ಸೈನ್ಯಾಧಿಕಾರಿ ಪತ್ನಿ ಕೊಲೆ ಕೇಸ್ ಗೆ ಟ್ವಿಸ್ಟ್: ಪತಿಗೆ ವಿಚ್ಚೇದನ ನೀಡಲು ಒಪ್ಪದ್ದಕ್ಕೆ ಕೊಲೆ

ನವದಹಲಿ: ಕಂಟೋನ್ಮೆಟ್‌ನಲ್ಲಿ ನಡೆದ ಸೈನ್ಯಾಧಿಕಾರಿ ಹೆಂಡತಿ ಕೊಲೆ ಪೂರ್ವ ನಿಯೋಜಿತ ಎಂದು ತಿಳಿದು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ರಾಯ್ ಹಾಂಡಾ ಎಂಬ ಸೈನ್ಯಾಧಿಕಾರಿಯನ್ನು ಬಂಧಿಸಲಾಗಿದೆ.

ಆರೋಪಿಯ ಹೊಂಡಾ ಸಿಟಿ ಕಾರಿನಲ್ಲಿ ಚಾಕುಗಳು ದೊರೆತಿದ್ದು, ಇದು ಅಚಾನಕ್ ಆಗಿ ಸಂಭವಿಸಿದ ಘಟನೆಯಲ್ಲ ಉದ್ದೇಶ ಪೂರ್ವಕವಾಗಿ ನಡೆದ ಘಟನೆ ಎಂಬುದನ್ನು ಸೂಚಿಸುತ್ತದೆ. ಕಾರಿನಲ್ಲಿ ದೊರೆತ ಪಾಕೆಟ್ ಚಾಕುವಿನಲ್ಲಿ ರಕ್ತದ ಕಲೆಗಳಿವೆ ಎಂದು ತಿಳಿದುಬಂದಿದೆ.

ದೆಹಲಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಸಮೀಪ ಶೈಲೇಜಾ ದ್ವಿವೇದಿ(35)ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಸಂಬಂಧ ಆರೋಪಿಯನ್ನು ಪ್ರಶ್ನಿಸಿದಾಗ ಆರೋಪಿ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಶೈಲಜಾ ಪತಿ ಮತ್ತು ಆರೋಪಿ ಇಬ್ಬರು 2015 ರಿಂದಲೂ ಇಬ್ಬರು ಅಧಿಕಾರಿಗಳು  ನಾಗಾಲ್ಯಾಂಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆಗಿನಿಂದ ಇಬ್ಬರು ಪರಿಚಯಸ್ಥರಾಗಿದ್ದರು ಎಂದು ತಿಳಿದಿ ಬಂದಿದೆ.

ಇಬ್ಬರ ನಡುವೆ ಜನವರಿ ನಂತರ 3,300 ಫೋನ್ ಕರೆಗಳು ಮತ್ತು 1,500 ಸಂದೇಶಗಳು ವಿನಿಮಯವಾಗಿದ್ದು, ಅದರಲ್ಲಿ  ಹೆಚ್ಚಿನ ಕರೆಗಳನ್ನು ಹಾಂಡಾ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಶೈಲೇಜಾ ತಮ್ಮ ಪತಿಯೊಂದಿಗೆ ಇರಲು ದೆಹಲಿಗೆ ಬಂದಿದ್ದರು. ಅಲ್ಲದೆ ಬೇಸ್ ಆಸ್ಪತ್ರೆಯಲ್ಲಿ ಫಿಸಿಯೋ ಥೆರಫಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇದೇ ಆಸ್ಪತ್ರೆಯಲ್ಲಿ ಹಾಂಡಾ ಅವರ ಮಗನನ್ನು ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಶೈಲಜಾ ಅವರೊಂದಿಗೆ ಮಾತನಾಡಲು ಬಯಸಿದ್ದರಂತೆ.
ಶನಿವಾರ ತನ್ನ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹಾಂಡಾ ಶೈಲಜಾರಿಗೆ ಹೇಳಿದ್ದತೆ. ಶೈಲಜಾ ಕಾರಿನಲ್ಲಿ ಕುಳಿತ ನಂತರ ತಮ್ಮ ಹಳೆಯ ಸಂಬಂಧದ ಬಗ್ಗೆ ಹಾಂಡಾ ಪ್ರಸ್ತಾಪಿಸಿ ಆದಷ್ಟು ಬೇಗ ತಮ್ಮ ತಮ್ಮ ಸಾಂಗಾತಿಗಳಿಗೆ ವಿಚ್ಚೇದನ ನೀಡಿ ಇಬ್ಬರೂ ಮದುವೆಯಾಗೋಣ ಎಂದು ಕೇಳಿದ್ದಾನೆ. ಆದರೆ, ಇದನ್ನು ಶೈಲಜಾ ನಿರಾಕರಿಸಿದ್ದಾರೆ.

ಹಾಂಡಾ, ಶೈಲಜಾಳನ್ನು ಪಡೆಯಲು ಕೊನೆಯ ಪ್ರಯತ್ನವಾಗಿ ತನ್ನ ಪತ್ನಿಗೆ ಕರೆ ಮಾಡಿ ಲೌಡ್ ಸ್ಪೀಕರ್ ಆನ್ ಮಾಡಿ ವಿಚ್ಚೇದನದ ಬಗ್ಗೆ ಶೈಲಜಾಗೆ ತಿಳಿಸುವಂತೆ ಹೇಳುತ್ತಾನೆ. ಆಗಲೂ ಶೈಲಜಾ ಒಪ್ಪದಿದ್ದಾಗ ತನ್ನ ಬಳಿಯಿದ್ದ ಚಾಕುವಿನಿಂದ ಅವಳಿಗೆ ಇರಿಯುತ್ತಾನೆ‌. ಶೈಲಜಾ ಹಾಂಡಾ ತಪ್ಪಿಸಿಕೊಳ್ಳು ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ.

Related Articles

Comments (0)

Leave a Comment