ನಾಲೆಗೆ ಬಿದ್ದ ಖಾಸಗಿ ಬಸ್: 25 ಪ್ರಯಾಣಿಕರ ಸಾವು!
- by Suddi Team
- November 24, 2018
- 31 Views

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ,ಜಲರೂಪದಲ್ಲಿ ಬಂದ ಯಮಪಾಶಕ್ಕೆ ಸಿಲುಕಿದ ಖಾಸಗಿ ಬಸ್ ನಲ್ಲಿದ್ದ 25 ಪ್ರಯಾಣಿಕರು ಪರಲೋಕಕ್ಕೆ ತೆರಳಿದ್ದಾರೆ.
ನಾಲೆಗೆ ಖಾಸಗಿ ಬಸ್ ಉರುಳಿದ ಪರಿಣಾಮ 25 ಜನರ ದುರ್ಮರಣವನ್ನಪ್ಪಿರುವ ಧಾರುಣ ಘಟನೆ ಇಂದು ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ವಿಸಿ ನಾಲೆಯಲ್ಲಿ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್ ನಾಲೆಗೆ ಉರುಳಿದೆ ಎಂದು ಶಂಕಿಸಲಾಗಿದೆ. ನಾಲೆಗೆ ಬಿದ್ದ ಬಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಪರಿಣಾಮ ಉಸಿರುಗಟ್ಟಿ ೨೫ ಪ್ರಯಾಣಿಕರು ಮೃತಪಟ್ಟಿದ್ದು ಘಟನೆಯಲ್ಲಿ ಇನ್ನು ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಶವಗಳನ್ನು ಮಂಡ್ಯ ಮಿಮ್ಸ್ ಆಸ್ಪತಗೆ ರವಾನೆ ಮಾಡಲಾಗಿದ್ದು,ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Related Articles
Thank you for your comment. It is awaiting moderation.
Comments (0)