ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಯಿ ಇಂದು ಪ್ರಮಾಣವಚನ ಸ್ವೀಕಾರ

ಬೆಂಗಳೂರು: ರಾಜ್ಯದ 20 ನೇ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಯಿ ಆಯ್ಕೆಯಾಗಿದ್ದು ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಪುತ್ರ ಆಗಿದ್ದವರೇ ಮುಖ್ಯಮಂತ್ರಿ ಆದ ಎರಡನೇ ಉದಾಹರಣೆಯಾಗುತ್ತಿದ್ದಾರೆ.

ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಬಸವರಾಜ ಬೊಮ್ಮಯಿ ಅವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಿದ್ದಾರೆ. ಕೇಂದ್ರದಿಂದ‌ ಬಂದಿರೋ ವೀಕ್ಷಕರು,ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ನಾಯಕರು ಸಮಾರಂಭದಲ್ಲಿ ಭಾಗಿಯಾಗ್ತಾರೆ.

ಬೊಮ್ಮಾಯಿಗೆ ಶುಭ ಕೋರಿದ ನಾಯಕರು

ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನನ್ನಾಗಿ ಬೊಮ್ಮಾಯಿ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು, ಯಡಿಯೂರಪ್ಪ ಸೂಚಿಸಿದ್ದ ಹೆಸ್ರಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು,ಯಡಿಯೂರಪ್ಪ ಬೆಂಬಲಿಗರ ಸಂಖ್ಯೆ ಅಧಿಕವಾಗಿರೋ ಶಾಸಕಾಂಗ ಸಭೆಯಲ್ಲೂ ಗೆಲುವು ಸಿಕ್ತು, ಅದರಂತೆ ಬೊಮ್ಮಾಯಿ ನೂತನ ನಾಯಕನಾಗಿ ಆಯ್ಕಯಾದ್ರು.

ಇಂದು ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸ್ತಾ ಇರೋ ಬೊಮ್ಮಾಯಿ ವಲಸಿಗರಾಗಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪಡಿತಾ ಇರೋ ಮೊದಲಿಗರಾಗಿದ್ದಾರೆ. ಜನತಾ ದಳದಲ್ಲಿ ಬೊಮ್ಮಾಯಿ ಅವ್ರನ್ನ ಬಿಜೆಪಿಗೆ ಕರೆತಂದಿದ್ದ ಯಡಿಯೂರಪ್ಪ ಈಗ ಮುಖ್ಯಮಂತ್ರಿ ಆಗಿಯೂ ಮಾಡಿದ್ದು, ಜನತಾ ಪರಿವಾರದಿಂದ ಬಂದವರಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಮುಖ್ಯಮಂತ್ರಿ ಸ್ಥಾನ ನೀಡ್ದಂತಾಗಿದೆ. ಕಾಂಗ್ರೆಸ್ ನಲ್ಲಿ ಸಿದ್ರಾಮಯ್ಯ ಬಿಜೆಪಿಯಲ್ಲಿ ಬೊಮ್ಮಾಯಿಗೆ ಈ ಅದೃಷ್ಟ ಸಿಕ್ದಂತಾಗಿದೆ.

Related Articles

Comments (0)

Leave a Comment