ಸಂತ್ರಸ್ತ ಕೊಡವರಿಗೆ ಅಗತ್ಯ ವಸ್ತುಗಳ ಪೂರೈಸಿ:ಹಳೆಯ ವಸ್ತು ಕೊಡಬೇಡಿ ಎನ್ನುವ ಕಳಕಳಿ ಇರಲಿ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಬಹಳಷ್ಟು ಅನಾಹುತ ಸಂಬಂಧಿಸಿದ್ದು ಕೆಲವೆಡೆ ಬಹುತೇಕ ಮಂದಿ ಮನೆ-ಮಠ, ಆಸ್ತಿ-ಪಾಸ್ತಿ ಎಲ್ಲಾವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕಾವೇರಿಯ ತವರು ನೆಲ ಇಂದೆಂದೂ ಕಂಡು ಕೇಳರಿಯದ ಜಲಪ್ರಳಯವನ್ನು ಕಂಡಿದೆ.ಇದನ್ನು ಕಂಡು ಮರುಗಿದವರು ಹಲವಾರು ಮಂದಿ.
ಜಿಲ್ಲೆ ಹೊರಜಿಲ್ಲೆ ಮಾತ್ರವಲ್ಲ, ಹೊರ ರಾಜ್ಯಗಳಿಂದ ಹಿಡಿದು ಹೊರದೇಶಗಳಿಂದ ಕೂಡ ಆರ್ಥಿಕ ನೆರವು ಬರುತ್ತಿದೆ.
ನಿಮಗೆಲ್ಲಾರಿಗೂ ಸುದ್ದಿಲೋಕ ನ್ಯೂಸ್ ಪೋರ್ಟಲ್ ವತಿಯಿಂದ ತುಂಬು ಹೃದಯದ ವಂದನೆಗಳು.

ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ. ಸಹಾಯ ಮಾಡಲ ಮನಸ್ಸು ಇರುವವರು ಇನ್ನೂ ಕಾಲ ಮಿಂಚಿಲ್ಲ ನೆರವು ನೀಡಿ ಕೊಡವ ಕೈ ಹಿಡಿಯಿರಿ.ವಸಂತನಗರದಲ್ಲಿ ಕೊಡವ ಸಮಾಜ ಇದ್ದು ಅಲ್ಲಿಗೆ ನೀವು ಕೊಡಬೇಕೆಂದಿರುವ ಬಟ್ಟೆ,ಬರೆ,ದವಸ ಧಾನ್ಯ, ಅಗತ್ಯ ವಸ್ತುಗಳು,ಹೊದಿಕೆ, ಔಷಧಿಗಳ ಸೇರಿದಂತೆ ಯಾವುದೇ ವಸ್ತುಗಳನ್ನು ತಲುಪಿಸಿದರೂ ಅವರು ಸರಿಯಾಗಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

ಇನ್ನು ಬಿಜೆಪಿ ಕಚೇರಿ ಮಾಧ್ಯಮಗಳ ಕಚೇರಿಗೆ ತಲುಪಿಸಿದರೂ ನಿಮ್ಮ ವಸ್ತುಗಳು ಸಂತ್ರಸ್ತರಿಗೆ ತಲುಪಲಿವೆ.ಸಾಧ್ಯವಾದಷ್ಟು ವಸ್ತುಗಳನ್ನೇ ನೀಡಿ ಹಣಕಾಸು ನೆರವು ಕಡಿಮೆ ಮಾಡಿ,ಹಣ ನೀಡಲೇಬೇಕು ಎಂದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೂಲಕ ತಲುಪಿಸಿ ಎನ್ನುವುದು ಸುದ್ದಿಲೋಕ ನ್ಯೂಸ್ ಪೋರ್ಟಲ್ ನ ಕಳಕಳಿಯ ಮನವಿ.

ಇನ್ನು ಕೆಲವು ಭಾಗದಲ್ಲಿ ಹಳೆಯ ಬಟ್ಟೆಗಳನ್ನು ಕಳುಹಿಸಿದ್ದು ಅದು ಹಾಗೆಯೇ ಬಿದ್ದಿದೆ.ಕೊಡಗಿನ ಜನ ಸ್ವಾಭಿಮಾನಿಗಳು ತಾವು ಕಷ್ಟದಲ್ಲಿದ್ದರು ಒಬ್ಬರು ಹಾಕಿದ ಬಟ್ಟೆಯನ್ನು ಮನೆಯ ಆಳು-ಕಾಳುಗಳಿಗೂ ಕೊಡುವುದಿಲ್ಲ ಹಾಗೆ ಅವರು ಬಳಸುವುದಿಲ್ಲ.ದಯವಿಟ್ಟು ಇಂತಹ ಬಟ್ಟೆಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿ. ಸಾದ್ಯವಾದರೆ ಕೇವಲ ಒಂದೆರಡು ಆದರು ಚಿಂತೆ ಇಲ್ಲ. ಕಡಿಮೆ ದರವಾದರು ಪರವಾಗಿಲ್ಲ ಹೊಸದನ್ನು ನೀಡಿ ಎನ್ನುವ ಮನವಿ ನಮ್ಮ‌ತಂಡದ ಪರವಾಗಿ ಮಾಡುತ್ತಿದ್ದೇವೆ.

ಸರಕು ಹೆಚ್ಚುವರಿಯಾದರೂ ಚಿಂತೆಯಿಲ್ಲ ಕಡಿಮೆಯಾಗಬಾರದು,ಹೆಚ್ಚಾದರೆ ನೆರೆಯ ಕೇರಳಕ್ಕೂ‌ ಕಳಿಸಬಹುದಾಗಿದ್ದು ನೀವು ಕಳಿಹಿಸುವ ವಸ್ತುಗಳು ವ್ಯರ್ಥವಾಗಲ್ಲ ಹಾಗಾಗಿ ಅಗತ್ಯ ವಸ್ತುಗಳು,ಔಷಧಿಗಳನ್ನು ನೀಡಿ ಸಂತ್ರಸ್ತರಿಗೆ ನೆರವು ನೀಡಿ ಎನ್ನುವ ಸಣ್ಣ ಮನವಿಯನ್ನು ಸುದ್ದಿಲೋಕ‌ ಮಾಡುತ್ತಿದೆ.

Related Articles

Comments (0)

Leave a Comment