Live-ಆರ್‌ಎಸ್‌ಎಸ್ ವಿಜಯ ದಶಮಿ ನೇರಪ್ರಸಾರ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಸ್ಥಾಪನಾ ದಿನವಾದ ಇಂದು ವಿಜಯದಶಮಿ ಉತ್ಸವ
ಯುಗಾಬ್ದ 5123 ಆಚರಿಸಲಾಯಿತು. ಉತ್ತರ ಪ್ರದೇಶದ ನಾಗಪುರದ ಸ್ಮೃತಿ ಮಂದಿರ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಆರ್‌ಎಸ್‌ಎಸ್ ಸರ ಸಂಘಚಾಲಕ ಡಾ.ಮೋಹನ್ ಭಾಗವತ್ ಮಾತನಾಡಿದರು.

ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತರ ವಿಜಯದಶಮಿ ಭಾಷಣದ ಮುಖ್ಯ ಅಂಶಗಳು

ಸ್ವಾತಂತ್ರ್ಯ ಸಂಗ್ರಾಮ:

ಹಲವಾರು ಜಾತಿ ಸಮುದಾಯಗಳಿಗೆ ಸೇರಿದ, ವಿವಿಧ ಪ್ರದೇಶಗಳಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ.
ಇರುಳು ಕಳೆದು ಹಗಲು ಆಗುವುದರೊಳಗಾಗಿ ನಮಗೆ ಸ್ವಾತಂತ್ರ್ಯ್ರ ಸಿಗಲಿಲ್ಲ. ಶಾಂತಿಯುತ ಧರಣಿಗಳಿಂದ ಹಿಡಿದು ಸಶಸ್ತ್ರ ಹೋರಾಟಗಳವರೆಗೆ ಎಲ್ಲಾ ವಿಧಾನಗಳು ಅಂತಿಮವಾಗಿ ಸ್ವಾತಂತ್ರ್ಯದ ಗುರಿ ಸಾಧಿಸುವಲ್ಲಿ ಪರ್ಯವಸನಗೊಂಡವು.

ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶ ವಿಭಜನೆಯ ಗಾಯದ ಗುರುತು ಉಳಿದುಹೋಗಿದೆ. ಭಾರತದ ಏಕತೆ ಮತ್ತು ಸಮಗ್ರತೆಗಳನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲು ನಮ್ಮ ಇಡೀ ಸಮಾಜ, ಮುಖ್ಯವಾಗಿ ತರುಣ ಜನಾಂಗವು, ಈ ಚರಿತ್ರೆಯನ್ನು ಗಮನಿಸಿ, ಅರ್ಥೈಸಿ ನೆನೆಪಿಟ್ಟುಕೊಳ್ಳಬೇಕಾಗಿದೆ.

ಸಾಮಾಜಿಕ ಸಾಮರಸ್ಯ:

ಸಮಾನತೆಗೆ ಬದ್ಧವಾದ ಮತ್ತು ತಾರತಮ್ಯರಹಿತ ಸಮಾಜವು ದೇಶದ ಏಕತೆ ಮತ್ತು ಸಮಗ್ರತೆಗೆ ಒಂದು ಪೂರ್ವಭಾವೀ ಅಗತ್ಯವಾಗಿದೆ. ಸಂಘದ ಸ್ವಯಂಸೇವಕರು ಇಂಥಹ ಸಮಾಜದತ್ತ ಕಾರ್ಯತತ್ಪರರಾಗಿದ್ದಾರೆ.
ಭಾರತದ ಐಕ್ಯತೆ ಮತ್ತು ಸಮಗ್ರತೆಯ ಮೂಲಕ ಮಾನವರೆಲ್ಲರಿಗೂ ಸ್ವಾತಂತ್ರ್ಯವನ್ನು ಒದಗಿಸುವುದೇ ಅನಾದಿಕಾಲದಿಂದಲೂ ಭಾರತೀಯ ಜೀವನದ ಮುಖ್ಯ ಅಂಶವಾಗಿದೆ. ಇಲ್ಲಿಯ ಜನರು ಈ ಗುರಿಗಾಗಿ ಅಕ್ಷರಶಃ ನೆತ್ತರನ್ನು ಬೆವರಾಗಿಸಿದ್ದಾರೆ.

ಭಾರತದ ಪ್ರಗತಿ ಮತ್ತು ಅದಕ್ಕೆ ದಕ್ಕಬೇಕಾದ ಮಾನ್ಯತೆಗಳು ಪ್ರಪಂಚದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರಕವಾಗಿವೆ. ಈ ಹಿತಾಸಕ್ತಿಗಳು ಹಲವಾರು ದೇಶಗಳಲ್ಲಿ ಪ್ರಭಾವಿಯಾಗಿವೆ. ಸನಾತನ ಮೌಲ್ಯಗಳು ಭಾರತದಲ್ಲಿ ಪ್ರತಿಷ್ಠಾಪಿತವಾಗುವುದರೊಂದಿಗೆ ಸ್ವಾರ್ಥೀ ಶಕ್ತಿಗಳ ದುರ್ವರ್ತನೆಗಳು ಕೊನೆಗೊಳ್ಳುತ್ತವೆ.
ಭಾರತವು ಧಾರ್ಮಿಕ ದೃಷ್ಟಿಕೋನದಿಂದ ಸಮುದಾಯಗಳನ್ನು ಪ್ರಭಾವಿಸಲಿದ್ದು ಜಗತ್ತಿನ ಸಮತೋಲನವನ್ನು ಪುನಃ ತರುವ, ಸಹಕಾರ ಪ್ರವೃತ್ತಿಯನ್ನು ಉತ್ತೇಜಿಸುವ ಮತ್ತು ಹರ್ಷದ ವಾತಾವರಣವನ್ನು ನಿರ್ಮಾಣಮಾಡುವ ಸಾಮರ್ಥ್ಯ ಹೊಂದಿದೆ.

ಪ್ರಪಂಚದಲ್ಲಿ ಭಾರತದ ಬಗ್ಗೆ ಗೊಂದಲ ಸೃಷ್ಟಿಸುವ ಮತ್ತು ಭಾರತೀಯರನ್ನು ಹಾದಿತಪ್ಪಿಸುವ ಪ್ರಯತ್ನಗಳನ್ನು ಅಪಪ್ರಚಾರದ ಮೂಲಕ ಮಾಡಲಾಗುತ್ತಿದೆ. ಬಹಿರಂಗವಾಗಿ ಮತ್ತು ಗೌಪ್ಯವಾಗಿ ಹಲವಾರು ಸಮಾಜವಿರೋಧೀ ಹಿತಾಸಕ್ತಿಗಳು ಒಳ ಒಪ್ಪಂದಗಳೊಂದಿಗೆ ಸಕ್ರಿಯವಾಗಿವೆ.
ಕಾಲ-ಕಾಲಕ್ಕೆ ಭಾರತ ವಿರೋಧೀ ಹಿತಾಸಕ್ತಿಗಳು ಉದ್ದೇಶ ಬದಲು ಮಾಡಿಕೊಳ್ಳದೇ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾ ಜನ ಸಮುದಾಯಗಳನ್ನು ರುಪಯೋಗಪಡಿಸಿಕೊಳ್ಳುತ್ತಾ ಪರಿಸ್ಥಿತಿಯನ್ನು ಉದ್ರಿಕ್ತಗೊಳಿಸುತ್ತಿದ್ದಾರೆ. ಈ ರೀತಿಯ ಹಲವು ಪ್ರವೃತ್ತಿಗಳು / ಯೋಜನೆಗಳು ಇತ್ತೀಚೆಗೆ ಬಯಲಾಗಿವೆ.
ಮೋಸದ ಮತ್ತು ಕುತಂತ್ರದ ಯೋಜನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸಮಾಜವು ಬಲಿಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಸ್ವಾತಂತ್ರ್ಯ ಹಾಗೂ ನೈತಿಕತೆ:

ಹೊಸ ತಂತ್ರಜ್ಞಾನಾಧಾರಿತ ಸರ್ಕಾರೀ ನಿಯಂತ್ರಣಕ್ಕೊಳಪಡದ ಬಿಟ್ ಕಾಯಿನ್ ರೂಪದ ಹಣವು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಸಂಭವಗಳು ಕಂಡುಬರುತ್ತಿದೆ. ಸರ್ಕಾರವು ಇದರ ಬಗ್ಗೆ ಕಾನೂನು ರಚಿಸಬೇಕಾಗಿದೆ.
ಮಾಧ್ಯಮ ಮತ್ತು ಸಿನಿಮಾ ರಂಗದಲ್ಲಿ ಓ.ಟಿ.ಟಿ (ಓವರ್ ದಿ ಏರ್ – ಅಥವಾ ಅಂತರ್ಜಾಲ ಪ್ರಸರಣ ) ವೇದಿಕೆಗಳು ಬಂದಿದ್ದು ವಿವೇಚನಾರಹಿತ ವೀಕ್ಷಣೆ ಸಾಧ್ಯವಾಗಿದೆ. ಸರ್ಕಾರವು ಇದರ ಬಗ್ಗೆ ಕಾನೂನು ರಚಿಸಬೇಕಾಗಿದೆ.
ಕರೋನಾ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಶಿಕ್ಷಣವು ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಮೊಬೈಲ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು ಈ ವಿಚಾರದಲ್ಲಿ ವ್ಯಾವಹಾರಿಕ ವಿವೇಚನೆ ಬೇಕಾಗಿದೆ. ಸರ್ಕಾರವು ಈ ವಿಚಾರಗಳ ಬಗ್ಗೆ ಕಾನೂನು ಮತ್ತು ಮಾರ್ಗದರ್ಶೀ ಸೂತ್ರಗಳನ್ನು ರಚಿಸಬೇಕಾಗಿದೆ.

ನಮಗೆ ಯಾವುದೇ ಭಾಷೆಯ ಬಗ್ಗೆಯೂ ದ್ವೇಷವಿಲ್ಲ. ಆದರೆ, ಸಾಧ್ಯವಾದಷ್ಟರ ಮಟ್ಟಿಗೆ ಮಾತೃಭಾಷೆ ಬಳಕೆಯನ್ನು ಪ್ರಯತ್ನಿಸಬಹುದೇ? ಹಸ್ತಾಕ್ಷರವನ್ನು ಮಾತೃಭಾಷೆಯಲ್ಲಿ ಮಾಡುವ ಪ್ರಯತ್ನ ಮಾಡಬಹುದೇ? ಸ್ವ ಭಾಷಾ,ಸ್ವ ಭೂಷ,ಸ್ವ ಭಜನ್,ಸ್ವ ಭೋಜನ, ನಮ್ಮ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ಮಾಡಬೇಕಿದೆ.

ಕುಟುಂಬ ಪ್ರಬೋಧನ್:

ಸರಿ-ತಪ್ಪುಗಳನ್ನೂ, ನೀತಿ-ಅನೀತಿಗಳನ್ನೂ ನಿಖರವಾಗಿ ಗುರುತಿಸುವ ವಾತಾವರಣವನ್ನು ನಮ್ಮ ಮನೆಗಳಲ್ಲಿ ನಿರ್ಮಿಸಬೇಕಾಗಿದೆ. ಸಾಮಾಜಿಕವಾಗಿ ಹಲವಾರು ಧಾರ್ಮಿಕ/ಸಾಮಾಜಿಕ ನೇತಾರರು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕುಟುಂಬಗಳಲ್ಲಿ ಸಹ ಈ ಚರ್ಚೆಯನ್ನು ಗಮನಿಸಿ ಸರಿ-ತಪ್ಪುಗಳ ಬಗ್ಗೆ ಕುಟುಂಬದ ಸದಸ್ಯರೆಲ್ಲರಲ್ಲಿ ಒಮ್ಮತ ಮೂಡುವ ಅಗತ್ಯ ಇದೆ.
ಕೋರೋನ ವಿರುದ್ಧ ಸಮರ

ಕರೋನಾದ ಎರಡನೇ ಅಲೆ ಅನಾಹುತಕಾರಿಯಾಗಿತ್ತು. ಆದರೆ, ಸಮಾಜ ಅದನ್ನು ಯಶಸ್ವಿಯಾಗಿ ಎದುರಿಸಿತು. ಈಗ ನಾವು ಬರಬಹುದಾದ ಮೂರನೇ ಅಲೆಯನ್ನು ನಿರ್ವಹಿಸಲು ಸಜ್ಜಾಗುತ್ತಿದ್ದೇವೆ.ಸಂಘದ ಸ್ವಯಂಸೇವಕರು ಮತ್ತು ಇತರ ಸ್ವಯಂಸೇವ ಸಂಸ್ಠೆಗಳು ಕರೋನಾ ವಿರುದ್ಧದ ದೇಶದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ
ಸರ್ಕಾರ ಮತ್ತು ಸಮಾಜದ ಪ್ರಯತ್ನಗಳಿಂದ ಕರೋನಾ ಅಲೆಗಳಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳುವ ಹಾದಿಯಲ್ಲಿ ಭಾರತ ಇದೆ.ಕೋವಿಡ್ ಸಾಂಕ್ರಾಮಿಕವು ನಮ್ಮ ಸ್ವ ಅಥವಾ ಸ್ವಾವಲಂಬನೆಯನ್ನು ಪುನಃ ಪಡೆಯಲು ಒಂದು ಅವಕಾಶವನ್ನೂ ಒದಗಿಸಿ ಕೊಟ್ಟಿದೆ.
ಆಯುರ್ವೇದದಂಥ ದೇಶೀಯ ವೈದ್ಯಕೀಯ ಪದ್ದತಿಗಳ ಮಹತ್ವವನ್ನು ಗಮನಿಸಿ, ಆರೋಗ್ಯ ವ್ಯವಸ್ಥೆಯನ್ನು ಪುನರ್ನಿಮಾಣ ಮಾಡುವ ಅಗತ್ಯ ಕೋವಿಡ್ ನಂತರದಲ್ಲಿ ನಮ್ಮ ಮುಂದೆ ಇದೆ.

ಆರೋಗ್ಯ: ಭಾರತೀಯ ದೃಷ್ಟಿಕೋನ

ಆಹಾರದ ಸಮತೋಲನತೆ, ದೈಹಿಕ ಮತ್ತುಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ವಿಶ್ರಾಂತಿ ಗಳು ಭಾರತೀಯ ದೃಷ್ಟಿಕೋನದಲ್ಲಿ ಸ್ವಾಸ್ಥ್ಯಕ್ಕೆ ಮೂಲ ಸೂತ್ರಗಳಾಗಿವೆ.
ಕೋವಿಡ್ ನಂತರದ ಸಂದರ್ಭದಲ್ಲಿ ಪರಿಸರ ಸ್ನೇಹೀ, ಸಂತುಲಿತ ಆರೋಗ್ಯದ ಪರಿಕಲ್ಪನೆಯನ್ನು ನಾವು ಪ್ರೋತ್ಸಾಹಿಸಬೇಕಾಗಿದೆ.
ಸಂಘದ ಸ್ವಯಂಸೇವಕರು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಜಲಸಂರಕ್ಷಣೆ, ಸಸ್ಯಗಳ ಅಭಿವೃದ್ಧಿ ಮತ್ತು ಪ್ಲಾಸ್ಟಿಕ್ ಬಳಕೆಯ ತ್ಯಜಿಸುವಿಕೆಯ ಬಗ್ಗೆ ಜನಾಭಿಪ್ರಾಯ ರೂಪಿಸುತ್ತಿದ್ದಾರೆ.

ಅರ್ಥಶಾಸ್ತ್ರ:

ಧಾರ್ಮಿಕ ನೆಲೆಯಲ್ಲಿ ಭಾರತದ ನೇತೃತ್ವವನ್ನು ಜಗತ್ತು ನಿರೀಕ್ಷಿಸುತ್ತಿದೆ.
ಧರ್ಮ, ಸಂಪನ್ಮೂಲಗಳು ನ್ಯಾಸವೆಂದು ಪರಿಗಣನೆ, ನಿಯಂತ್ರಿತ ಉಪಯೋಗ, ಎಲ್ಲರಿಗೂ ಉದ್ಯೋಗ, ಎಲ್ಲಾ ಹಿತಾಸಕ್ತಿಗಳ ಪರಿಗಣನೆ – ಇವು ಭಾರತೀಯ ದೃಷ್ಟಿಕೋನದ ಕೇಂದ್ರ ಬಿಂದು.ದೇಶೀಯ ಸಾಮಾಜಿಕ-ಆರ್ಥಿಕ ಮಾದರಿಯನ್ನು ನಮ್ಮ ‘ ಸ್ವ’ದ ಅರ್ಥೈಸುವಿಕೆಯ ಮೇಲೆ ಮಾಡಬೇಕಿದೆ.ಸಂಪನ್ಮೂಲಗಳ ಕೊರತೆಯನ್ನು ಉಂಟುಮಾಡುವ ಜನಸಂಖ್ಯೆಯ ಬೆಳವಣಿಗೆ ಮತ್ತು ಅಸಮತೋಲನವನ್ನು 2015 ರ ಅಖಿಲ ಭಾರತೀಯ ಕಾರ್ಯಕಾರೀ ಮಂಡಳಿಯ ನಿರ್ಣಯವು ಉದ್ದೇಶಿಸಿತ್ತು.

ಜನಸಂಖ್ಯೆ:

ಜನಸಂಖ್ಯಾ ಅಸಮತೋಲನವು ಸರ್ಕಾರಗಳನ್ನು ತುಷ್ಟೀಕರಣ ನೀತಿಯೆಡೆ ತಳ್ಳುತ್ತದೆ ಎಂಬುದನ್ನೂ, ಅದರಿಂದ ಕೆಲವು ಸಮುದಾಯಗಳು ತೊಂದರೆಗೆ ಒಳಗಾಗುತ್ತವೆ ಎಂಬುದನ್ನೂ ಬೆಂಗಾಲದ ಹಿಂದೂಗಳ ಉದಾಹರಣೆಯ ಮೂಲಕ ನೋಡಬಹುದಾಗಿದೆ.

ಭಯೋತ್ಪಾದನೆ:

ಇಸ್ಲಾಂ ಹೆಸರಿನಲ್ಲಿ ಅಸಹಿಷ್ಣುತೆ, ಹಿಂಸಾಚಾರ ಮತ್ತು ಭಯೋತ್ಪಾದನೆ ನಡೆಸುತ್ತಿರುವ ತಾಲೀಬಾನ್ ಗೆ ಪಾಕಿಸ್ತಾನ, ಟರ್ಕಿ ಮತ್ತು ಚೀನಾ ದೇಶಗಳು ಒಂದಾಗಿ ಬೆಂಬಲ ನೀಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಾಗರೀಕರು ಗುರುತಿಸಿ ಕೊಲ್ಲುತ್ತಿರುವ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದು ಅವರಿಗೆ ಇಡೀ ದೇಶದ ಬೆಂಬಲ ಬೇಕಾಗಿದೆ.

ಹಿಂದೂ ದೇವಾಲಯಗಳು:

ಹಿಂದೂ ದೇವಾಲಯಗಳ ಈಗಿನ ಸ್ಥಿತಿ ಸಮಾಜದ ಚಿಂತೆಗೆ ಕಾರಣವಾಗಿದೆ.ಹಲವಾರು ದೇವಾಲಯಗಳು, ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ದೇವಾಲಯಗಳು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಇದ್ದು ಅನೇಕ ರೀತಿಯ ಪಕ್ಷಪಾತಗಳಿಗೆ ಒಳಗಾಗಿವೆ.ದೇವಾಲಯಗಳ ಸ್ವತ್ತುಗಳು ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಆಗುತ್ತಿದ್ದು, ಧಾರ್ಮಿಕ ಶ್ರದ್ಧೆ ಇಲ್ಲದ ವ್ಯಕ್ತಿಗಳನ್ನು ದೇವಾಲಯಗಳ ಆಡಳಿತಮಂಡಳಿಗೆ ನೇಮಕಮಾಡಲಾಗುತ್ತಿದೆ. ಇವುಗಳು ನಿಲ್ಲಬೇಕು.
ಹಿಂದೂ ದೇವಾಲಯಗಳು ಸಾಮಾಜಿಕ-ಸಾಂಸ್ಕೃತಿಕ ಕೇಂದ್ರಗಳಾಗಿ ಪುನಃ ಪರಿಗಣಿಸಲ್ಪಟ್ಟು ಅವುಗಳ ಆಡಳಿತವನ್ನು ಭಕ್ತರಿಗೆ ಒಪ್ಪಿಸಬೇಕು.

ಏಕತೆ:

ಈಗಿನ ಸವಾಲಿನ ಪರಿಸ್ಥಿತಿಯಲ್ಲಿ, ಭಾರತದ ಸನಾತನ ರಾಷ್ಟ್ರದ ಸಾರ್ವಕಾಲೀನ ಸ್ವಭಾವದ ಬಗ್ಗೆ ಅರಿವು ಬೇಕಾಗಿದೆ.
ನಂಬಿಕೆ, ಪೂಜಾವಿಧಾನ ಮತ್ತಿತರ ವೈವಿಧ್ಯಗಳಿರುವ ಭಾರತೀಯ ಸಮಾಜವು ನಿರಂತರವಾದ ಒಂದೇ ನಾಗರೀಕತೆ, ಸಂಸ್ಕೃತಿ ಮತ್ತು ಚರಿತ್ರೆಯನ್ನು ಹೊಂದಿದೆ.
ವಿದೇಶೀ ಆಕ್ರಮಣಕಾರರು ಹಲವು ಮತಗಳನ್ನು ಭಾರತಕ್ಕೆ ತಂದರೂ, ಭಾರತೀಯರೆಲ್ಲರ ಪೂರ್ವಜರು ಒಬ್ಬರೇ ಆಗಿದ್ದಾರೆ.

ಸಂಘಟಿತ ಹಿಂದೂ ಸಮಾಜ:

ಸಂಘಟಿತ ಹಿಂದೂ ಸಮಾಜವು ಮಾತ್ರ ಭಾರತ ವಿರೋಧೀ ಶಕ್ತಿಗಳಿಂದ ರಕ್ಷಣೆ ಒದಗಿಸಬಲ್ಲುದು
ಜಾಗೃತ, ಒಗ್ಗೂಡಿದ, ಬಲಿಷ್ಠ ಮತ್ತು ಚಲನಶೀಲ ಸಮಾಜವೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿದೆ.
ನಮ್ಮನ್ನು ಒಂದುಮಾಡುವ ಪರಂಪರೆ, ನಮ್ಮ ಹೃದಯದಲ್ಲಿ ಪೂರ್ವಜರ ಸಾಧನೆಯಿಂದ ಉದಯಿಸುವ ಏಕತಾಭಾವ, ಮಾತೃಭೂಮಿಯ ಬಗ್ಗೆ ಶ್ರದ್ಧೆ ಇವುಗಳೇ ಹಿಂದೂ ಅಭಿವ್ಯಕ್ತಿಗೆ ಆಧಾರ.‌ಈ ಏಕತಾಭಾವವನ್ನು ಪ್ರಸರಿಸುವ ಪ್ರಕ್ರಿಯೆಯು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು. ಇದೇ ನಮ್ಮೆಲ್ಲರ ಗುರಿ. ಈ ಗುರಿಸಾಧನೆಗಾಗಿಯೇ, ಸಂಘವು ಕಳೆದ 96 ವರ್ಷಗಳಿಂದ ದುಡಿಯುತ್ತಿದೆ.

Related Articles

Comments (0)

Leave a Comment