ಗಮನಕ್ಕೆ ತಾರದೆ ಪದಾಧಿಕಾರಿ ನೇಮಿಸಿದರೆ ಶಿಸ್ತುಕ್ರಮ: ಡಿಕೆಶಿ ಎಚ್ಚರಿಕೆ
- by Suddi Team
- July 12, 2020
- 53 Views

ಬೆಂಗಳೂರು: ಗಮನಕ್ಕೆ ತಾರದೆ ಪದಾಧಿಕಾರಿಗಳ ನೇಮಕ,ಪಟ್ಟಿ ಬದಲಾವಣೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿವಿಧ ಘಟಕಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ವಿರುದ್ಧ ಅಸಮಧಾನ ಸ್ಪೋಟಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓವರ್ ಟೇಕ್ ಮಾಡಿದ್ದ ಬಾದರ್ಲಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬಸನಗೌಡ ಬಾದರ್ಲಿ ಕಾರ್ಯವೈಖರಿಗೆ ಅಸಮಧಾನ ಆಕ್ರೋಶ ವ್ಯಕ್ತವಾಗಿದೆ.
ಬಾದರ್ಲಿ ನಡವಳಿಕೆಗೆ ಯೂತ್ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಟೋಟಗೊಂಡಿದ್ದು,ಯೂತ್ ಕಾಂಗ್ರೆಸ್ ಅಧ್ಯಕ್ಷನ ಬದಲಾವಣೆಗೆ ಕೈ ಯುವ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಯೂತ್ ಕಾಂಗ್ರೆಸ್ ವಾಟ್ಸ್ ಆಫ್ ಗ್ರೂಫ್ ನಲ್ಲಿ ಭಾರೀ ಚರ್ಚೆ ನಡೆದಿದೆ. ನನ್ನನ್ನ ಬದಲಾವಣೆ ಮಾಡುತ್ತಾರೆ ಅನ್ನೋದು ಸುಳ್ಳು ಹಾಗೇನಾದರೂ ಆದಲ್ಲಿ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಮಾರ್ಯಾದೆ ಹಾಳಾಗುತ್ತಿದೆ ನಾವೇಕೆ ಯೂತ್ ಕಾಂಗ್ರೆಸ್ ನಲ್ಲಿ ಕೆಲಸ ಮಾಡಬೇಕು ಎಂದು ಬಾದರ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆ ಶಿವಕುಮಾರ್ ರಂಗಪ್ರವೇಶ ಮಾಡಿದ್ದು,ಬಾದರ್ಲಿಗೆ ಬಿಸಿ ಮುಟ್ಟಿಸಿದ್ದಾರೆ. ಇಂತಹ ನಡವಳಿಕ ಸಹಿಸಲ್ಲ, ಪದಾಧಿಕಾರಿಗಳ ನೇಮಕ ಹೈಕಮಾಂಡ್ ನಿಂದ ಆಗಿರುತ್ತೆ ಹಾಗಾಗಿ ಪಕ್ಷದ ಗಮನಕ್ಕೆ ತಾರದೆ ನೇಮಕ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತೆ ಅಂತಾ ಎಚ್ಚರಿಕೆ ನೀಡಿ ಅಸಮಧಾನಕ್ಕೆ ಬ್ರೇಕ್ ಹಾಕಿದ್ದಾರೆ.
Related Articles
Thank you for your comment. It is awaiting moderation.
Comments (0)