- ದೇಶ
- ಮುಖ್ಯ ಮಾಹಿತಿ
- ರಾಜಕೀಯ
- ರಾಜ್ಯ
- Like this post: 0
ರಾಜೀನಾಮೆ ವಿಷಯ: ದೇರ್ ಈಸ್ ನೋ ಟ್ರುತ್ ಇನ್ ಇಟ್ ಅಂದ್ರು ಸಿಎಂ
- by Suddi Team
- July 17, 2021
- 151 Views
ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ, ದೇರ್ ಈಸ್ ನೋ ಟ್ರುತ್ ಇನ್ ಇಟ್ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಿಎಂ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರ, ಮುಂದಿನ ತಿಂಗಳ ಮೊದಲ ವಾರ ಮತ್ತೆ ದೆಹಲಿಗೆ ಬಂದು ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಕಿದ್ದೇನೆ ಎಂದ್ರು. ರಾಜೀನಾಮೆ ಕೊಡುವ ಸುದ್ದಿ ಬಗ್ಗೆ ಮತ್ತೆ ಮತ್ತೆ ಬಂದ ಪ್ರಶ್ನೆಗೆ ನಗುಮೊಗದಲ್ಲೇ ನಾಟ್ ಅಟ್ ಆಲ್ ನಾಟ್ ಅಟ್ ಆಲ್, ನಾಟ್ ಅಟ್ ಆಲ್ ಎಂದ್ರು.
ಮೇಕೆದಾಟು ಯೋಜನೆ ಕುರಿತು ತಮಿಳುನಾಡಿಗೆ ಮತ್ತೆ ಮನವರಿಕೆ ಮಾಡಿಕೊಡೋ ಪ್ರಯತ್ನ ಮಾಡ್ತೀವಿ, ಯೋಜನೆ ಯಾವ ಕಾರಣಕ್ಕೂ ನಿಲ್ಲಲ್ಲ, ಇಂದು ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ನಂತರ ರಾಜ್ಯಕ್ಕೆ ತೆರಳುತ್ತೇನೆ ಎಂದ್ರು.
Related Articles
Thank you for your comment. It is awaiting moderation.


Comments (0)