ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ,ಹಲವು ಮಹತ್ವದ ನಿರ್ಧಾರ ಪ್ರಕಟ

ಬೆಂಗಳೂರು,ಮೇ-28:ಐದು ರಾಜ್ಯಗಳ ವಿಮಾನ ಸಂಖ್ಯೆ ಕಡಿತ,ಪ್ರತಿ ಹೆಕ್ಟೇರ್ ಮೆಕ್ಕೆಜೋಳಕ್ಕೆ ಐದು ಸಾವಿರ ಪರಿಹಾರ,ಪೊಲೀಸ್ ನೇಮಕಾತಿ ವಯೋಮಿತಿ ಸಡಿಲಿಕೆ,ಎಲ್ಲಾ ಚಾಲಕರಿಗೆ ಪರಿಹಾರ ಸೇರಿದಂತೆ ಹಲವು ನಿರ್ಧಾರಗಳನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟ ಸಭೆಯು ಕೆಲ ಮಹತ್ವದ ನಿರ್ಧಾರ ಕೈಗೊಂಡಿತು.

ಸಂಪುಟದ ನಿರ್ಣಯಗಳು:

ಜೂನ್ 23ಕ್ಕೆ ವಿಧಾನ‌ಪರಿಷತ್ ನ ಐದು ನಾಮ ನಿರ್ದೇಶನ ಸ್ಥಾನಗಳು ಖಾಲಿಯಾಗಲಿದೆ.ನಾಮನಿರ್ದೇಶನ ಶಿಫಾರಸ್ಸು ಮಾಡುವ ಅಧಿಕಾರವನ್ನು ಸಿಎಂ ಗೆ ನೀಡಲಾಗಿದೆ

ಉಡುಪಿ,ಚಿಕ್ಕಮಗಳೂರು,ಚಾಮರಾಜನಗರ,ಮಂಡ್ಯ ಜಿಲ್ಲೆಗಳಲ್ಲಿ ಔಷಧ ದಾಸ್ತಾನು ಉಗ್ರಾಣ ನಿರ್ಮಾಣಕ್ಕೆ ನೀಡಲು ನಿರ್ಧರಿಸಲಾಗಿದೆ

ಚಿಕ್ಕಬಳ್ಳಾಪುರ ಜಿಲ್ಕೆ ಮಳ್ಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಮೀನನ್ನು ನಿಸಾರ್ ಅಹಮದ್ ಟ್ರಸ್ಟ್ ಗೆ ನೀಡಲು ನಿರ್ಧಾರಿಸಲಾಗಿದೆ

ಕರ್ನಾಟಕ ಸಹಕಾರಿ ಕೃಷಿ ಮತ್ರು ಗ್ರಾಮೀಣಾಭಿವೃದ್ದಿ ಬ್ಯಾಂಕ್ 1500ಕೋಟಿ ರೂ ಸಾಲ ಕ್ಜೆ ಖಾತ್ರಿ ನೀಡಲಾಗಿದೆ

ಪುತ್ತೂರು ತಾಲೂಕಿನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಾಣಕ್ಕೆ 15ಕೋಟಿ ರೂ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ

ಪೊಲೀಸ್ ನೇಮಕಾತಿ ವಯೋಮತಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.ಸಾಮಾನ್ಯ ವರ್ಗಕ್ಕೆ 30 ವರ್ಷಮತ್ತು ಮೀಸಲು ಕ್ಯಾಟಗರಿಗೆ 38 ವರ್ಷದವರಗೆ ಒನ್ ಟೈಮ್ ಸಡಿಲಿಕೆ ನೀಡಲಾಗಿದೆ.

ಕೋವಿಡ್ ಪ್ಯಾಕೇಜ್ ಮೆಕ್ಕೆ ಜೋಳ ಬೆಳೆದ ರೈತರಿಗೆ ಹೆಕ್ಟೇರ್ ಗೆ ಎಕರೆಗೆ ಐದು ಸಾವಿರ ರೂ.ನೀಡಲು ನಿರ್ಧರಿಸಲಾಗಿದೆ.ಕ್ಷೌರಿಕರು,ಆಟೋ ರಿಕ್ಷಾ,ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ ಪರಿಹಾರ ನೀಡಲು ವಿಧಿಸಲಾಗಿದ್ದ ಷರತ್ತುಗಳನ್ನು ಸಡಿಲಿಸಲಾಗಿದೆ.ಎಲ್ಲ ಚಾಲಕರಿಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ.

ಮಹಾರಾಷ್ಟ್ರ,ಗುಜರಾತ್,ತಮಿಳುನಾಡು,ಮಧ್ಯಪ್ರದೇಶ,ರಾಜಸ್ತಾನಗಳಿಂದ ಏರ್ ಟ್ರಾಫಿಕ್ ನಿರ್ಬಂಧ ಮಾಡಲು ನಿರ್ಧಾರ.ರಸ್ತೆ ಮೂಲಕವೂ ಸಹ ಈ ರಾಜ್ಯಗಳಿಂದ ಬರುವವರಿಗೆ ವಿಧಿಸುವ ನಿರ್ಬಂಧ ಮುಂದುವರಿಸಲಾಗಿದೆ

ಮಹಾರಾಷ್ಟ್ರದಿಂದ ಬರುವವರ‌ಲೋಡ್ ಹೆಚ್ಚಾಗುತ್ತಿದೆ.ವಿಶೇಷವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಕಡೆಯಿಂದ ಬರುವವರಿಗೆ ಹೆಚ್ಚು ನಿರ್ಬಂಧ ವಿಧಿಸಲಾಗುತ್ತಿದೆ.ಕಳ್ಳದಾರಿಯಿಂದ ರಾಜ್ಯ ಪ್ರವೇಶ ಮಾಡುವುದನ್ಬು ತಡೆಯಲು ಹೆಚ್ಚು ನಿಗಾ ವಹಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ.

ಹೊರ ರಾಜ್ಯಗಳಿಂದ ಬಂದಿರುವವರ ಟೆಸ್ಟ್ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮತ್ತೆ ಬೇರೆಯವರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ.ಬ್ಯಾಚ್ ಬೈ ಬ್ಯಾಚ್ ಕರೆಸಿಕೊಳ್ಳುತ್ತೇವೆ

ಬಿಕ್ಷಾಟನೆ ನಿರ್ಮೂಲನಾ ಕಾಯ್ದೆ ತಿದ್ದುಪಡಿ ಯನ್ನು ಸಚಿವ ಸಂಪುಟ ಸಭೆ ಅಂಗೀಕರಿಸಲಾಗಿದೆ

Related Articles

Comments (0)

Leave a Comment