ಭ್ರಷ್ಟಾಚಾರ ಆರೋಪ: ಇಬ್ಬರು ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ

ಬೆಂಗಳೂರು: ರಾಜ್ಯದ 2 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ.

ಆರೋಪಿತ ಅಧಿಕಾರಿಗಳ ಆಸ್ತಿ-ಪಾಸ್ತಿ ಶೋಧನಾ ಕಾರ್ಯ ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳ ಈ ಕೆಳಕಂಡಂತಿರುತ್ತವೆ. ಹಾಗೂ ಸರ್ಕಾರಿ ಅಧಿಕಾರಿಗಳ ಮಾಹಿತಿ

1. ಶ್ರೀ ಹನುಮಪ್ಪ ಅಂದಪ್ಪ ಪ್ರಭು ಕರೆಣ್ಣವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಾಗಲಕೋಟೆ,

ಅವರ ಗದಗ ಜಿಲ್ಲೆ, ರಾಜೀವ ಗಾಂಧಿನಗರದಲ್ಲಿರುವ ವಾಸದ ಮನೆ, ಹಾಗೂ ಕ್ಲಬ್ ಕ್ರಾಸ್ ಬಳಿ ಯಲ್ಲಿರುವ ಪ್ರಸ್ತುತ ವಾಸದ ಬಾಡಿಗೆ ಮನೆ ಹಾಗೂ ಬಾಗಲಕೋಟೆಯ ರೋಟ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಾಗಲಕೋಟೆ.

2 ಶ್ರೀ ಎಂ. ದಾಸೇಗೌಡ, ವಿಶೇಷ ಭೂ ಸ್ವಾಧೀನಾಧಿಕಾರಿ, ಕೆ.ಐ.ಎ.ಡಿ.ಬಿ, ಮಂಗಳೂರು. (ಹಾಲಿ ಅಮಾನತ್ತು) ಇವರು ಮಂಡ್ಯ ಜಿಲ್ಲೆ, ಕಾವೇರಿ ನಗರದಲ್ಲಿನ ನಿವಾಸ, ಹಾಗೂ ಸ್ನೇಹಿತರ ಮಂಡ್ಯ ಜಿಲ್ಲೆ. ಅಶೋಕ ನಗರದಲ್ಲಿನ ಆಡಿಟರ್‌ ಕಛೇರಿ ಹಾಗೂ ಮಂಡ್ಯ ಜಿಲ್ಲೆ, ಚಾಮುಂಡೇಶ್ವರಿನಗರದಲ್ಲಿನ ವಾಸದ ಮನೆ.

ಕರ್ನಾಟಕ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.

Related Articles

Comments (0)

Leave a Comment