ಗೌರಿ ಹತ್ಯೆ ಪ್ರಕರಣ: ಎಸ್ಐಟಿ ವಿರುದ್ಧ ಸಿಡಿದೆದ್ದ ಸನಾತನ ಸಂಸ್ಥೆ
- by Suddi Team
- June 22, 2018
- 206 Views
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಆರೋಪಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಹಿಂದೂ ಸಂಘಟನೆಗಳನ್ನ ಟಾರ್ಗೆಟ್ ಮಾಡಿ ಕೆಲ ಅಮಾಯಕರನ್ನ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಎಸ್ ಐಟಿ ವಿರುದ್ಧ ಸನಾತನ ಸಂಸ್ಥೆ ಆರೋಪಿಸಿದೆ.
ಎಸ್ ಐಟಿ ಅಧಿಕಾರಿಗಳ ವಿರುದ್ಧ ಪತ್ರಿಕಾ ಪ್ರಕಟಣೆಯಲ್ಲಿ ವಿರುದ್ಧ ಹರಿಹಾಯ್ದಿರೋ ಸನಾತನ ಸಂಸ್ಥೆ, ರಾಜಕೀಯ ಒತ್ತಡದಿಂದ ಎಸ್ ಐಟಿ ಅಧಿಕಾರಿಗಳು ಕಾನೂನು ವಿರುದ್ಧವಾಗಿ ಹಿಂದೂ ಸಂಘಟನೆಗಳ ಕೆಲ ಅಮಾಯಕರನ್ನ ಬಂಧಿಸಿದ್ದಾರೆ. ಮತ್ತು ಅವರಿಗೆ ಕಿರುಕುಳ ನೀಡಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ. ನಾವು ಇದನ್ನು ಇಲ್ಲಿಗೆ ಬಿಡಿವುದಿಲ್ಲ, ಎಸ್ ಐಟಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Related Articles
Thank you for your comment. It is awaiting moderation.


Comments (0)