ಕಾನೂನು ಸಮರದಲ್ಲಿ ಸಿಹಿಕಹಿ ಕಂಡ ಕೇಜ್ರಿ ಸರ್ಕಾರ: ಸುಪ್ರೀಂ ನೀಡಿದ‌ ತೀರ್ಪೇನು ಗೊತ್ತಾ?

ಫೋಟೋ ಕೃಪೆ-ಟ್ವಿಟ್ಟರ್

ನವದೆಹಲಿ:ದೆಹಲಿಯಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ ಆಡಳಿತ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು,ಪೂರ್ಣ ರಾಜ್ಯದ ಸ್ಥಾನಮಾನ ಕೇಳಿದ್ದ ಕೇಜ್ರಿವಾಲ್​ ಸರ್ಕಾರಕ್ಕೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿದೆ.

ದೆಹಲಿಗೆ ಸ್ವತಂತ್ರ ರಾಜ್ಯ ಸ್ಥಾನಮಾನ ಹಾಗು ಎಲ್​ಜಿ ಅಧಿಕಾರ ವ್ಯಾಪ್ತಿ ಪ್ರಶ್ನಿಸಿ ಆಪ್​ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ,
ಲೆಫ್ಟಿನೆಂಟ್​ ಗೌರ್ನರ್​ಗೆ ಯಾವುದೇ ಸ್ವತಂತ್ರ ಅಧಿಕಾರ ಇಲ್ಲ ಎಂದು ಮಹತ್ವದ ಆದೇಶ ನೀಡಿತು.ಸರ್ಕಾರದ ಸಂಪುಟದ ನಿರ್ಣಯಗಳಿಗೆ ಎಲ್​​ಜಿ ಮನ್ನಣೆಯನ್ನು ನೀಡಬೇಕು ಎಂದು ನ್ಯಾಯಪೀಠ ತಿಳಿಸಿತು.

ಆದರೆ ದೆಹಲಿಯನ್ನು ಸ್ವತಂತ್ರ ರಾಜ್ಯ ಎಂದು ಘೋಷಿಸಲು ಸಾಧ್ಯವಿಲ್ಲ,ಕೇಂದ್ರ-ರಾಜ್ಯ ಸರ್ಕಾರಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು,ಪಬ್ಲಿಕ್​​ ಆರ್ಡರ್, ಪೊಲೀಸ್​ ಮತ್ತು ಭೂಮಿ ವಿಚಾರದಲ್ಲಿ ರಾಜ್ಯಕ್ಕೆ ಅಧಿಕಾರವಿಲ್ಲ, ಸಂಘರ್ಷ ಇಲ್ಲದೇ ಸಂವಿಧಾನದ ಆಶಯದಂತೆ ಆಡಳಿತ ನಡೆಸಲು ಪೀಠ ಸೂಚನೆ ನೀಡಿತು.

ಇತ್ತೀಚೆಗೆ ಐಎಎಸ್ ಅಧಿಕಾರಿಗಳ ವಿಚಾರಕ್ಕೆ ಲೆಫ್ಟಿನೆಂಟ್​ ಗೌರ್ನರ್​​​ ಅನಿಲ್ ಬೈಜಾಲ್​​​​ ಮತ್ತು ಸಿಎಂ ಕೇಜ್ರಿವಾಲ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಗೌರ್ನರ್​​​ ಕಚೇರಿ ಮುಂದೆ ಕೇಜ್ರಿವಾಲ್​​ ಪ್ರತಿಭಟನಾ ಧರಣಿ ನಡೆಸಿದ್ದರು. ಅಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಈ ವಿಚಾರ ಮೋದಿ ವಿರುದ್ಧದ ಸಮರಕ್ಕೆ ಬಳಕೆಯಾಗಿತ್ತು.

Related Articles

Comments (0)

Leave a Comment