ಸರ್ಕಾರಕ್ಕೆ ನೂರು ದಿನ, ನೂರಾರು ಸವಾಲುಗಳು!
- by Suddi Team
- August 30, 2018
- 190 Views

ಬೆಂಗಳೂರು: ಅನಿರೀಕ್ಷೀತವಾಗಿ ರಾಜ್ಯದ ಗದ್ದುಗೆಗೆ ಏರಿದ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಸರ್ಕಾರ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ರಾಷ್ಟ್ರ ಮಟ್ಟದಲ್ಲೂ ಎಡ ಪಕ್ಷಗಳ ಮಹಾತ್ವಾಕಾಂಕ್ಷೆಗೆ ಹಾಲೇರೆದಿತ್ತು. ಇದೀಗ ಹಲವು ಸವಾಲುಗಳ ನಡುವೆಯೂ ಮೈತ್ರಿ ಸರ್ಕಾರ ಶತದಿನದ ಸಂಭ್ರಮದಲ್ಲಿದೆ.
ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು 37 ಸ್ಥಾನ ಪಡೆದ ಜೆಡಿಎಸ್ ಹಾಗೂ 78 ಸ್ಥಾನ ಪಡೆದ ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಸರ್ಕಾರ ರಚನೆ ಮಾಡಿದವು. ಹಲವು ಆತಂಕಗಳು, ಬಿಜೆಪಿಯ ಪ್ರಬಲ ವಿರೋಧದ ನಡುವೆಯೂ ಮೈತ್ರಿ ಸರ್ಕಾರ ಇದೀಗ ಶತದಿನ ಪೂರೈಸಿದೆ.
ಮೈತ್ರಿ ಸರ್ಕಾರದ ಸಾಧನೆಗಳು:
* ಹಲವು ಗೊಂದಲಗಳ ನಡುವೆಯೂ ಮೈತ್ರಿ ಸರ್ಕಾರ ರಾಜ್ಯದ ರೈತರು ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್ ಗಳಲ್ಲಿ ಮಾಡಿರುವ ಬೆಳೆ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
* ಲೇವಾದೇವಿದಾರರು, ಗಿರಿವಿದಾರರಿಂದ ಬಡವರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಖಾಸಗಿ ಸಾಲ ಮನ್ನಾ ಮಾಡಿದೆ.
* ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ಹೊಸ ಬಜೆಟ್ ಮಂಡನೆ ಮಾಡಿದೆ.
ಸರ್ಕಾರ ಎದುರುಸಿದ ಸವಾಲುಗಳು
ಕಾಂಗ್ರೆಸ್ ನಾಯಕರ ಅಸಹಕಾರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ವಿರೋಧ ಪಕ್ಷ ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷದ ಕೆಲ ನಾಯಕರೇ ದೊಡ್ಡ ವಿರೋಧ ಪಕ್ಷವಾಗಿ ಪರಿಣಮಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ಸೂತ್ರದಾರ ಸಚಿವ ಡಿ.ಕೆ.ಶಿವಕುಮಾರ್ ಪದೇ ಪದೇ ರಾಜ್ಯದ ಜನರಿಗೆ ಹೇಳುತ್ತಿದ್ದರೂ ಕೂಡ, ಕಾಂಗ್ರೆಸ್ನ ಹಲವು ನಾಯಕರು ಮೈತ್ರಿ ಸರ್ಕಾರದ ಕುರಿತು ಗೊಂದಲಗಳನ್ನು ಸೃಷ್ಠಿ ಮಾಡುತ್ತಲೇ ಬರುತ್ತಿದ್ದಾರೆ. ಈ ಗೊಂದಲಗಳಿಗೆ ತೆರೆ ಎಳೆಯುವುದೇ ಮೈತ್ರಿ ಸರ್ಕಾರಕ್ಕೆ ದೊಡ್ಡ ಸವಾಲಗಿದೆ.
ಪ್ರಕೃತಿಯ ಮುನಿಸು: ಕೊಡಗು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಸಾಕಷ್ಟು ಅನಾಹುತಗಳಾಗಿದ್ದು, ಕೊಡಗಿನ ಮರು ನಿರ್ಮಾಣವೇ ಆಗಬೇಕಿದೆ. ಮತ್ತೊಂದೆಡೆ ರಾಜ್ಯದ ಹಲವು ಜಿಲ್ಲೆಗಳು ಅನಾವೃಷ್ಠಿಯಿಂದ ತೊಂದರೆಗೀಡಾಗಿವೆ.
ಮುಖ್ಯಮಂತ್ರಿಗಳ ವಿವಾಧಿತ ಹೇಳಿಕೆಗಳು: ಉತ್ತರ ಕರ್ನಾಟಕದ ಜನರು ಜೆಡಿಎಸ್ ಗೆ ಮತ ಹಾಕಿಲ್ಲ ಹೀಗಾಗಿ ಮೈತ್ರಿ ಸರ್ಕಾರ ರಚನೆಯಾಗಿದೆ. ಮೈತ್ರಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಜೆಡಿಎಸ್ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುವುದು ಹೇಗೆ ಎಂಬ ಸಿಎಂ ಹೇಳಿಕೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಸೃಷ್ಠಿಯಾಗುವಂತೆ ಮಾಡಿತು.
ಮೈತ್ರಿ ಸರ್ಕಾರದ ಮುಂದಿರುವ ಸವಾಲುಗಳು
* ಜೆಡಿಎಸ್-ಕಾಂಗ್ರೆಸ್ ನಾಯಕರ ಮಧ್ಯೆ ಸಮನ್ವಯ ಕಾಯ್ದುಕೊಳ್ಳುವುದು.
* ಚುನಾವಣೆ ವೇಳೆ ಕಾಂಗ್ರೆಸ್, ಜೆಡಿಎಸ್ ಮಾಡಿರುವ ಘೋಷಣೆಗಳನ್ನು ಈಡೇರಿಸುವುದು.
* ಶತಮಾನದ ಮಹಾಮಳೆಗೆ ಕುಸಿದಿರುವ ಕೊಡಗನ್ನು ಮರು ನಿರ್ಮಾಣ ಮಾಡುವುದು.
* ಬರದಿಂದ ಬಳಲುತ್ತಿರುವ ಜಿಲ್ಲೆಗಳಲ್ಲಿ ಭರವಸೆ ಮೂಡಿಸುವುದು.
* ಆಡಳಿತ ವರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು.
ಒಟ್ಟಾರೆಯಾಗಿ ಮೈತ್ರಿ ಸರ್ಕಾರ ಹಲವು ಗೊಂದಲಗಳು ಆತಂಕಗಳ ನಡುವೆಯೂ ನೂರು ದಿನಗಳನ್ನು ಪೂರೈಸಿ ಜನರಲ್ಲಿ ಹಲವು ನಿರೀಕ್ಷೆ ಮೂಡಿಸಿದೆ.
Related Articles
Thank you for your comment. It is awaiting moderation.
Comments (0)