ಬಾಬ್ರಿಯಲ್ಲಿ ಗೆದ್ದ ಬಿಜೆಪಿ ಭೀಷ್ಮಾ!
- by Suddi Team
- September 30, 2020
- 71 Views

ಲಖನೌ: 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ 32 ಜನ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚೀಟ್ ಕೊಟ್ಟಿದೆ. ಈ ಮೂಲಕ 28 ವರ್ಷಗಳ ಸುದೀರ್ಘ ಕಾಲದ ಕಾನೂನು ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ.
1992ರ ಡಿಸೆಂಬರ್ 6 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಲ್ ಕೆ ಯಾದವ್ ಅವರು ಮಹತ್ವದ ತೀರ್ಪು ನೀಡಿದ್ದಾರೆ. ಬಾಬ್ರೀ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಲುಕಿದ್ದ, ಮಾಜಿ ಉಪ ಪ್ರಧಾನಿ ಎಲ್. ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಉಮಾಭಾರತಿ ಸೇರಿದಂತೆ 32 ಜನ ಆರೋಪಿಗಳು ನಿರ್ದೋಷಿ ಎಂದು ಸಿಬಿಐ ಕೋರ್ಟ್ ಕ್ಲೀನ್ ಚೀಟ್ ಕೊಟ್ಟಿದೆ.
ವಿಶ್ವ ಹಿಂದು ಪರೀಷತ್ ನೇತೃತ್ವದಲ್ಲಿ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಉಮಾಭಾರತಿ ಸೇರಿದಂತೆ 48 ಜನ ಸಂಚು ರೂಪಿಸಿ ಬಾಬ್ರಿ ಮಸೀದಿ ವಿಚಾರಣೆ ಹಂತದಲ್ಲಿ ಇರುವಾಗ್ಲೇ ಧ್ವಂಸಗಗೊಳಿಸಿದ್ರು ಎಂದು ದೂರು ದಾಖಲಾಗಿತ್ತು. ಅದರಂತೆ ಸುಮಾರು 28 ವರ್ಷಗಳ ಕಾಲ ನ್ಯಾಯಾಲದಲ್ಲಿದ್ದ ಕೇಸ್ ಇಂದು ಅಂತ್ಯ ಕಂಡಿದೆ.
ಖುಲಾಸೆಗೆ ಪ್ರಮುಖ ಕಾರಣಗಳು
1. 32 ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳಿಲ್ಲ
2. ಬಾಬ್ರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆ
3 .ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಘಟನೆ ಅಲ್ಲ
4 .ಬಾಬ್ರಿ ಮಸೀದಿ ಧ್ವಂಸಕ್ಕೆ ಯಾರು ಪ್ರಚೋದನೆ ಕೊಟ್ಟಿಲ್ಲ
5 .ಬಾಬ್ರಿ ಮಸೀದಿ ಧ್ವಂಸ ಆ ಕ್ಷಣದ ದಿಢೀರ್ ಘಟನೆ
6. ಆರೋಪಿಗಳು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು
7. ಫೋಟೋ ಆಧಾರಿಸಿ ಆರೋಪಿಗಳೆಂದು ಹೇಳಲು ಅಸಾಧ್ಯ
8. ಆಕಸ್ಮಿಕವಾಗಿ ಸಮಾಜಘಾತುಕ ಶಕ್ತಿಗಳು ಮಸೀದಿ ಕೆಡವಿದ್ರು
9. ವಿಡಿಯೋ ಸಾಕ್ಷ್ಯ ತಿರುಚಲಾಗಿದೆ
10. ವಿಡಿಯೋದ ನೆಗೆಟೀವ್ ದಾಖಲೆಯನ್ನ ಸಿಬಿಐ ಸಲ್ಲಿಸಿಲ್ಲ
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಬಿಜೆಪಿ ವಯದಲ್ಲಿ ಖುಷಿ ಕೊಟ್ಟಿದೆ. ಅದ್ರಲ್ಲೂ ಬಿಜಿಪಿ ಹಿರಿಯ ರಾಜಕಾರಣಿ ಬಿಜಿಪಿ ಭಿಷ್ಮ ಅಂತಲೇ ಕರೆಸಿಕೊಳ್ಳೋ ಲಾಲ್ ಕೃಷ್ಣ ಅಡ್ವಾನಿಯವರ ಪಾಲಿಗೆ ಈ ತೀರ್ಪು ಅಂತ್ಯಂತ ಪ್ರಮುಖವಾಗಿದ್ದು. ಇದೀಗ ತೀರ್ಪು ಅವ್ರ ಪರವಾಗಿ ಬಂದಿರೊದಿಕ್ಕೆ ಬಿಜಿಪಿ ಇದನ್ನ ಐತಿಹಾಸಿಕ ಜಯ ಎಂದು ಬಣ್ಣಿಸಿದೆ.
Related Articles
Thank you for your comment. It is awaiting moderation.
Comments (0)