ಅಮೃತ ಕಾಲದಲ್ಲಿ ತಾಯ್ನಾಡಿಗೆ ಸೇವೆ ಸಲ್ಲಿಸೋಣ,ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸೋಣ ;ಪಿಯೂಷ್

ಬೆಂಗಳೂರು: ನಾವು ಪ್ರತಿಯೊಂದು ವಿಷಮ ಪರಿಸ್ಥಿತಿಯನ್ನು ಅವಕಾಶವಾಗಿ ಕಾಣುತ್ತೇವೆ, ಇದಕ್ಕೆ ನಮ್ಮ ಕೋವಿಡ್ ನಿಋವಹಣೆ ನಿದರ್ಶನ, ಈಗ 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ ನಮ್ಮ ಮುಂದಿದೆ ಅದಕ್ಕಾಗಿ ಅಮೃತ ಕಾಲದಲ್ಲಿ ತಾಯ್ನಾಡಿಗೆ ಸೇವೆ ಸಲ್ಲಿಸೋಣ, ಆತ್ಮನಿರ್ಭರ ಭಾರತ ನಿರ್ಮಿಸಿ, ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸೋಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್ ಸಂಗಮ್ 2025 ಜಾಗತಿಕ ನಾವೀನ್ಯತೆ ಮತ್ತು ಪೂರ್ವ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ದೂರದೃಷ್ಟಿ ಹಾಗೂ ಬದ್ಧತೆಗಳನ್ನು ಉಲ್ಲೇಖಿಸಿದರು.

ಭಾರತವನ್ನು 2047ರೊಳಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಕೋನವನ್ನು ತಿಳಿಸಿದ‌ ಸಚಿವರು, ಈ ದೃಷ್ಟಿಕೋನದಲ್ಲಿ ಐದು ಪ್ರಮುಖ ಬದ್ಧತೆಗಳಿವೆ: ಅಭಿವೃದ್ಧಿಶೀಲ ಭಾರತದ ಸಂಕಲ್ಪ, ವಸಾಹತು ಚಿಂತನೆಗೆ ವಿದಾಯ, ಇತಿಹಾಸ ಹಾಗೂ ಸಂಸ್ಕೃತಿಗೆ ಮೌಲ್ಯ, ರಾಷ್ಟ್ರದ ಏಕತೆ ಹಾಗೂ ಅಖಂಡತೆಗೆ ಬದ್ಧತೆ ಮತ್ತು ಸಮಗ್ರ ಪಾಲ್ಗೊಳ್ಳುವಿಕೆ ಎಂದರು.

ಸರ್ಕಾರದ ಮಹತ್ವದ ಯೋಜನೆಗಳನ್ನು ವಿವರಿಸಿದ ಕೇಂದ್ರ ಸಚಿವರು, ದಶಕದ ಹಿಂದೆ ಭಾರತ ಹಿಂದುಳಿದ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಆದರೆ, ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಹಲವು ಮಹತ್ವದ ಕಾರ್ಯಕ್ರಮಗಳ ಮೂಲಕ ಈ ತಡೆಗೋಡೆಯನ್ನು ದಾಟಿದರು. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್, ಲೋಕಲ್ ಟು ಗ್ಲೋಬಲ್, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಮಿಷನ್, ಜಲ್ ಜೀವನ್ ಮಿಷನ್ ಮುಂತಾದ ಕಾರ್ಯಕ್ರಮಗಳು ಒಂದು ಹಾರದ ಮುತ್ತುಗಳಿದ್ದಂತೆ – ಒಂದು ಮುತ್ತು ಕಡಿಮೆಯಾದರೂ, ಆ ಹಾರ ಸಂಪೂರ್ಣವಾಗದು. ಇವುಗಳನ್ನು ಸಮಾಜದ ತಳಭಾಗದ ವ್ಯಕ್ತಿಯವರೆಗೆ ತಲುಪಿಸಲು ಪ್ರಯತ್ನಿಸಲಾಗಿದೆ ಎಂದರು.

ಸ್ಥಿರತೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನದ ಅವಕಾಶ ನೀಡುವ ಗುರಿ, ಇವುಗಳ ಸಮ್ಮಿಲಿತ ಜೋಡಣೆಯೇ ಭಾರತದ ಬೆಳವಣಿಗೆಯ ಇಂದಿನ ಪಯಣವನ್ನು ವಿವರಿಸುತ್ತವೆ. ವಿಶ್ವದ 11ನೇ ಅತಿದೊಡ್ಡ ಜಿಡಿಪಿಯಿಂದ ಇಂದು (2025ರಲ್ಲಿಗೆ) 5ನೇ ಸ್ಥಾನಕ್ಕೇರಿದ ಭಾರತ, ಈ ವರ್ಷಾಂತ್ಯದೊಳಗೆ 4ನೇ ಸ್ಥಾನಕ್ಕೇರಲಿದೆ ಮತ್ತು 2027ರ ಹೊತ್ತಿಗೆ 3ನೇ ಅತಿದೊಡ್ಡ ಆರ್ಥಿಕತೆ ಆಗಬಹುದು ಎಂದು ಹೇಳಿದರು.

ನಾವೀನ್ಯತೆ ಬೆಳೆಸುವ ಸರ್ಕಾರದ ಬದ್ಧತೆ ವಿವರಿಸಿದ ಸಚಿವರು, ಹಿಂದಿನ ಬಜೆಟ್‌ನಲ್ಲಿ ಆಳವಾದ ತಂತ್ರಜ್ಞಾನ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ₹10,000 ಹಂಚಿಕೆ ಮಾಡಲಾಗಿತ್ತು ಎಂದು ಗಮನ ಸೆಳೆದರು. ನಾವೀನ್ಯತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಮತ್ತಷ್ಟು ಬೆಂಬಲಿಸಲು ಈಗ ಹೆಚ್ಚುವರಿಯಾಗಿ ₹10,000 ಕೋಟಿ ಮಂಜೂರು ಮಾಡಲಾಗಿದೆ. ಕಳೆದ ಕೇಂದ್ರ ಸಚಿವ ಸಂಪುಟ ಸಭೆಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ₹1 ಲಕ್ಷ ಕೋಟಿ ಅನುಮೋದಿಸಿದೆ. ತಾಂತ್ರಿಕ ನಾವೀನ್ಯತೆ ಹೆಚ್ಚಿಸಲು ಇದನ್ನು 50 ವರ್ಷಗಳಲ್ಲಿ ಶೂನ್ಯ ಬಡ್ಡಿದರದ ಸಾಲವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಭಾರತದ ಯುವಜನಾಂಗದ ಆಶಯಗಳು ಮತ್ತು ಇಚ್ಛೆಗಳು ಇಂದಿನ ವಿಶ್ವದೊಂದಿಗೆ ಹೋಲಿಸಿದರೆ ಹೆಚ್ಚು ಪ್ರಬಲವಾಗಿದೆ – ಇದು ನಾವೀನ್ಯತೆ, ಸಂಶೋಧನೆ, ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ, ತಂತ್ರಜ್ಞಾನ ಮತ್ತು ಭವಿಷ್ಯಯೋಗ್ಯ ಭಾರತವನ್ನು ರೂಪಿಸುತ್ತಿದೆ. ಎಐ, ಮೆಷಿನ್ ಕಲಿಕೆ, ದತ್ತಾಂಶಗಳ ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

ಕೋವಿಡ್ ಸಮಯದಲ್ಲಿ ಭಾರತ ಕಾರ್ಯಗಳನ್ನು ಉಲ್ಲೇಖಿಸಿದ ಸಚಿವರು, ನಾವು ಪ್ರತಿಯೊಂದು ವಿಷಮ ಪರಿಸ್ಥಿತಿಯನ್ನು ಅವಕಾಶವಾಗಿ ಕಾಣುತ್ತೇವೆ. ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್‌ಗಳ ಕೊರತೆಯಾಗಿತ್ತು. ಆದರೆ ಪ್ರಧಾನಮಂತ್ರಿ ಮೋದಿಯವರ ಮಾರ್ಗದರ್ಶನದಲ್ಲಿ ಡಿಆರ್‌ಡಿಒ, ಇಸ್ರೋ ಹಾಗೂ ಎಲ್ಲ ಕೈಗಾರಿಕೆಗಳು ಒಟ್ಟಾಗಿ ಕೆಲಸ ಮಾಡಿ, ಭಾರತವನ್ನು ಪಿಪಿಇ ಕಿಟ್ ಗಳ ಉತ್ಪಾದನೆಯಲ್ಲಿ ಎರಡನೇ ಅತಿದೊಡ್ಡ ದೇಶವನ್ನಾಗಿ ರೂಪಿಸಿದೆವು. ಅದನ್ನು ನಾವು ಇತರ ದೇಶಗಳಿಗೆ ಸಹ ಪೂರೈಸಿದೆವು. ಇದೇ ದಿಸೆಯಲ್ಲಿ ಭಾರತ 100 ಹಿಂದುಳಿದ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ಪೂರೈಸಿತು. ಇದಕ್ಕಾಗಿ ಇಂದಿಗೂ ಜಗತ್ತಿನ ಜನರು ಭಾರತಕ್ಕೆ ಕೃತಜ್ಞರಾಗಿದ್ದಾರೆ ಎಂದರು.

Related Articles

Comments (0)

Leave a Comment