ನಟ ಸುದೀಪ್ ವಿರುದ್ಧ ವಂಚನೆ ಆರೋಪದಡಿ ದೂರು!

ಬೆಂಗಳೂರು: ಕಾಫೀ ಎಸ್ಟೇಟ್​ನಲ್ಲಿ ಶೂಟಿಂಗ್ ಮಾಡುವುದಾಗಿ ಅದನ್ನು ಬಳಸಿಕೊಂಡು ಬಾಡಿಗೆ ಹಣ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ನಟ, ನಿರ್ಮಾಪಕ ಕಿಚ್ಚ ಸುದೀಪ್​ ವಿರುದ್ಧ ದೂರು ದಾಖಲಾಗಿದೆ.

ವಂಚಿತ ದೀಪಕ್​ ಎಂಬುವರು ಫಿಲ್ಮ್ ಚೇಂಬರ್​ನಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಸುದೀಪ್​ ನಿರ್ಮಾಣದಲ್ಲಿ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿದ್ದ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ಕಾಫೀ ಎಸ್ಟೇಟ್​ನ್ನು ಬಾಡಿಗೆಗೆ ಪಡೆಯಲಾಗಿತ್ತು. ಅಲ್ಲದೆ, 500 ವರ್ಷದ ಹಿಂದಿನ ಮನೆಯನ್ನು ಶೂಟಿಂಗ್​ಗೆ ಬಳಸಿಕೊಂಡಿದ್ದರು.

ಆದರೆ, ಶೂಟಿಂಗ್​ ಮಾಡಿಕೊಂಡು ಯಾವುದೇ ಬಾಡಿಗೆ ನೀಡಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವಂಚಿತ ದೀಪಕ್​ ಚಲನಚಿತ್ರ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ. ಅಧ್ಯಕ್ಷರಾದ ಚಿನ್ನೇಗೌಡರು ದೂರು ಸ್ವೀಕರಿಸಿದ್ದಾರೆ.

Related Articles

Comments (0)

Leave a Comment