮಹಿಳೆಯರಿದ್ದ ಸಾಲಿನಲ್ಲಿ ನುಗ್ಗಿದ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದು ನಿಜ ಅಂತ ಬ್ಯಾಲಹಳ್ಳಿ ಗೋವಿಂದಗೌಡ ಪ್ರತಿಕ್ರಿಯಿಸಿದ್ದಾರೆ.

ಇಂದು ಮಧ್ಯಾಹ್ನ ಒಂದೂವರೆ ಸಮಯದಲ್ಲಿ ಡಿಸಿಸಿ ಬ್ಯಾಂಕಿನ ಶ್ರೀನಿವಾಸಪುರ ಶಾಖೆಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆಯ ಕಾರ್ಯಕ್ರಮವಿತ್ತು. ಶ್ರೀನಿವಾಸಪುರ ಕ್ಷೇತ್ರದ ಶಾಸಕರೂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವ್ರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವೇಳೆಯಲ್ಲಿ ಬ್ಯಾಂಕ್ ಕೌಂಟರ್ ಬಳಿ ನಿಂತಿದ್ದ ಗ್ರಾಹಕರೊಬ್ಬರ ಕೆನ್ನೆಗೆ ಬ್ಯಾಲಹಳ್ಳಿ ಗೋವಿಂದಗೌಡ ಹೊಡೆದಿದ್ದಾರೆ. ಕ್ರಮ ಸಂಖ್ಯೆ ಸರಿಯಾಗಿ ಇಟ್ಟುಕೊಳ್ಳದೆ ಸಾಲ ಪಡೆಯಲು ಬಂದಿದ್ದೀಯ ಅಂತ ವ್ಯಕ್ತಿಯ ಕೆನ್ನೆಗೆ ಬ್ಯಾಲಹಳ್ಳಿ ಗೋವಿಂದಗೌಡ ಹೊಡೆದರು. ಈ ವೇಳೆಯಲ್ಲಿ ಅಲ್ಲಿದ್ದ ಶಾಸಕ ರಮೇಶ್ ಕುಮಾರ್ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಅಂತ ಹೇಳುತ್ತಿರುವುದು ವಿಡಿಯೋದಲ್ಲಿದೆ. ಹಲ್ಲೆಗೊಳಗಾದ ವ್ಯಕ್ತಿ ದೂರು ದಾಖಲಿಸಿಲ್ಲ. ಅಲ್ಲದೆ ಯಾವುದೇ ಪ್ರತಿಕ್ರಿಯೆಗೂ ಸಿಕ್ಕಿಲ್ಲ.

Related Articles

Comments (0)

Leave a Comment