ಕೈ ನಾಯಕರಿಗಿಂತ ಸಿಎಂ ಎಚ್ಡಿಕೆಗೆ ಹೆಚ್ಚಿನ ಆಧ್ಯತೆ ನೀಡಿದ ರಾಹುಲ್ ಗಾಂಧಿ
- by Suddi Team
- October 13, 2018
- 1033 Views

ಬೆಂಗಳೂರು:ಸಂವಾದ,ಸ್ವಾಗತ ಹೊರತುಪಡಿಸಿದರೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿಎಂ ಕುಮಾರಸ್ವಾಮಿಯವರ ಜೊತೆಯೇ ಹೆಚ್ಚಾಗಿ ಮಾತುಕತೆ ನಡೆಸಿದರು.ರಾಜ್ಯ ಕಾಂಗ್ರೆಸ್ ನಾಯಕರು ಬರಮಾಡಿಕೊಂಡಿದ್ದು,ಬೀಳ್ಕೊಟ್ಟಿದ್ದು ಬಿಟ್ರೆ ಅವರೊಂದಿಗೆ ಚರ್ಚಿಸಿದ್ದು ಅಷ್ಟಕಷ್ಟೇ.ಆದರೆ ಕಾಂಗ್ರೆಸ್ ನಾಯಕರಿಗೆ ಕೊಡಬೇಕಾದ ಸೂಚನೆಗಳನ್ನೆಲ್ಲ ರಾಹುಲ್ ಕೊಟ್ಟು ಹೋಗಿದ್ದಾರೆ.
ಹೌದು,ಫಿಕ್ಸ್ ಆಗಿದ್ದು ರಾಜ್ಯ ಕಾಂಗ್ರೆಸ್ ನಾಯಕರೊಂದಿಗಿನ ಸಭೆ ಆದರೆ ಹೆಚ್ಚು ಸಮಯ ಮಾತುಕತೆ ನಡೆಸಿದ್ದು ಸಿಎಂ ಎಚ್ಡಿಕೆ ಜೊತೆ,ಸ್ವಾಗತಕ್ಕೆ,ಬೀಳ್ಕೊಡುಗೆಗೆ ಸೀಮಿತರಾದ್ರಾ ಕೈ ನಾಯಕರು? ಸಿಎಂ ಕುಮಾರಸ್ವಾಮಿ ಸಲಹೆಗೇ ಮನ್ನಣೆ ಕೊಟ್ರಾ ರಾಹುಲ್ ಎನ್ನುವ ಪ್ರಶ್ನೆ ಎದ್ದಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದು ತಮ್ಮ ಅಹವಾಲು,ಅಭಿಪ್ರಾಯಗಳಿಗೆಲ್ಲ ಮಣೆ ಹಾಕುತ್ತಾರೆಂಬ ರಾಜ್ಯ ಕಾಂಗ್ರೆಸ್ ನಾಯಕರ ಭರವಸೆ ಹುಸಿಯಾಗಿದೆ.ರಾಹುಲ್ ಗಾಂಧಿಯವರನ್ನು ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡು ಕರೆದುಕೊಂಡು ಬಂದಿದ್ದು ಬಿಟ್ರೆ ರಾಜ್ಯ ನಾಯಕರಿಗೆ ರಾಹುಲ್ ಜೊತೆ ಚರ್ಚಿಸಲು ಹೆಚ್ಚಿನ ಅವಕಾಶ ಸಿಗಲೇ ಇಲ್ಲ.ರಾಹುಲ್ ಬೆಂಗಳೂರಿಗೆ ಆಗಮಿಸಿ ಮೊದಲು ಕುಮಾರಕೃಪಾ ಅತಿಥಿ ಗೃಹದಲ್ಲಿ ಫಿಕ್ಸ್ ಆಗಿದ್ದ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸುತ್ತಾರೆ ಎಂದು ಹೇಳಲಾಗಿತ್ತು.ಹಾಗೆಯೇ ರಾಹುಲ್ ಕುಮಾರಕೃಪಾ ಗೆಸ್ಟ್ ಹೌಸ್ ಗೆ ಆಗಮಿಸಿದ್ದೂ ನಿಜ.ಆದರೆ ಅಷ್ಟು ಹೊತ್ತಿಗೆ ಅಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಜರಾಗಿದ್ದರು.
ಕಾಂಗ್ರೆಸ್ ನಾಯಕರ ಜೊತೆ ಅಷ್ಟಾಗಿ ಚರ್ಚಿಸದ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿಯವರ ಬಳಿಯೇ ಹೆಚ್ಚು ಆತ್ಮೀಯವಾಗಿ, ಆದ್ಯತೆ ಮೇರೆಗೆ ಸಮಾಲೋಚನೆ ನಡೆಸಿದರು.ಇದ್ರಿಂದ ಕಾಂಗ್ರೆಸ್ ನಾಯಕರೇ ಅಚ್ಚರಿಗೊಂಡರು. ಮೈತ್ರಿ ಸರ್ಕಾರದಲ್ಲಿನ ವಿದ್ಯಮಾನಗಳು, ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಗಳು, ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ಸಿಗರಿಂದಲೇ ಆಗುತ್ತಿರುವ ಗೊಂದಲಗಳು, ಕೇಳಿಬರುತ್ತಿರುವ ಅಪಸ್ವರಗಳ ಬಗ್ಗೆ ಸಹಜವಾಗಿ ಎಚ್ಡಿಕೆ ಮತ್ತು ರಾಹುಲ್ ಮಾತುಕತೆ ವೇಳೆ ಪ್ರಸ್ತಾಪವಾಯಿತು. ಕುಮಾರಸ್ವಾಮಿಯವರು ಮಂಡಿಸಿದ ಅಭಿಪ್ರಾಯಗಳು, ಮಾತುಗಳಿಗೆಲ್ಲ ರಾಹುಲ್ ಗಾಂಧಿ ಓಕೆ ಅಂತ ಹೇಳಿ ಪೂರ್ಣ ಭರವಸೆ ಕೊಟ್ಟು ಖುಷಿಪಡಿಸಿದರು.ಏನೂ ಯೋಚನೆ ಮಾಡಬೇಡಿ ಅಂತ ತಮ್ಮ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಬ್ರೇಕ್ ಹಾಕುವ ಬಗ್ಗೆ ಅವರು ಅಭಯ ನೀಡಿದರು.ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎಂಬ ಸಲಹೆಗೂ ರಾಹುಲ್ ಗಾಂಧಿ ಅಸ್ತು ಎಂದಿದ್ದಾರೆ ಎಂಬ ಬಗ್ಗೆಯೂ ಈಗ ಗುಸು ಗುಸು ಆರಂಭವಾಗಿದೆ.
ಇನ್ನು ಬೈ ಎಲೆಕ್ಷನ್ ನಲ್ಲಿ ಯಾವುದೇ ಗೊಂದಲಗಳಾಗದಂತೆ ನಿಭಾಯಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ನಾಯಕರಿಗೆ ರಾಹುಲ್ ಸೂಚನೆ ನೀಡಿದ್ದಾರೆ..ಮೈತ್ರಿ ಸರ್ಕಾರದಲ್ಲೂ ಗೊಂದಲಗಳಾಗದಂತೆ ನೋಡಿಕೊಳ್ಳಬೇಕೆಂದು ಅವರು ತಾಕೀತು ಮಾಡಿದ್ದಾರೆ.ಇನ್ನು ಬೈ ಎಲೆಕ್ಷನ್ ಅಭ್ಯರ್ಥಿಗಳ ವಿಚಾರದಲ್ಲಿ ಚರ್ಚಿಸಿ,ಬೇಗ ಅಂತಿಮ ನಿರ್ಧಾರ ಕೈಗೊಳ್ಳುವಂತೆ ರಾಹುಲ್ ಸೂಚನೆ ನೀಡಿದ್ದಾರೆ..ಅಷ್ಟು ಬಿಟ್ಟರೆ ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿಯಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ನಿರೀಕ್ಷೆಗೆ ತಕ್ಕಂತೆ ಸ್ಪಂದನೆ ಸಿಗಲಿಲ್ಲ..ಆದ್ರೆ ಸಿಎಂ ಕುಮಾರಸ್ವಾಮಿಯವರೇ ಪ್ರಾಧಾನ್ಯತೆ ಪಡೆದುಕೊಂಡಿದ್ದು ಅನೇಕರು ಒಳಗೊಳಗೇ ಕುದಿಯುವಂತಾಗಿದೆ.
ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಂಪುಟ ವಿಸ್ತರಣೆ ಬೈ ಎಲೆಕ್ಷನ್ ಬಳಿಕವೇ ಆಗುವುದು ಬಹುತೇಕ ಖಚಿತವಾಗಿದೆ.ಇನ್ನು ನಿಗಮ ಮಂಡಳಿಗಳ ನೇಮಕವೂ ಜೆಡಿಎಸ್ ನಾಯಕರ ಅಭಿಪ್ರಾಯಂತೆಯೇ ಹೆಚ್ಚು ಕಡಿಮೆ ಫೈನಲ್ ಆಗಲಿದೆ.ಅಲ್ಲಿಗೆ ಈ ವಿಚಾರದಲ್ಲಿ ಕುಮಾರಸ್ವಾಮಿಯವರದ್ದೇ ಮೇಲುಗೈ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
Related Articles
Thank you for your comment. It is awaiting moderation.
Comments (0)