ಸಿಎಂ ಭಾವನಾತ್ಮಕ ಜೀವಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿಗಳು ಆಡಳಿತ ನಡೆಸಲು ನಾವೆಲ್ಲಾ ಬಿಡೋಣ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರ ಬ್ಯಾಟ್ ಮಾಡಿದ ಬ್ಯಾಟಿಂಗ್ ಮಾಡಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರನ್ನು ನಾನು ಚಿಕ್ಕಂದಿನಿಂದ ನೋಡಿದ್ದೇವೆ. ಅವರು ಒಂಥರಾ ಭಾವನಾತ್ಮಕ ಜೀವಿ, ಸಾಕಷ್ಟು ವಿಚಾರಗಳಲ್ಲಿ ಅವರು ಕಣ್ಣೀರು ಹಾಕಿದ್ದಿದೆ. ಚುನಾವಣೆ ವೇಳೆ, ಯಾರೋ ಅಂಗವಿಕಲನನ್ನ ನೋಡಿ ಅವರು ಕಣ್ಣೀರು ಹಾಕಿದ್ದಿದೆ. ಅವರು ಸ್ವಲ್ಪ ಭಾವನಾತ್ಮಕ ಜೀವಿ. ಮುಖ್ಯಮಂತ್ರಿಗಳು ಸಂತೋಷವಾಗಿದ್ರೆ ರಾಜ್ಯ ಸಂತೋಷವಾಗಿರುತ್ತೆ. ನಾವೆಲ್ಲ ಸೇರಿ ಸರ್ಕಾರವನ್ನ ಬಲಪಡಿಸಬೇಕಿದೆ ಎಂದರು.

ಕೆ.ಬಿ.ಕೋಳಿವಾಡ ಸೇರಿದಂತೆ ಕಾಂಗ್ರೆಸ್ ಮುಖಂಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡೋದು ಬೇಡ. ಈಗ ಹೇಳಿಕೆ ನೀಡಿದ್ದಾಗಿದೆ, ಮುಂದೆ ಯಾರೂ ನೀಡೋದು ಬೇಡ ಬಿಜೆಪಿ ಅವ್ರು ಸ್ವಲ್ಪ ಅರ್ಜೆಂಟ್ ನಲ್ಲಿದ್ದಾರೆ. ಅಷ್ಟೊಂದು ಆತುರ ಬೇಡ ದಕ್ಷಿಣ ಭಾರತದ ಯಾವುದೋ ಮೂಲೆಯಲ್ಲಿ ಆಡಳಿತ ಮಾಡ್ತಿದ್ದೇವೆ ಸ್ವಲ್ಪ ದಿನ ನಮ್ಮ ಆಡಳಿತ ನೋಡಿ,
ಆತುರ ಪಡಬೇಡಿ ಎಂದು ಹೇಳಿದರು.

ಇಂದು ರಾತ್ರಿ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಭೇಟಿ ಬಗ್ಗೆ ನಿರ್ಧಾರವಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಎಂದರು.

Related Articles

Comments (0)

Leave a Comment