ದೇಶದಲ್ಲಿ ಕೆಲವರಿಂದ ಸುಳ್ಳು, ಗೊಂದಲ, ನಿರಾಶಾವಾದ ಸೃಷ್ಟಿ: ಪಿಎಂ ಮೋದಿ
- by Suddi Team
- June 23, 2018
- 137 Views
ರಾಜಗಢ: ಜನರು ಬಿಜೆಪಿ ಸರ್ಕಾರವನ್ನು ನಂಬುತ್ತಾರೆ. ಆದ್ರೆ, ಕೆಲವರು ಜನರಲ್ಲಿ ಸುಳ್ಳು ಹರಡುತ್ತಿದ್ದು, ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಮತ್ತು ನಿರಾಶಾವಾದವನ್ನು ಬಿತ್ತುತ್ತಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಮೋಹನ್ಪುರ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಜನರು ಬಿಜೆಪಿ ಸರ್ಕಾರವನ್ನು ನಂಬುತ್ತಾರೆ. ಸುಳ್ಳು ಹರಡುವವರು, ಗೊಂದಲ ಮತ್ತು ನಿರಾಶಾವಾದವನ್ನು ಬಿತ್ತುತ್ತಿರುವವರು ವಾಸ್ತವತೆಯಿಂದ ದೂರವಿದ್ದಾರೆ ಎಂದು ಹೇಳಿದರು.
ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಗುಣಗಾನ ಮಾಡಿದ ಮೋದಿ, ದೇಶದಲ್ಲಿ ಒಂದು ಕುಟುಂಬವನ್ನು ವೈಭವೀಕರಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಹಲವು ವ್ಯಕ್ತಿಗಳ ವ್ಯಕ್ತಿತ್ವ ವನ್ನು ಉದ್ದೇಶಪೂರ್ವಕ ಕಿರಿದಾಗಿಸುವ ಪ್ರಯತ್ನಗಳನ್ನು ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ದಶಕಗಳಿಂದ ದೇಶವನ್ನು ಆಳಿದ ಪಕ್ಷವು ಜನರ ಕಷ್ಟ ಮತ್ತು ಶ್ರಮವನ್ನು ಅರಿಯಲಿಲ್ಲ. ದೇಶದ ಬಲದ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಎಂದಿಗೂ ಹತಾಶೆ, ನಿರಾಶೆಯಿಂದ ಮಾತನಾಡಿಲ್ಲ. ನಾವು ಆತ್ಮವಿಶ್ವಾಸದಿಂದ ಮುಂದಕ್ಕೆ ಸಾಗುತ್ತೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
Related Articles
Thank you for your comment. It is awaiting moderation.
Comments (0)