ಪಂಚ ಭೂತಗಳಲ್ಲಿ ಅಂಬರೀಶ್ ಲೀನ: ಜಲೀಲ ಇನ್ನು ನೆನಪು ಮಾತ್ರ

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ.ಸಕಲ‌ ಸರಕಾರಿ ಗೌರವದೊಂದಿಗೆ ಕರ್ಣನ ಅಂತ್ಯಸಂಸ್ಕಾರ ನಡೆದಿದ್ದು ಹಿರಿಯ ನಟ ಅಂಚಭೂತಗಳಲ್ಲಿ ಲೀನವಾದರು.

ಮಂಡ್ಯದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂಬರೀಶ್ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಯಿತು. ರಕ್ಷಣಾ ಇಲಾಖೆಯ ಹೆಲಿಕ್ಯಾಪ್ಟರ್ ಮೂಲಕ ಎಚ್ಎಎಲ್ ವಿಮಾನಕ್ಕೆ ಬಂದ ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಕಂಠೀರವ ಸ್ಟೇಡಿಯಂ ಗೆ ತರಲಾಯಿತು.

ಮಧ್ಯಾಹ್ನ12 ಗಂಟೆಗೆ ಆಗಮಿಸಿದ‌ ಪಾರ್ಥೀವ ಶರೀರವನ್ನು ಹೂವುನಿಂದ ಅಲಂಕರಿಸಿದ್ದ ವಾಹನಕ್ಕೆ ಬದಲಾಯಿಸಲಾಯಿತು.ನಂತರ 12.30 ಕ್ಕೆ ಸ್ಟೇಡಿಯಂ ನಿಂದ ಹೊರಟ ಪಾರ್ಥೀವ ಶರೀರ ಸಂಜೆ 4 ಗಂಟೆಗೆ ಕಂಠೀರವ ಸ್ಟುಡಿಯೋ ತಲುಪಿತು.ರಸ್ತೆಯುದ್ದಕ್ಕೂ ಸೇರುದ್ದ ಜನಸಾ್ರ ಅಂಬಿಗೆ ಅಂತಿಮ ವಿದಾಯ ಹೇಳಿತು.

ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟ, ಮಾಜಿ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರಧ್ವಜವನ್ನು ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಿದರು.

ರವಿಚಂದ್ರನ್, ಶಿವಕುಮಾರ್, ದರ್ಶನ್,ಯಶ್ ಸೇರಿದಂತೆ ಚಿತ್ರರಂಗದ ಗಣ್ಯರು,ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ ಕೆ. ಶಿವಕುಮಾರ್,ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮೊದಲಾದವರು ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸುವ ಮೂಲಕ
ಅಂಬಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.

ನಂತರ ಒಕ್ಕಲಿಗ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಬಳಿಕ ಚಿತೆಗೆ ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿದ್ದು ಅಗ್ನಿಜ್ವಾಲೆಯ ಮೂಲಕ ಅಂಬಿ ಪಂಚ ಭೂತಗಳಲ್ಲಿ ಲೀನವಾದರು.

Related Articles

Comments (0)

Leave a Comment