ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ನೀಡಿದ ಪರಮೇಶ್ವರ್!
- by Suddi Team
- August 11, 2018
- 62 Views

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಶನಿವಾರ ಹಜ್ ಭವನಕ್ಕೆ ತೆರಳಿ ಹಜ್ ಯಾತ್ರಾರ್ಥಿ ಗಳನ್ನು ಬೀಳ್ಕೊಡುಗೆ ನೀಡಿದರು.
ಬಳಿಕ ಮಾತನಾಡಿದ ಅವರು, ಹಿಂದೆಲ್ಲಾ ಹಜ್ ಯಾತ್ರಾರ್ಥಿಗಳಿಗೆ ಇಷ್ಟು ಸುವ್ಯವಸ್ಥೆಗಳಿರಲಿಲ್ಲ.ಸಾಕಷ್ಟು ಸಮಸ್ಯೆ ಇತ್ತು. ಈಗ ಸರಕಾರದ ವತಿಯಿಂದ ಸುಸಜ್ಜಿತ ವ್ಯವಸ್ಥೆ ನಿರ್ಮಿಸಿಕೊಟ್ಟಿದ್ದೇವೆ. ಒಂದೇ ಸೂರಿನಡಿ ಪಾಸ್ಪೋರ್ಟ್, ಸೆಕ್ಯೂರಿಟಿ ಚೆಕ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಹಜ್ ಸಚಿವ ಜಮೀರ್ ಅವರು ಹೆಚ್ಚು ಆಸಕ್ತಿ ವಹಿಸಿ ಯಾತ್ರಾರ್ಥಿಗಳನ್ನು ಬೀಳ್ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಜ್ ಯಾತ್ರಾರ್ಥಿಗಳಿಗೆ ಭೋಜನದ ವ್ಯವಸ್ಥೆ ನಿರ್ಮಿಸಲಾಗಿತ್ತು. ಅಲ್ಪಾಸಂಖ್ಯಾತ, ಹಜ್ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಕೂಡ ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)