ಎಚ್ಡಿಕೆ ಮಂಡಿಸಿದ್ದು ಅಣ್ ತಮ್ಮಾಸ್ ಬಜೆಟ್:ಬಿಎಸ್ವೈ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಹಾಸನ,ರಾಮನಗರ ಜಿಲ್ಲೆಯ ಅಣ್ ತಮ್ಮರ ಬಜೆಟ್ ಎಂದು ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಬಜೆಟ್ ಬಳಿಕ ವಿಧಾನಸೌಧದಲ್ಲಿ ಮಾತನಾಡಿಸ ಬಿಎಸ್ವೈ, ಮಾತಿಗೆ ತಪ್ಪಿದ, ರೈತ ಸಮುದಾಯಕ್ಕೆ ಮೋಸ ಮಾಡಿದ ಬಜೆಟ್ ಇದಾಗಿದ.34 ಸಾವಿರ ಕೋಟಿ ಸಾಲ ಮನ್ನಾ ಮಾಡಿರೋದಾಗಿ ಹೇಳಿದ್ದಾರೆ‌ ಇದಕ್ಕೆ ಹಣವನ್ನ ಎಲ್ಲಿಂದ ಹೊಂದಾಣಿಕೆ ಮಾಡಿದ್ದೀರಾ? ನೀವು ಮಾಡಿರೋದು ಸುಸ್ತಿ ಸಾಲ ಮನ್ನಾ.ಖುಣ ಮುಕ್ತ ಪತ್ರ ನೀಡಲು 6500 ಕೋಟಿ ಮೀಸಲು ಅಂತ ಹೇಳಿದ್ದೀರಾ?‌ ರೈತರ ಪೂರ್ಣ ಸಾಲ ಮನ್ನಾ ಎಲ್ಲಿ ಆಗಿದೆ ಹೇಳಿ ಎಂದರು.

ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ ರಾಜಕೀಯ ದೊಂಬರಾಟ ಮಾಡ್ತಿದ್ದಾರೆ ಶ್ರೀ ಸಾಮಾನ್ಯ ಬದುಕೋದು ಹೇಗೆ? ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಉತ್ತರ ಕರ್ನಾಟಕ ಜನರಿಗೆ ಅನ್ಯಾಯವಾಗಿದೆ ಇದು ಅಣ್ಣ ತಮ್ಮಂದಿರ ಬಜೆಟ್ ಕೇವಲ ಹಾಸನ, ರಾಮನಗರಕ್ಕೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದರು.

ಬಜೆಟ್ ಮೇಲೆ ಚರ್ಚೆ ಆಗುತ್ತೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದಾರೆ ಬಜೆಟ್ ನೋಡಿ ಮರುಳಾಗಬೇಡಿ ಅನ್ನಭಾಗ್ಯ ಯೋಜನೆ ಏಳು ಕೆಜಿಯಿಂದ ಐದು ಕೆಜಿಗೆ ಇಳಿಸಿದ್ದೀರಾ ಗರ್ಭಿಣಕಯರಿಗೆ ಆರು ಸಾವಿರ ಕೊಡೋದಾಗಿ ಹೇಳಿ ಸಾವಿರಕ್ಕೆ ಇಳಿಸಿದ್ದೀರಾ ಇದೆಲ್ಲಾ ನಿಮ್ಮ ಸಾಧನೆನಾ ನೇಕಾರರ ಸಾಲ ಮನ್ನಾ ಬಗ್ಗೆ ಶಬ್ದ ಇಲ್ಲ
ಸ್ವಸಹಾಯ ಸಂಘ, ಮೀನುಗಾರರ ಸಾಲ ಮನ್ನಾ ಬಗ್ಗೆ ಮಾತನಾಡಿಲ್ಲ ಇದನ್ನ ನಾವು ಬಜೆಟ್ ಅಂತ ಕರೆಯಬೇಕಾ
ಯಾವುದೇ ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್ ಇದಲ್ಲ 34 ಸಾವಿರ ಕೋಟಿ ಎಲ್ಲಿಂದ ಹೊಂದಾಣಿಕೆ ಮಾಡ್ತಾರೆ ಅನ್ನೋದನ್ನ ಹೇಳಿಲ್ಲ ಸಿದ್ದರಾಮಯ್ಯ ಬಜೆಟ್ ಜೊತೆ ಹೊಂದಾಣಿಕೆ ಮಾಡಲ್ಲ 12 ನೇ ತಾರೀಖಿನ ಮೇಲೆ ಬಜೆಟ್ ಮುಗಿಯುತ್ತೆ ನಂತರ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ ಎಂದ್ರು.

Related Articles

Comments (0)

Leave a Comment