ಕುರುಕ್ಷೇತ್ರದಲ್ಲಿ ದರ್ಶನ್ ಮೀರಿಸುತ್ತಾರಾ ನಿಖಿಲ್?
- by Suddi Team
- July 14, 2018
- 342 Views

ಬೆಂಗಳೂರು: ಕುರುಕ್ಷೇತ್ರ ಚಿತ್ರದ ಬಗ್ಗೆ ಇಡೀ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಜನತೆ ದೊಡ್ಡ ಭರವಸೆಯನ್ನು ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ನಿರ್ಮಾಪಕ ಮುನಿರತ್ನ ಕೂಡ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಬದಲಾದ ಸಮಯದಲ್ಲಿ ಪಾತ್ರಗಳ ಪ್ರಾಮುಖ್ಯತೆ ಕೂಡ ಬದಲಾಗಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ಸ್ಯಾಂಡಲ್ವುಡ್ನ ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರ. ಈ ಚಿತ್ರವನ್ನು ತಮ್ಮ 50ನೇ ಚಿತ್ರ ಎಂದು ಘೋಷಿಸಿದ್ದ ನಟ ದರ್ಶನ್ ಚಿತ್ರಕ್ಕಾಗಿ ಸಾಕಷ್ಟು ಎಫರ್ಟ್ ಹಾಕಿ ಕೆಲಸ ಮಾಡಿದ್ದರು. ನಿರ್ಮಾಪಕ ಮುನಿರತ್ನ ಕೂಡ ಚಿತ್ರದಲ್ಲಿ ದರ್ಶನ್ ಕೊಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾರಿಗೂ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಮುನಿರತ್ನ ಸಂಬಂಧ ಗಟ್ಟಿಯಾಗಿದ್ದು, ನಿಖಿಲ್ ಪಾತ್ರ ವಿಸ್ತರಣೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಚಿತ್ರದ ಮೊದಲಾರ್ಧದಲ್ಲಿ ದರ್ಶನ್ ಅಬ್ಬರಿಸಿದರೆ, ದ್ವಿತೀಯಾರ್ಧದಲ್ಲಿ ನಿಖಿಲ್ ಆವರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ದರ್ಶನ್ ಯಜಮಾನ ಚಿತ್ರವನ್ನು ತಮ್ಮ 50ನೇ ಚಿತ್ರ ಎಂದು ಘೋಷಿಸಲು ತಯಾರಿ ನಡೆಸಿದ್ದಾರೆ ಎಂಬುದು ಗಾಂಧಿ ನಗರದ ಲೇಟೆಸ್ಟ್ ನ್ಯೂಸ್.
Related Articles
Thank you for your comment. It is awaiting moderation.
Comments (0)