ಕಾವೇರಿ ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ಸುಸೂತ್ರ,ಸಕಲ ಮಾಹಿತಿ ಕ್ರೂಡೀಕರಣ:ಮಸೂದ್ ಹುಸೈನ್

ನವದೆಹಲಿ:ಮೊದಲ ಸಭೆ ಸೌಹಾರ್ದಯುತವಾಗಿ ನಡೆದಿದ್ದು ಪ್ರಾಧಿಕಾರ ರಚನೆ ಹಾಗೂ ಕ್ರೀಯಾಯೋಜನೆಯ ಬಗ್ಗೆ ಚರ್ಚೆ ಯಾಗಿದೆ ಸಿಬ್ಬಂದಿ ಹಾಗೂ ಕಚೇರಿ ನಿರ್ಮಾಣ ಕುರಿತು ಮಾತುಕತೆಯಾಗಿದೆ ಎಲ್ಲ ಜಲಾಶಯಗಳ ಒಳ ಹರಿವು ಹರಿವು ಮಾಹಿತಿ ಪಡೆಯಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೈನ್ ಹೇಳಿದ್ದಾರೆ.

ಶಕ್ತಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಯನಾಡಿದ ಹುಸೈನ್,ಜುಲೈ ತಿಂಗಳ ಬಾಕಿ‌ ಇರುವ ನೀರನ್ನು ಬಿಡಬೇಕು ಅಂತಾ ಪ್ರಾಧಿಕಾರ ತಿರ್ಮಾನ ಮಾಡಿದೆ ಈ ಬಾರಿ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಿದೆ ಎಷ್ಟು ಪ್ರಮಾಣದ ನೀರು ಬಿಡಬೇಕು ಎಂಬುದು ಅಂತಿಮ ಆಗಿಲ್ಲ ಜೂನ್ ತಿಂಗಳ‌ಮಳೆ ಆಧರಿಸಿ ನೀರು ಬಿಡಲು ತಿರ್ಮಾನ ಕೈಗೊಳ್ಳಲಾಗುತ್ತದೆ. ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಕರ್ನಾಟಕ 34 ಟಿಎಂಸಿ ನೀರು ಬಿಡಬೇಕು. ಆದರೆ ಸುಪ್ರೀಂಕೋರ್ಟ್ 14 ಟಿಎಂಸಿ ನೀರು ಕಡಿಮೆ ಮಾಡಿ 177ಕ್ಕೆ ನಿಗದಿ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪಿಗೆ ಅನ್ವಯವಾಗ್ಗಿ ಜುಲೈ ತಿಂಗಳಲ್ಲಿ ಹರಿಸಬೇಕಾದ ನೀರಿನ ಪ್ರಮಾಣ ನಿಗದಿ ಮಾಡಲಾಗುವುದು ಎಂದ್ರು.

ಜೂನ್ ತಿಂಗಳಲ್ಲಿ ತಮಿಳುನಾಡಿಗೆ ಒಂದು ಟಿಎಂಸಿಯಷ್ಟು ನೀರು ಬಿಡಲಾಗಿದೆ ಮಳೆ ಸಂದರ್ಭದಲ್ಲಿ ಹೆಚ್ಚುವರಿ ಒಂದು ಟಿಎಂಸಿ ‌ನೀರು‌ ಕೊಟ್ಟಿದೆ ಸದ್ಯ ನೀಡಬೇಕಾದ 31 ಟಿಎಂಸಿಯಲ್ಲಿ ಒಂದು ಟಿಎಂಸಿ ಕಡಿತಗೊಳಿಸಿ ಸುಮಾರು 30 ಟಿಎಂಸಿ ಯಷ್ಟು ನೀರನ್ನು ತಮಿಳುನಾಡಿಗೆ ಕೊಡಬೇಕು ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿದ ಬಳಿಕ ತಮಿಳುನಾಡು‌ ಪುದುಚೇರಿಗೆ ನೀರು ಹರಿಸಬೇಕು 7 ಟಿಎಂಸಿ ನೀರನ್ನು ‌ತ.ನಾಡು ಪುದುಚೇರಿಗೆ ನೀಡಬೇಕು ಎಂದ್ರು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ಚಟುವಟಿಕೆ ಹಾಗೂ ನಿಯಮಾವಳಿಗಳನ್ನು ರೂಪಿಸುವುದು
ಕಾವೇರಿ ನದಿಯ ಎಂಟು ಜಲಾಶಯಗಳ ನಿರ್ವಹಣೆ ಕುರಿತು ಚರ್ಚೆ ನಡೆಸುವುದು, ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಿಯೋಜನೆ ಸಿಬ್ಬಂದಿಯ ಸೇವಾ ನಿಯಮಗಳು ರೂಪಿಸುವುದು. ಪ್ರಾಧಿಕಾರದ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ಕ್ರೂಡಿಕರಣ,ಪ್ರಾಧಿಕಾರದ ಕಚೇರಿಗಾಗಿ ಸ್ಥಳ ನಿಯೋಜನೆ ಪೀಠೋಪಕರಣ ವ್ಯವಸ್ಥೆ ಕಂಪ್ಯೂಟರ್ ಮತ್ತಿತರ ಅಧುನಿಕ ಸಲಕರಣೆಗಳ ವ್ಯವಸ್ಥೆ ಮೂಲ ಸೌಲಭ್ಯ ಹಾಗೂ ವಾಹನ ವ್ಯವಸ್ಥೆ ಕುರಿತು, ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನ ನೀಡುವ ಬಗ್ಗೆ ಚರ್ಚೆ ನದಿ ವ್ಯಾಪ್ತಿಯಲ್ಲಿರುವ ಕೇರಳದ ಬಾಣಾಸುರ ಸಾಗರ , ರಾಜ್ಯದ ಹೇಮಾವತಿ, ಕಬಿನಿ, ಹಾರಂಗಿ, ಕೃಷ್ಣ ರಾಜ ಸಾಗರ, ತಮಿಳುನಾಡಿನ ಭವಾನಿ, ಅಮರಾವತಿ ಮತ್ತು ಮೆಟ್ಟೂರು ಜಲಾಶಯಗಳ ಒಳ ಮತ್ತು ಹೊರ ಹರಿವಿನ ಮಾಹಿತಿ ಸಂಗ್ರಹ ನೀರಿನ ಬಳಕೆ ಸಂಗ್ರಹ ಸಾಮರ್ಥ್ಯ, ಮಳೆಯ ಪ್ರಮಾಣ, ಬೆಳೆಯ ವ್ಯಾಪ್ತಿ, ಮತ್ತು ಸ್ಥಳೀಯ ಹಾಗೂ ಕೈಗಾರಿಕಾ ಅಗತ್ಯತೆ ಈ ಸಮಿತಿಯಿಂದಲೇ ಕಾರ್ಯ ನಿರ್ವಹಿಸುವ ಕುರಿತು, ಜೂನ್ 1ರಿಂದ ಜೂನ್ 30 ರವರೆಗೆ ಸಂಗ್ರಹವಾಗಿರುವ ನೀರಿನ ಪ್ರಮಾಣದ ಮಾಹಿತಿ ಈ ಅವಧಿಯಲ್ಲಿ ಮಳೆಯ ಕೊರತೆ ಇದ್ದಲ್ಲಿ ಆ ಬಗ್ಗೆ ಚರ್ಚೆ ಹಾಗು ಮಾಸಿಕ 10 ದಿನಗಳಂತೆ ಮೂರು ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದ್ರು.

Related Articles

Comments (0)

Leave a Comment