ಜಲಾಶಯಗಳ ಭರ್ತಿಯಿಂದ ನೆಮ್ಮದಿ ಮೂಡಿದೆ: ಸಿಎಂ ಕುಮಾರಸ್ವಾಮಿ
- by Suddi Team
- July 20, 2018
- 166 Views
ಮೈಸೂರು: ಹಳೇ ಮೈಸೂರು ಭಾಗದ ನಾಲ್ಕು ಜಲಾಶಯಗಳ ಭರ್ತಿಯಿಂದ ರೈತರ ಬಾಳಲ್ಲಿ ಹಸಿರು ಮೂಡುತ್ತಿರುವುದು ಖುಷಿ ತಂದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಭಾಗಮಂಡಲ ಭಗಂಡೇಶ್ವರ ದೇವಾಲಯ ಮತ್ತು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಕೂಡ ಹಾಜರಿದ್ದರು.
ಪೂಜೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನೀರಿನ ಕೊರತೆಯಿಂದ ತಮಿಳುನಾಡು ಮತ್ತು ರಾಜ್ಯದ ನಡುವೆ ವ್ಯಾಜ್ಯಗಳು ಏರ್ಪಟ್ಟು ರಾಜ್ಯದ ರೈತರು ಭತ್ತ ಬೆಳೆಯದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ನಾಲ್ಕೂ ಜಲಾಶಯಗಳ ಭರ್ತಿಯಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
Related Articles
Thank you for your comment. It is awaiting moderation.


Comments (0)