ಮಂಡ್ಯ ರೈತರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ!

ಮಂಡ್ಯ:ಸಕ್ಕರೆ ನಾಡಿನ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.ಬಿತ್ತನೆ ಕಾರ್ಯ ಮುಗಿಸಿ ಬೆಳೆ ರಕ್ಷಣೆಗೆ ಕೆ ಆರ್ ಎಸ್ ಜಲಾಶಯದ ಕಡೆ ಮುಖ ಮಾಡಿದ್ದ ರೈತರ ಮೊಗದಲ್ಲಿ ಸರ್ಕಾರದ ಆದೇಶ ಸಂತಸ ತಂದಿದೆ.

ಹೌದು, ವಿಶ್ವೇಶ್ವರಯ್ಯ ನಾಲೆಗೆ ಕೆ.ಆರ್.ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. 3ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಇಲಾಖೆ ನೀಡಿದ್ದ ಸೂಚನೆಯನ್ವಯ ಸದ್ಯ 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ರಾತ್ರಿ 10ಗಂಟೆ ಬಳಿಕ ಮತ್ತೆ 1500ಕ್ಯೂಸೆಕ್ ಬಿಡುಗಡೆ ಮಾಡಲಿದೆ.

ಮಂಡ್ಯ ರೈತರ ಮನವಿ ಮೇರೆಗೆ ನಾಲೆಗಳಿಗೆ ನೀರು ಹರಿಸುವಂತೆ ಮಧ್ಯಾಹ್ನವಷ್ಟೇ ಸಿಎಂ ಸೂಚಿಸಿದ್ದರು.ಈ ಹಿನ್ನಲೆಯಲ್ಲಿ ನೀರಾವತಿ ಇಲಾಖೆ ನೀರು ಬಿಟ್ಟಿದ್ದು,
ರೈತರ ಬೆಳೆ ರಕ್ಷಣೆಗೆ ಮುಂದಾದ ಸರ್ಕಾರ ನಿಲುವಿಗೆ ಮಂಡ್ಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Comments (0)

Leave a Comment