ಪ್ರವಾಹದಲ್ಲಿ ಸಿಲುಕಿದ ಮಾನಸ ಸರೋವರ ಯಾತ್ರಿಗಳ ಮಾಹಿತಿ ಬೇಕಾ?:ಈ ನಂಬರ್ ಗೆ ಫೋನ್ ಮಾಡಿ
- by Suddi Team
- July 3, 2018
- 89 Views
ಬೆಂಗಳೂರು:ಮಾನಸ ಸರೋವರ ಯಾತ್ರೆ ಕೈಗೊಂಡು ಹವಾಮಾನ ವೈಪರಿತ್ಯದಿಂದ ಸಿಮಿಕೋಟ್ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳು ಅಥವಾ ಕುಟುಂಬದವರು ಮಾಹಿತಿಗಾಗಿ ಭಾರತೀಯ ರಾಯಭಾರಿ ಪ್ರಣವ್ ಗಣೇಶ್ ಅವರನ್ನ +977 985-1107006 ನಂಬರ್ ಮೂಲಕ ಸಂಪರ್ಕಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಹವಮಾನ ವೈಪರೀತ್ಯದಿಂದಾಗಿ ನೇಪಾಳದ ಸಿಮಿಕೋಟ್ನಲ್ಲಿ ಸಿಲುಕಿರುವ ಭಾರತೀಯ ಸಂತ್ರಸ್ತ ಯಾತ್ರರ್ಥಿಗಳೊಂದಿಗೆ, ಕಠ್ಮುಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರ ಭದ್ರತೆ ಹಾಗೂ ಆಹಾರದ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತಿದೆ.
ಅಲ್ಲದೇ ಸಿಮಿಕೋಟ್ನಲ್ಲಿ ಸಿಲುಕಿರುವ ಹಿರಿಯ ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು, ನೇಪಾಳ ಸರ್ಕಾರವನ್ನ ಒತ್ತಾಯಿಸುತ್ತಿದ್ದಾರೆ.
ಹವಮಾನ ವೈಪರೀತ್ಯದಿಂದಾಗಿ ಸಿಮಿಕೋಟ್ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನ ಸ್ಥಳಾಂತರಿಸಲು ಪರ್ಯಾಯ ಮಾರ್ಗ ಹುಡುಕಿದರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಲಿಕಾಪ್ಟರ್ ಮೂಲಕ ಯಾತ್ರಾರ್ಥಿಗಳನ್ನ ರಕ್ಷಿಸುವ ಚಿಂತನೆಯಲ್ಲಿ ಇದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಯಾತ್ರಿಗಳ ಬಂಧುಗಳು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ,ಯಾತ್ರಿಗಳ ರಕ್ಷಣೆ ಮಾಡುವ ಕ್ರಮ ಕೈಗೊಳ್ಳಲಾಗಿದೆ.ಯಾತ್ರಿಗಳ ಕುಟುಂಬದವರು ಮಾಹಿತಿ ಬೇಕಾದಲ್ಲಿ ಅಥವಾ ಮಾಹಿತಿ ನೀಡಬೇಕಾದಲ್ಲಿ ಭಾರತೀಯ ರಾಯಭಾರಿ ಪ್ರಣವ್ ಗಣೇಶ್ ಅವರನ್ನ ಸಂಪರ್ಕಿಸಿ ಎಂದು ದೂರವಾಣಿ ಸಂಖ್ಯೆ +977 985-1107006 ನಂಬರ್ ಅನ್ನು ನೀಡಿದೆ.
Related Articles
Thank you for your comment. It is awaiting moderation.
Comments (0)