ತಮಿಳುನಾಡಿನಲ್ಲಿ ಕರುಣಾಸ್ತಂಗತ: ಎಐಡಿಎಂಕೆ ನಂತರ ಡಿಎಂಕೆ ಅನಾಥ

ಚೆನ್ನೈ: ಡ್ರಾವಿಡ ಮುನ್ನೇಟ್ರಿ ಕಳಗಂ ಪಕ್ಷದ ಅಧಿನಾಯಕ ಕರುಣಾನಿಧಿ ನಿಧನರಾಗಿದ್ದಾರೆ.ಕಳೆದ 15 ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮಾಜಿ ಸಿಎಂ ಸಂಜೆ 6.10 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.

ಕರುಣಾನಿಧಿ ನಡೆದುಬಂದ ದಾರಿ:

  • ಜೂನ್ 3. 1924 ರಲ್ಲಿ ತಮಿಳುನಾಡಿನ ತಿರುಕ್ಕುವಲೈ ನಲ್ಲಿ ಜನನ
  • ತಿರು ಮುತುವೇಳರ್, ತಿರುಮತಿ ಅಂಜುಗಂ ದಂಪತಿ ಪುತ್ರ
  • ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ ಕರುಣಾನಿಧಿ
    ಕರುಣಾನಿಧಿಯ ಮೂಲ ಹೆಸರು ದಕ್ಷಿಣಾಮೂರ್ತಿ
  • ಪದ್ಮಾವತಿ , ದಯಾಳು , ರಾಜಥಿ ಯವರನ್ನ ವರಿಸಿದ್ದ ಎಂ ಕರುಣಾನಿಧಿ
  • ಎಂ. ಕೆ. ಮುತ್ತು, ಎಂ. ಕೆ. ಅಳಗಿರಿ, ಎಂ. ಕೆ. ಸ್ಟಾಲಿನ್,
    ಎಂ.ಕೆ ತಮಿಳರಸು, ಎಂ.ಕೆ ಸೆಲ್ವಿ, ಎಂ. ಕೆ ಕನಿಮೋಳಿ ಕರುಣಾನಿಧಿ ಮಕ್ಕಳು
  • 1957ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದ ಕರುಣಾನಿಧಿ
  • ಅಳಗಿರಿ ಸ್ವಾಮಿ ಭಾಷಣದಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ
  • 14ನೇ ವಯಸ್ಸಿಗೆ ರಾಜಕೀಯಕ್ಕೆ ಧುಮುಕಿದ್ದ ಎಂ.ಕರುಣಾನಿಧಿ
  • ತಮಿಳುನಾಡಿನ ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊದಲು ಸ್ಪರ್ಧೆ
  • ದಾಲ್ಮಿಯಾಪುರಂ ರೈಲ್ವೆ ನಿಲ್ದಾಣ ಹೆಸರು ಬದಲಾವಣೆ ಚಳುವಳಿಯಲ್ಲಿ ಜೈಲುವಾಸ
  • 1961ರಲ್ಲಿ ಡಿಎಂಕೆ ಪಕ್ಷದ ಕೋಶಾಧಿಕಾರಿಯಾಗಿ ಅಧಿಕಾರ
  • 1962 ರಲ್ಲಿ ರಾಜ್ಯ ವಿಧಾನಸಭೆಯ ವಿರೋಧಪಕ್ಷದ ಉಪನಾಯಕನಾಗಿ ಆಯ್ಕೆ
  • 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಇಲಾಖೆ ಮಂತ್ರಿ
    ಸ್ಪರ್ಧಿಸಿದ ಪ್ರತೀ ಚುನಾವಣಾ ಸೋಲನ್ನೇ ಕಾಣದ ನಾಯಕ
  • ಸಂಸ್ಥಾಪಕ ಸಿ. ಎನ್. ಅಣ್ಣಾದೊರೆ ನಿಧನ ನಂತರ ಡಿಎಂಕೆ ನಾಯಕತ್ವ
  • 1969ರಲ್ಲಿ ಮೊದಲ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆ
  • ತಮಿಳುನಾಡಿನ ಮುಖ್ಯಮಂತ್ರಿಯಾಗಿ 5 ಬಾರಿ ಅಧಿಕಾರ ಸ್ವೀಕಾರ
  • 1969-71, 1971-76, 1989-91,1996-2001, 2006-2011ರಲ್ಲಿ ಮುಖ್ಯಮಂತ್ರಿ
  • 2006ರಲ್ಲಿ ಜೆ.ಜಯಲಲಿತಾ ವಿರುದ್ದ ರೋಚಕ ಜಯ
  • ತಮಿಳುನಾಡು ವಿಧಾನಸಭೆಗೆ ದಾಖಲೆಯಾಗಿ 11 ಬಾರಿ ಆಯ್ಕೆ

Related Articles

Comments (0)

Leave a Comment