ಪ್ರವಾಹದಲ್ಲಿ ಸಿಲುಕಿದ ಮಾನಸ ಸರೋವರ ಯಾತ್ರಿಗಳ ಮಾಹಿತಿ ಬೇಕಾ?:ಈ ನಂಬರ್ ಗೆ ಫೋನ್ ಮಾಡಿ

ಬೆಂಗಳೂರು:ಮಾನಸ ಸರೋವರ ಯಾತ್ರೆ ಕೈಗೊಂಡು ಹವಾಮಾನ ವೈಪರಿತ್ಯದಿಂದ ಸಿಮಿಕೋಟ್​ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳು ಅಥವಾ ಕುಟುಂಬದವರು ಮಾಹಿತಿಗಾಗಿ ಭಾರತೀಯ ರಾಯಭಾರಿ ಪ್ರಣವ್​ ಗಣೇಶ್​ ಅವರನ್ನ +977 985-1107006 ನಂಬರ್ ಮೂಲಕ ಸಂಪರ್ಕಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಹವಮಾನ ವೈಪರೀತ್ಯದಿಂದಾಗಿ ನೇಪಾಳದ ಸಿಮಿಕೋಟ್​ನಲ್ಲಿ ಸಿಲುಕಿರುವ ಭಾರತೀಯ ಸಂತ್ರಸ್ತ ಯಾತ್ರರ್ಥಿಗಳೊಂದಿಗೆ, ಕಠ್ಮುಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರ ಭದ್ರತೆ ಹಾಗೂ ಆಹಾರದ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತಿದೆ.
ಅಲ್ಲದೇ ಸಿಮಿಕೋಟ್​ನಲ್ಲಿ ಸಿಲುಕಿರುವ ಹಿರಿಯ ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು, ನೇಪಾಳ ಸರ್ಕಾರವನ್ನ ಒತ್ತಾಯಿಸುತ್ತಿದ್ದಾರೆ.

ಹವಮಾನ ವೈಪರೀತ್ಯದಿಂದಾಗಿ ಸಿಮಿಕೋಟ್​ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನ ಸ್ಥಳಾಂತರಿಸಲು ಪರ್ಯಾಯ ಮಾರ್ಗ ಹುಡುಕಿದರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಲಿಕಾಪ್ಟರ್​ ಮೂಲಕ ಯಾತ್ರಾರ್ಥಿಗಳನ್ನ ರಕ್ಷಿಸುವ ಚಿಂತನೆಯಲ್ಲಿ ಇದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಯಾತ್ರಿಗಳ ಬಂಧುಗಳು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ,ಯಾತ್ರಿಗಳ ರಕ್ಷಣೆ ಮಾಡುವ ಕ್ರಮ ಕೈಗೊಳ್ಳಲಾಗಿದೆ.ಯಾತ್ರಿಗಳ ಕುಟುಂಬದವರು ಮಾಹಿತಿ ಬೇಕಾದಲ್ಲಿ ಅಥವಾ ಮಾಹಿತಿ ನೀಡಬೇಕಾದಲ್ಲಿ ಭಾರತೀಯ ರಾಯಭಾರಿ ಪ್ರಣವ್​ ಗಣೇಶ್​ ಅವರನ್ನ ಸಂಪರ್ಕಿಸಿ ಎಂದು ದೂರವಾಣಿ ಸಂಖ್ಯೆ +977 985-1107006 ನಂಬರ್ ಅನ್ನು ನೀಡಿದೆ.

Related Articles

Comments (0)

Leave a Comment