ಗೌರಿ ಲಂಕೇಶ್​ ಕೊಲೆ ಪ್ರಕರಣ: ಕೆ.ಟಿ. ನವೀನ್​ ಕುಮಾರ್​ ಅಲಿಯಾಸ್ ಹೊಟ್ಟೆ ಮಂಜು ಹೇಳಿಕೆ ಕೊಟ್ಟಿದ್ದೇನು?

 

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ಬಲಾದ ಕೆ.ಟಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಬಂಧನವಾಗಿದೆ.ಪ್ರಕರಣ ಸಂಬಂಧ ಆರೋಪಿ ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಪೊಲೀಸರಿಗೆ ನೀಡಿದ ಆತನ ಹೇಳಿಕೆಗಳ ಎಕ್ಸ್ ಕ್ಲ್ಯೂಸಿವ್ ಡಿಟೈಲ್ಸ್ ಇಲ್ಲಿದೆ.

ನಾನು ಹುಟ್ಟಿದಾಗಿನಿಂದಲೂ ಕದಲೂರಿನ ತಂದೆ, ತಾಯಿ ನಾಗಮ್ಮ ಹಾಗೂ ಅಣ್ಣ ತಿಮ್ಮೇಗೌಡ ಜೊತೆಗೆ ವಾಸವಾಗಿದ್ದೆ. 1ನೇ ತರಗತಿಯಿಂದ ಪಿಯುಸಿಯವರೆಗೂ ಕೆ.ಎಂ ದೊಡ್ಡಿಯ ಭಾರತಿ ಕಾಲೇಜಿನಲ್ಲಿ ಓದ್ದದ್ದು, ಬಿ,ಕಾಂ ಪದವಿ ಪಡೆಯಲು ಮೈಸೂರಿನ ಜೆಎಸ್​ಎಸ್​ ಕಾಲೇಜಿಗೆ ಸೇರಿಕೊಂಡೆ. ಆ ವೇಳೆ ನನ್ನ ಬಾಲ್ಯದ ಸ್ನೇಹಿತ ಗಣೇಶ್​ ಅನಂತ ಪದ್ಮನಾಭನ್​ ಹಾಗೂ ಇತರರು ನನಗೆ ಪರಿಚಯವಾದ್ರು. ಆ ಪೈಕಿ ಗಣೇಶ್​ ಜೊತೆ ನಿಕಟ ಸಂಪರ್ಕವಿತ್ತು. ನಾನು ಆತನ ಮನಗೆ ಆಗಾಗ್ಗೆ ಹೋಗುತ್ತಿದೆ. ನಾವಿಬ್ಬರೂ ಮಲೈಮಹದೇಶ್ವರ, ಶಬರಮಲೈ ದೇವಸ್ಥಾನಕ್ಕೆ ಹೋಗುತ್ತೀದ್ದೇವು. ನಮ್ಮಿಬ್ಬರ ವಿಚಾರಗಳು ಒಂದೆ ಆಗಿತ್ತು ಜೊತೆಗೆ ಹಿಂದೂ ಧರ್ಮದ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಬಿ.ಕಾಂ ಅರ್ದಕ್ಕೆ ಬಿಟ್ಟು ಮಂಗಳೂರಿನ ಕಾರ್ಕಳಕ್ಕೆ ಹೋಗಿ ಭಜರಂಗದಳ ಸಂಘಟನೆ ಸೇರಿಕೊಂಡ ಕಾರ್ಯಗಳಲ್ಲಿ ತೊಡಗಿಸಿಕೊಂಡೆನು.

ನಾನು ಸ್ವಲ್ಪ ದಿನ ಸಂಘಟನೆಯಲ್ಲಿ ಕೆಲಸ ಮಾಡಿ ಅಲ್ಲಿದ್ದ ಕೆಲಸ ಬಿಟ್ಟು ಮದ್ದೂರಿನಗೆ ಬಂದು ಡ್ರಿಪ್​ ಇರಿಗೇಷನ್​ ಡೀಲರ್​ ಶೀಪ್​ ಕೆಲಸ ಮಾಡಿ ಬಂದ ಲಾಭವನ್ನು ಪೈನಾನ್ಸ್​ ವ್ಯವಹಾರ ಶುರು ಮಾಡಿದೆ. ಇದರ ಜೊತೆಗೆ ಹಿಂದೂಪರ ಸಂಘಟನೆಗಳೊಂದಿಗೆ ಒಡನಾಟ ಇ್ಟುಕೊಂಡಿದ್ದೆ.  ಅದರಲ್ಲೂ ಬಜರಂಗದಳದ ಪ್ರಮೊದ ಮುತಾಲಿಕ್​, ಮಂಗಳೂರಿನ ಪ್ರಭಾಕರ ಶೆಟ್ಟಿ ಮುಂತಾದವರು ಪರಿಚಯವಾಗಿದ್ದರು. ಅಬವರು ಮದ್ದೂರಿನ ಸಂಘಟನೆಯನ್ನು ಬೆಳೆಸುವಂತೆ ತಿಳಿಸಿದ್ದರು. ನಂತರ ಪ್ರಮೋದ್​ ಮುತಾಲಿಕ್​ ಭಜರಂಗ ದಳವನ್ನು ಬಿಟ್ಟು ಶ್ರೀರಾಮ ಸೇನೆ ಸಂಘಟನೆ ಪ್ರಾರಂಭಿಸಿದರು. ಮದ್ದೂರಿನಲ್ಲಿ ಆ ಸಂಘಟನೆಗಾಗಿ ನಾನು ಜನರ ಸೇರಿಸಿದ್ದೆ., ಆಮದ್ಯೆ ನಾನು ಚಿತ್ರದುರ್ಗ ಮೂಲದ ಮರಾಠಿ ಹುಡುಗಿ ರೂಪಾಳನ್ನು ಪ್ರೀತಿ ಮಾಡಿ ಮದುವೆ ಆದೆ. ಆಕೆ ಬೀರೂರಿನ ಮೆಸ್ಕಾಂನಲ್ಲಿ ಡಿ ಗ್ರೂಪ್​ ನಲ್ಲಿ ಕೆಲಸ ಮಾಡುತ್ತಿದ್ದಳು.  ನಾನು ಹಿಂದೂ ಧರ್ಮದ ಬಗ್ಗೆ ತೀವ್ರ ಕಾಳಜಿ ಹೊಂದಿದ್ದು ರಾಜ್ಯ ಮತ್ತು ಅಂತರರಾಜ್ಯ ಹಿಂದೂಪರ ಸಂಘಟನೆಗಳ ಜೊತೆ ನಿಕಟ ಸಂಕರ್ಪ ಹೊಂದಿದ್ದೆ. ಕೇಲಮೊಮ್ಮೆ ಸಭೆ ಸಮಾಂಭಗಳಲ್ಲಿ ಜನರನ್ನು ಸೇರಿಸಿಸುವ ಕಾರ್ಯದಲ್ಲಿ ತೊಡಗಿದ್ದೆ. ನಾನು ನನ್ನ ಮುಂದಾಳತ್ವದಲ್ಲಿ ಹಿಂದೂ ಸಂಘಟನೆಯನ್ನು ಪ್ರಾರಂಭಿಸಬೇಕು ಎಂದುಕೊಂಡು, 3-4 ವರ್ಷಗಳ ಹಿಂದೆ ಹಿಂದೂ ಯುವಸೇನೆ ಎಂಬ ಸಂಘಟನೆಯನ್ನು ಪಾರಂಭಿಸಿದೆ. ಇದರಲ್ಲಿ ನ್ನ ದೊಡ್ಡಪ್ಪನ ಮಗ ಗಿರೀಶ್​, ಕೆ,ಎ.ದೊಡ್ಡಿಯ ಜಯಕುಮಾರ, ಕೆಸ್ತೂರಿ ಅಭಿಷೇಕ್​, ಶ್ರೀರಂಗಪಟ್ಟಣದ ಅನಿಲ್​ ಕುಮಾರ್​, ಗೊರನಹಳ್ಳೀಯ ರೋಹಿತ್​ ಮತ್ತು ಪೂಜಾ, ಸೋಮನಹಳ್ಳಿಯ ಮನು, ಗೆಜ್ಜಲಗೆರಯ ಪ್ರಶಾಂತ, ಆನೇಕಲ್​ ಗಣೇಶ್​, ಮದ್ದೂರಿನ ಯೋಗ ಪ್ರಮುಖರಾಗಿದ್ದರು. ಇವರು ಸಹ ಹಿಂದೂ ಧರ್ಮದ ಕಾಳಜಿ ಹೊಂದಿದ್ದರು.  ನಮ್ಮ ಸಂಘಟನೆಯಿಂದ ಹಿಂದೂ ಧರ್ಮ ಜಾಗೃತಿ ಸಭೆಗಳು, ಮೆರವಣಿಗೆ, ಬೈಠಕ್​ಗಳು, ಗೌಪ್ಯ ಸಭೆಗಳು, ಹಿಂದು ಸಮಾಜದ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯಗಳನ್ನು ಹಾಗೂ ದಬ್ಬಾಳಿಕೆಗಳನ್ನು ಖಂಡಿಸಿ ಪ್ರಟಿಭಟನೆಗಳನ್ನು ಹಮ್ಮಿಕೊಂಡು ಹಿಂದೂ ಧರ್ಮದ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿತ್ತು.

ನಾನು ಹಿಂದೂ ಯುವಸೇನೆ, ಜಾಗೋ ಹಿಂದೂ ಮದ್ದೂರು, ಭಜರಂಗಿ ಮದ್ದೂರು, ಕಾವೇರಿ ಕೊಳ್ಳದ ಹುಡುಗರು ಮುಂತಾದ ಹೆಸರಿನಲ್ಲಿ ವಾಟ್ಸಾಪ್​ ಗ್ರೂಪ್​ಗಳನ್ನು ತೆರೆದಿದ್ದು, ಇವುಗಳ ಮುಖಾಂತರ ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡುವಂತೆ ಮೆಸೇಜ್​ಗಳನ್ನು  ಟೈಪ್​ ಮಾಡಿ ಹಾಗೂ ಜಾಹರಾತು /ಪೋಟೋಗಳನ್ನು ಕಳಿಯುಸುತ್ತಿದೆ. ನಾನು ಮದ್ದೂರಿನ ಸುತ್ತಮುತ್ತಲಿನ ಹುಡುಗರನ್ನ ಸಂಘಟನೆಗೆ ಸೇರಿಸಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಧರ್ಮ ಜಾಗೃತಿ ಸಭೆ, ಸ್ವಾತಂತ್ರ್ಯ ಹೋರಾಟಗಾರರ ಜನ್ಮ ದಿನಾಚಾರಣೆಗಳನ್ನು, ರಕ್ತಧಾನ ಶಿಬಿರಗಳು, ಪುಸ್ತಕ ವಿತರಣೆ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ ಸಂಘಟನೆಗಳ ಪ್ರಮುಖರನ್ನು ಕರೆಸುತ್ತಿದ್ದೆನು.  ಮೋಹನ್​ಗೌಡ ಎಂಬುವವರು ನನಗೆ ಕರೆ ಮಾಡಿ ಹರಿಹರದಲ್ಲಿ ನಡೆದ ಕಾರ್ಯಾಗಾರದಲ್ಲಿ ನನ್ನನ್ನು ಆಹ್ವಾನಿಸಿದರು. ಆದ್ರೆ ದೂರ ಅಂತ ಹೇಳಿ ನಾನು ನಿರಾಕರಿಸಿದೆ. ಆಗ ಬೆಂಗಳೂರಿನ ಕಾರ್ಯಾಗಾರಕ್ಕೆ ಪಾಲ್ಗೊಳ್ಳಬಹುದೆಂದು ಸಲಹೆ ನೀಡಿದ್ರು, ಬೆಂಗಳೂರಿಮ ಹಿಂದೂ ಜಾಗೃತಿ ಸಮಿತಿಯ ಕಾರ್ಯಕರ್ತರಾದ ಮೋಹನ್​ಗೌಡ ಕರೆ ಮಾಡಿ ಬೆಂಗಳೂರಿನ ವಿಜಯನಗರದಲ್ಲಿ ನಡೆಯುವ ಕಾರ್ಯಾಗಾರಕ್ಕೆ ಆಹ್ವಾನಿಸಿದ ಮೇರೆಗೆ ನಾನು ಅಭಿಷೇಕ್​, ಯಮನಹಳ್ಳಿಯ ಗಿರೀಶ್​ ಜೊತೆಗೆ ವಿಜಯನಗರದ ಆದಿ ಚುಂಚನಗಿರಿ ಮಠದಲ್ಲಿ ನಡೆದ ಕಾರ್ಯಾಗಾರಕ್ಕೆ ಹೋಗಿದ್ದೇವು. ಆ ಕಾರ್ಯಾಗಾರದಲ್ಲಿ ಮೋಹನ್​ ಗೌಡ, ಭವ್ಯಕ್ಕ, ಸುಮಕ್ಕ, ನೀಲಕಂಠ, ತಾರಕ್ಕ ಪಾಲ್ಗೊಂಡಿದ್ದು ಅಲ್ಲಿ ನಮಗೆ ಪರಿಚಯವಾಯಿತು. ಅವರೆಲ್ಲರನ್ನೂ ಅಭಿ, ಗಿರಿಗೂ ಪರಿಚಯ ಮಾಡಿಸಿದೆನು. ಕಾರ್ಯಾಗಾರ ಮುಗಿದ ನಂತರ ನಾನು ಮಾರ್ಚ್​ ತಿಂಗಳಲ್ಲಿ ಮದ್ದೂರಿನಲ್ಲಿ ನಡೆದ ಬಲಿದಾನ್​ ದಿವಸ್​ ಮಾಡುವುದಾಗಿ ಅವರೆಲ್ಲರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಇವರೆಲ್ಲರೂ ಪಾಲ್ಗೊಂಡು ಯಶ್ವಿಸಿಗೊಳಿಸಿದ್ರು. ಇದರಿಂದ ನಮ್ಮಗೆ ಇನ್ನಷ್ಟು ಆತ್ಮೀಯತರಾದರು.

2107 ನೇ ಜೂನ್​ ತಿಂಗಳಿನಲ್ಲಿ ಮೋಹನ್​ ಗೌಡ ಕರೆ ಮಾಡಿ ಗೋವಾದ ಪೋಂಡಾದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಹಿಂದೂ ಜಾಗೃತ ಸಮಿತಿ ವತಿಯಿಂದ ಸಮಾವೇಶ ನಡೆಸುತ್ತಿದ್ದ, ನನಗೂ ಆಹ್ವಾನಿಸಿದ್ರು. ಅದಕ್ಕೆ ನಾನು ಸಮ್ಮತಿ ನೀಡಿದೆ. ಆದರಂತೆ ಗೋವಾದಲ್ಲಿ ನಡೆದ ಸಮಾವೇಶಕ್ಕೆ ಗೋಗಿದ್ದು, ಆ ಕಾರ್ಯಕ್ರಮದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಿಂದೂ ಸಂಘಟನೆಗಳ ಮುಖ್ಯಸ್ಥರು ಬಂದಿದ್ದರು. ಅಲ್ಲಿ ಆಧ್ಯಾತ್ಮ, ಸಂಘಟನೆ, ಸಮಾಜ ಸೇವೆ ಕುರಿತು ಬಾಷಣಗಳನ್ನು ಮಾಡಿದ್ರು. ಅಲ್ಲಿ ಉಳಿದುಕೊಳ್ಳಲು ನನಗೆ ಒಂದು ಕೊಠಡಿಯನ್ನು ಕೊಟ್ಟಿದ್ದು, ಲಕ್ಷ್ಮೇಶ್ವರ ಬಳಿಯಿರುವ ಕಳಸದ ಪ್ರವೀಣ್​ ಕೂಡ ನನ್ನೊಂದಿಗೆ ಇದ್ದ. ಸಮಾವೇಶದ ಎರಡನೇ ದಿನ ಹಿಂದೂ ಧರ್ಮ ರಕ್ಷಣೆ ಮತ್ತು ಪ್ರತಿಕಾರದ ಕುರಿತಂತೆ ಚರ್ಚೆಯಲ್ಲಿ ನಾನು ಪಾಲ್ಗೊಂಡಿದೆ. ನಾನು ಧರ್ಮ ರಕ್ಷಣೆಗೆ ಶಸ್ತ್ರಸಜ್ಜಿತವಾಗಿ ಹೋರಾಟ ಬೇಕು ಎಂದು ನನ್ನ ವೈಯಕ್ತಿಕ ಅಭಿಪ್ರಾಯವನ್ನು ಭಾಷಣದ ಮೂಲಕ ಪ್ರತಿಪಾದಿಸಿದೆ. ಅಲ್ಲಿದ್ದವರು ನನ್ನ ಭಾಷಣದಿಂದ ಪ್ರಭಾವಿತರಾಗಿ ನನಗೆ ಶಹಬ್ಬಾಸ್​ಗಿರಿ ಹೇಳಿದ್ರು. ಮೋಹನ್​ ಗೌಡ ಅವರು ನನ್ನನ್ನು ಅತೀ ಹೆಚ್ಚಾಗಿ ಹೊಗಳಿದರು.  ಆಗ ನಾನು ಶಸ್ರ್ತ ಸಜ್ಜಿತವಾಗಿ ಹೋರಾಡಲು ನನ್ನ ಬಳಿ ಗನ್​ ಮತ್ತು ಬುಲೆಟ್​ಗಳಿವೆ ಎಂದು ಮೋಹನ್​ ಗೌಡರಿಗೆ ತಿಳಿಸಿದೆ. ಆಗ ಮೋಹನ್​ ಗೌಡ್ರು ನಿಮ್ಮ ಮನಸ್ಥಿತಿ ಇರುವಂತಹ ವ್ಯಕ್ತಿಗಳು ಇದ್ದಾರೆ. ಆ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ನಿಮ್ಮನ್ನು ಸಂಪರ್ಕಸುತ್ತಾರೆ ಅಂತ ಹೇಳಿದ್ರು.

ಇದಾದ ಸ್ವಲ್ಪದಿಗಳ ನಂತರ ಅಂದರೆ ಜೂನ್​ ತಿಂಗಳಿನಲ್ಲಿ ಒಬ್ಬ ವ್ಯಕ್ತಿ ನನಗೆ ಕಾಯಿನ್​  ಬೂತ್​ನಿಂದ ತಾನು ಹಿಂದೂ ಮಜ್ದೂರ್​ ಕಿಸಾನ್​ ಸಂಘಟನೆಗೆ ಸೇರಿದವನು. ನಿಮ್ಮ ಬಳಿ ಮಾತನಾಡಬೇಕಿದೆ ಎಂದನು. ನಿಮ್ಮ ಫೋನ್​ ನಂಬರ್​ಗಳನ್ನು ಬೆಂಗಳೂರಿನ ಮೋಹನ್​ಗೌಡ ಕೊಟ್ಟರು ಎಂದು ತಿಳಿಸಿದರು. ನಾನು ಅವರ ಹೆಸರನ್ನು ಕೇಳಿದಾಗ ಪ್ರವೀಣ್​ ಎಂದು ತಿಳಿಸಿದ್ದು, ಆದು ಅವರ ನಿಜಹೆಸರೆ ಅಥವಾ ಅಲ್ಲವೆ ಎಂಬುದು ನನಗೆ ಗೊತ್ತಿಲ್ಲ. ನಾನು ಆ ಸಮಯದಲ್ಲಿ ಮದ್ದೂರಿನಲ್ಲಿದ್ದೆನು. ನಾನು ಇವರ ಬಗ್ಗೆ ಮೋಹನ್​ ಗೌಡರಿಗೆ ಫೋನ್​ ಮಾಡಿ ಕೇಳಿದಾಗ ನಮ್ಮ ಸಂಘಟನೆಯವರೇ. ಅವರೂ ಸಹ ನಿಮ್ಮ ಮನಸ್ಥಿತಿ ಉಳ್ಳವರಾಗಿದ್ದು, ನೀವು ಮುಂದುವರೆಯಿರಿ ಅಂತಾ ಹೇಳಿದ್ರು. ನಾನು ಪ್ರವೀಣ್​ ಮದ್ದೂರಿಗೆ ಬಂದು ನನ್ನನ್ನು ಭೇಟಿ ಮಾಡಿದರು. ಆತನಿಗೆ ಸುಮಾರು 28 ರಿಂದ 30 ವರ್ಷವಾಗಿದ್ದು, ಸುಮಾರು 6 ಅಡಿ ಎತ್ತರವಿದ್ದು, ಸಣ್ಣಗಿದ್ದು, ಕೋಲು ಮುಖ, ಸ್ವಲ್ಪ ಕಪ್ಪಾಗಿದ್ದನು. ಕೋಸ್ಟಲ್​ ಏರಿಯಾದ ಅವನ ಊರು ಕೇಳಿದ್ದಕ್ಕೆ ಮಲೆನಾಡು ಅಂತ ಹೇಳಿದ್ದ. ನಂತ್ರ ನಾನು ಅವನು ಧ್ಯಾನ, ಹಿರಿಯರ ಶಾಪಮುಕ್ತಿ, ದತ್ತಾತ್ರೆಯ ಸ್ವಾಮಿ ಜಪ, ಜೈಗುರುದೇವ ದತ್ತ ಮುಂತಾದ ವಿಷಯಗಳನ್ನ ಮಾತನಾಡುತ್ತಿದ್ದೆವು. ಅಲ್ಲಿಂದ ಪ್ರವೀಣಣ್ಣ ಮತ್ತು ನಾನು ಬಸ್ ನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದೆವು. ಮೈಸೂರಿನಿಂದ ನಾನು ಬೀರೂರಿಗೆ ಹೋದೆನು.

ಅದಾದ ನಂತ್ರ ಅದೇ ತಿಂಗಳಿನಲ್ಲಿ ಪ್ರವೀಣ್ ಬೀರೂರಿನ ನಮ್ಮ ಮನೆಗೆ ಬೆಳಿಗ್ಗೆ ಸುಮಾರು 11 ಗಂಟೆಗೆ ಬಂದ್ರು. ನನ್ನ ಹೆಂಡತಿ ರೂಪಾಳಿಗೆ ಇವರು ಹಿಂದೂ ಜಾಗೃತಿ ಸಮಿತಿಯ ಪ್ರವೀಣ್ ಎಂದು ಪರಿಚಯ ಮಾಡಿಕೊಟ್ಟೆ. ಆಗ ಪ್ರವೀಣ್  ಹೆಂಡತಿಯನ್ನ ಉದ್ದೇಶಿಸಿ ನನ್ನನ್ನ ಅಣ್ಣಾ ಅಂತ ಕರಿಯಿರಿ ಅಂತ ಹೇಳಿದ್ರು. ನನ್ನ ಹೆಂಡತಿ ಕೆಲಸಕ್ಕೆ ಹೋಗಿ ಸುಮಾರು ಮಧ್ಯಾಹ್ನ ವಾಪಸ್ ಆಗಿ ಅಡುಗೆ ಮಾಡಿ ಬಡಿಸಿದಳು. ಮನೆಗೆ ಬಂದ ಪ್ರವೀಣ್ ಸುಮಾರು 3.30ರ ವರೆಗೆ ನಮ್ಮೊಂದಿಗೇ ಇದ್ರು. ಆಗ ಅವ್ರು ಹಿಂದೂ ಧರ್ಮದ ರಕ್ಷಣೆಗಾಗಿ ನನಗೆ ಗನ್ ಮತ್ತು ಬುಲೆಟ್ ಬೇಕಿದೆ ಅಂಥ ಹೇಳಿದ್ರು. ಆಗ ನಾನು ನನ್ನ ಬಳಿ ಇದ್ದ ಬುಲೆಟ್ಗಳನ್ನ ಅವರಿಗೆ ತೋರಿಸಿದೆ. ಆಗ ಪ್ರವೀಣ್ ನನ್ನ ಬಳಿಯದ್ದ ಎರಡು ಬುಲೆಟ್ ತೆಗೆದುಕೊಂಡು ಇದು ಕೆಲಸಕ್ಕೆ ಬರುತ್ತದೆಯೇ ಎಂದು ನೋಡಿ ತಿಳಿಸುತ್ತೇನೆ ಅಂತ ಹೇಳಿದ.  ನಮಗೆ ದೇವರು, ಜಪ, ಹಿಂದೂ ಸಂಸ್ಕೃತಿ, ಹಬ್ಬಗಳ ಮಹತ್ವದ ಬಗ್ಗೆ ನಮ್ಮೊಂದಿಗೆ ಸಂಜೆ ವರೆಗೂ ಮಾತುಕತೆ ನಡೆಸಿದ್ರು. ನಂತ್ರ ತನಗೆ ಒಂದು ಗನ್ ಮತ್ತು ಬುಲೆಟ್ ಗಳ ಅವಶ್ಯಕತೆ ಇದ್ದು, ಅವುಗಳನ್ನ ಖರೀದಿಸುವಂತೆ ತಿಳಿಸಿ, ತಾನು ಮಂಗಳೂರಿನ ಆಶ್ರಮಕ್ಕೆ ಹೋಗುತ್ತೇನೆಂದು ತಿಳಿಸಿ ಹೋದ.

2017 ಆಗಸ್ಟ್ 19 ಮತ್ತು 20 ನೇ ತಾರೀಖಿನಂದು ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠದಲ್ಲಿ ಹಿಂದೂ ಸಂಘಟನೆಗಳ ಧರ್ಮ ಶಿಕ್ಷಣ, ಧರ್ಮ ಸಭೆ ಕಾರ್ಯಕ್ರಮವನ್ನ ಆಯೋಇಸಲಾಗಿರುತ್ತೆ. ಆ ಕಾರ್ಯಕ್ರಮಕ್ಕೆ ನಾನೂ ಸಹ ಹೋಗಿದ್ದೆ. aಲ್ಲಿ ಮೋಹನ್ ಗೌಡ, ಭವ್ಯಕ್ಕ, ನೀಲಕಠ, ಹಾಗು ಇತರರು ಸಹ ಬಂದಿದ್ರು.

ಕಾರ್ಯಕ್ರಮದ ಕೊನೆ ದಿನ, ಅಂದ್ರೆ 20 ತಾರೀಖಿನಂದು ಮಂಠದ ಮುಂಭಾಗದಲ್ಲಿದ್ದ ಪಾರ್ಕ್ ನಲ್ಲಿ ಕುಳಿತು ನಾನು ಪ್ರವೀಣ್ ಮಾತುಕತೆ ನಡೆಸಿದ್ವಿ. ಮಾತುಕತೆ ವೇಳೆ, ನೀನು ಕೊಟ್ಟ ಬುಲೆಟ್ ಕೆಲಸಕ್ಕೆ ಬರೋದಿಲ್ಲ. ಬೇರೆ ಬುಲೆಟ್ ವ್ಯವಸ್ಥೆ ಮಾಡು, ಎಷ್ಟು ಹಣ ಖರ್ಚಾದ್ರು ನಾನು ಕೊಡ್ತೇನೆ. ಆದಷ್ಟು ಬೇಗ ಬುಲೆಟ್ ವ್ಯವಸ್ಥೆ ಮಾಡು. ಸಮಯ ಬಹಳ ಕಡಿಮೆ ಇದೆ. ಒಂದು ಮುಖ್ಯವಾದ ವಿಚಾರಕ್ಕೆ ನೀನು ನಮ್ಮೊಂದಿಗೆ ಸಹಕರಿಸಬೇಕಿದೆ ಅಂತ ಹೇಳಿದ. ನಾನು ಯಾವ ವಿಚಾರ ಅಂತ ಕೇಳಿದಾಗ ಗೌರಿ ಲಂಕೇಶ್ ವಿಚಾರವನ್ನ ತಿಳಿಸಿದ. ಬೆಂಗಳೂರಿನಲ್ಲಿ ಒಬ್ಬರು ಗೌರಿ ಲಂಕೇಶ್ ಅಂತ ಇದ್ದಾರೆ. ಅವ್ರು ಹಿಂದೂಗಳ ವಿರುದ್ಧವಾಗಿ, ಹಿಂದೂ ಧರ್ಮ, ದೇವರ ವಿರುದ್ಧ ವಾಗಿ ಮಾತನಾಡುತ್ತ ನಮ್ಮ ಧರ್ಮಕ್ಕೆ ಅವಮಾನ ಮಾಡಿದ್ದಾಳೆ. ಅವಳನ್ನ ಮುಗಿಸಲು ತೀರ್ಮಾನಿಸಿದ್ದೇವೆ. ಅದಕ್ಕೆ ನಮ್ಮ ಹುಡುಗರು ರೆಡಿ ಇದ್ದಾರೆ. ನೀವು ನಮಗೆ ಬುಲೆಟ್ಗಳನ್ನ ನೀಡಿದ್ರೆ, ಮುಂದಿನ ಕೆಲಸಗಳನ್ನ ನಾವು ಮಾಡ್ತೆವೆ. ಅದಕ್ಕೆ ಪ್ರವೀಣ್ ಹೇಳಿದ ವಿಷಯ ಸರಿ ಅಂತ ಅನಿಸಿ ಕಾನೂನಿಗೆ ವಿರೋಧವಾಗಿದ್ದರೂ ಕೃತ್ಯವೆನಿಸಿದರೂ ಸಹ ಒಮ್ಮತದಿಂದ ಗೌರಿ ಲಂಕೇಶ್​ ಮುಗಿಸಲು ಮಾಡಿದ ಸಂಚಿಗೆ ಸಹಕರಿಸಿದೆನು. ನನಗೆ ಹೊಂದೂ ಧರ್ಮದಲ್ಲಿ ಅಚಲನಂಬಿಕ, ಶ್ರದ್ಧೆ ಇದ್ದುದರಿಂದ ಹಾಗೂ ಗೌರಿ ಲಂಕೇಶ್ ಹಿಂದೂ ಧರ್ಮದ ವಿರುದ್ಧ ಪ್ರಚಾರ ಮಾಡುತ್ತಿದ್ದರಿಂದ ನನಗೂ ಸಹ ಅವಳ ಮೇಲೆ ಕೋಪವಿದ್ದುದರಿಂದ ನಾನು ಹೇಗಾದರೂ ಮಾಡಿ ಬುಲೆಟ್​ಗಳನ್ನು ಆರೇಂಜ್​​ ಮಾಡುತ್ತೇನೆ.ನೀವು ಈ ಕೆಲಸದಲ್ಲಿ ಮುಂದುವರೆಯಿರಿ ಎಂದು ಹೇಳೆ ನಾವು ಪ್ಲಾನ್​ ಮಾಡಿದೆವಿ. ಅವರು ಆದಷ್ಟು ಬೇಗ ಬುಲೆಟ್​ ಅರೇಂಜ್​ ಮಾಡುವಂತೆ ತಿಳಿಸಿ ನಾನು ಯಾವುದೇ ಮೊಬೈಲ್​​ ಫೋನ್​ನನ್ನು ಉಪಯೋಗಿಸುವುದಿಲ್ಲ, ಇನ್ನು ಮುಂದೆ ಕಾಯಿನ್​ ಬೂತ್​ಗಳಿಂದ ಕಾಲ್ ಮಾಡಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿದನು. ಪ್ರವೀಣ್​ ನನಗೆ ಫೋನ್​ ಮಾಡಿ ಬುಲೆಟ್​ ಬಗ್ಗೆ ವಿಚಾರಿಸುತ್ತಿದ್ದ, ಆದರೆ ನಾನು ಬುಲೆಟ್​ ಅರೇಂಜ್​​ ಮಾಡಲು ಕೊಳ್ಳಗಾಲ, ಊಟಿ ಕಡೆಗಳ್ಲಿ ಪ್ರಯತ್ನಿಸಿದ್ದು, ಅದು ಸಾಧ್ಯವಾಗಿರಲಿಲ್ಲ. ಇದನ್ನು ಹೇಳಲು ಪ್ರವೀಣ್​ ಬಳಿ ಮೊಬೈಲ್​ ಫೋನ್​ ಇರದಕಾರಣ ವಿಷಯ ಅವರಿಗೆ ತಿಳಿಸಲು ಸಾಧ್ಯವಾಗಿಲ್ಲ.

ಮದ್ದೂರಿಗೆ ಆಗಿಂದಾಗ್ಗೆ ಬರುತಿದ್ದ ಮಂಗಳೂರಿನ ರಮಾನಂದಣ್ಣ ನನಗೆ ಮಂಗಳೂರಿಗೆ ದಿನಾಂಕ 5, 9, 2017 ರಂದು ಮಂಗಳೂರಿಗೆ ಬರುವಂತೆ ತಿಳಿಸಿದ್ದರಿಂದ ನಾನು ನನ್ನ ಹೆಂಡತಿ ರೂಪಾಳೊಂದಿಗೆ ಎರಡು ದಿವಸ ಉಳಿದುಕೊಂಡಿರುತ್ತೇವೆ. ಮಾರನೇ ದಿನ ನಾನು ಟಿವಿಯಲ್ಲಿ ಮತ್ತು ನ್ಯೂಸ್​ ಪೇಪರ್​  ಓದಿ ಗೌರಿ ಲಂಕೇಶ್​ ಹತ್ಯೆಯಾಗಿರುವುದನ್ನು ತಿಳಿದುಕೊಂಡೆನು. ಈ ವಿಚಾರವನ್ನು ರಮಾನಂದಣ್ಣಿಗೆ ಹೇಳಿದಾಗ ಅವರು ನಕ್ಕು ಸುಮ್ಮನಾದರು. ಪ್ರವೀಣ್ ಬೇರೆ ಎಲ್ಲಿಂದಲೋ ಗನ್​ ಮತ್ತು ಬುಲೆಟ್​ಗಳನ್ನು ಅರೇಂಜ್​ ಮಾಡಿಕೊಂಡು ಗೌರಿ ಹತ್ಯೆ ಮಾಡಿಸಿರಬಹುದು ಎಂದು ಸುಮ್ಮನಾದೆನು.

ಇದಾದ ನಂತರ 2017 ರ ಅಕ್ಟೋಬರ್​ ತಿಂಗಳಿನಲ್ಲಿ ಅದೇ ಪ್ರವೀಣ್​ ನನಗೆ ಕಾಯಿನ್​ ಬೂತ್​ನಿಂದ ಕಾಲ್ ಮಾಡಿ ನಿಮ್ಮನ್ನು ಭೇಟಿಯಾಗಬೇಕೇಂದು ಹೇಳಿದ್ದ. ನಾನು ಆ ಸಮಯದಲ್ಲಿ ಮದ್ದೂರಿನಿಂದ ಮಂಡ್ಯಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದರಿಂದ ಪ್ರವೀಣ್​ನನ್ನು ಮಂಡ್ಯಕ್ಕೆ ಬರುವಂತೆ ತಿಳಿಸಿದೆ.

ನಾನು ಮಂಡ್ಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಕಾಯುತ್ತಿದ್ದು, ಪ್ರವೀಣ್​ ಮಂಡ್ಯಕ್ಕೆ ಸುಮಾರು ಮಧ್ಯಾಹ್ನ 3;30ಕ್ಕೆ ಗಂಟಗೆ ಬಂದಿದ್ದು, ಆಗ ಆತನನ್ನು ಭೇಟಿ ಮಾಡಿದೆ. ನಂತರ ಬಸ್​ ಸ್ಟಾಂಡಿನ ಹೋಟೆಲ್​ ಬಳಿ ಕುಳಿತು ಮಾತನಾಡಿದ್ದು ನಾನು ಗೌರಿ ಲಂಕೇಶ್​ ಕೊಲೆ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಅದೆಲ್ಲ ಈಗ ಬೇಡ. ಅಂದುಕೊಂಡಂತೆ ಆ ಕೆಲಸ ಆಗಿದೆ. ನಿನ್ನಿಂದ ನಮಗೆ ಬೇರೊಂದು ಸಹಾಯ ಬೇಕಿದ್ದು, ಆ ಸಮಯ ಬಂದಾಗ ತಿಳಿಸುತ್ತೇನೆಂದು ಹೇಳಿದನು. ನಾನು ಬೀರೂರಿಗೆ ಹೋಗಬೇಕಿದ್ದರಿಂದ ಆತನನ್ನು ಬೀರೂರಿನ ಮನಗೆ ಬರುವಂತೆ ಕರೆದಿದ್ದು, ಆತನು ಬರಲು ಒಪ್ಪಿಕೊಂಡಿದ್ದರಿಂದ ಮೈಸೂರು ಮಾರ್ಗವಾಗಿ ಬೀರೂರಿಗೆ ಕರೆದುಕೊಂಡು ಹೋದೆನು. ತಡರಾತ್ರಿ ಮನಗೆ  ಹೋದ್ವಿ. ಮನೆಯಲ್ಲಿ ನನ್ನ ಹೆಂಡತಿ ನಮಗೆ ಊಟ ಬಡಿಸಿದಳು. ಆ ದಿನ ರಾತ್ರಿ ಪ್ರವೀಣ್​ ನಮ್ಮ ಮನೆಯಲ್ಲಯೇ ಉಳಿದುಕೋಡಿದ್ದನು. ಮಾರನೇ ದಿನ ಬೆಳಗ್ಗೆ ಪ್ರವೀಣ್​ ನಮ್ಮ ಮನೆಯಲ್ಲಿ ತಿಂದಿ ಮಾಡಿದ ನಂತರ ತಾನು ಮಂಗಳೂರಿನ ಆಶ್ರಮಕ್ಕೆ ಹೋಗುತ್ತೇನೆಂದು ಹೇಳಿ ಹೋದನು.

ಶ್ರೀ ರಂಗಪಟ್ಟಣದಲ್ಲಿರುವ ಹಿಂದೂ ಧರ್ಮ ಜಾಗಣ ವೇದಿಕೆಯ ಉಮೇಶ್​ ಪರಿಚಯವಾಗಿದ್ದ ಅನಿಲ್​ ಕುಮಾರ್​ @ ಅನಿಲ್​ ತುಂಬಾ ಚುರುಕಾಗಿದ್ದರು. ಅನಿಲ್​ ಮತ್ತು ಉಮೇಶ್​ ಹಾಹಾಗ ಭೇಟಿ ಮಾಡುತ್ತಿದ್ದೆ. ನಾನು ಮತ್ತು ಇಬ್ಬರೂ ಆತ್ಮೀಯರಾದಿದ್ದ ಒಮ್ಮ ಅನಿಲ್​ ಕುಮಾರ್​ ಫೋನ್ ಮಾಡಿ ಶ್ರೀಂಗಪಟ್ಟಣ ಬಸ್​ ನಿಲ್ದಾಣದ ಬರುವಂತೆ ತಿಳಿದ್ದ, ಆಗ ಅನಿಲ್​ ಕುಮಾರ್​ ಬಸ್​ ನಿಲ್ಲಾಣಕ್ಕೆ ಬಂದು ನನ್ನನ್ನು ಭೇಟಿ ಮಾಡಿದ.ಆಗ ನಮ್ಮಿಬ್ಬರ ಬಗ್ಗೆ ಯಾರ ಬಳಿ ಚರ್ಚೆ ಮಾಡದಂತೆ ಹೇಳಿ ಬೇಕಿಂದರೆ ಹಣ ಕೊಡುವುದಾಗಿ ಹೇಳಿದೆ. ನವೆಂಬರ್​ ತಿಂಗಳಲ್ಲಿ ಪ್ರವೀಣ್ ನನಗೆ ಕಾಯಿನ್​ ಬೂತ್​ನಿಂದ ಕಾಲ್​ ,ಆಡಿ ಬೆಳಗಾಂನಲ್ಲಿ ನಮ್ಮ ಸಂಘಟನೆಯ ಹಿರಿಯರೋಬ್ಬರು ನಿಮ್ಮನ್ನು ಭೇಟಿ ಮಾಡಲು ಇಚ್ಚಿಸುತ್ತಾರೆ, ಬೆಳಗಾಂಗೆ ಹೋಗುವಂತೆ ಹೇಳಿದನು. ಆದರಂತೆ ನಾನು 2017ರ  ನವೆಂಬರ್​ 11 ರಂದು ಪ್ರವೀಣ್ ಸೂಚಿಸಿದಂತೆ ಹುಬ್ಬಳಿಯವರೆಗೆ ಟ್ರೈನ್​ ನಲ್ಲಿ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಬೆಳಗಾಂಗೆ ಹೋಗಿ ಅಲ್ಲಿರುವ ಬಸ್​ ನಿಲ್ದಾಣದ ಯಾತ್ರಿ ನಿವಾಸ್​ ಎದುರಿನ ಅರಳಿ ಮರದ ಕೆಳಗಡೆ ಇರುವ ಒಂದು ಪುಟ್ಟ ದೇವಸ್ಥಾನದ ಬಳಿ ಕಾಯುತ್ತಿದ್ದೆ. ಆಗ ಒಂದು ಮಾರುತಿ 800 ವೈಟ್​ ಕಾರಿನಲ್ಲಿ ಇಬ್ಬರು  ವ್ಯಕ್ತಿಗಳು ಬಂದರು. ಆ ಪೈಕಿ ಒಬ್ಬರು 27 ವರ್ಷದ ವ್ಯಕ್ತಿ ಕನ್ನಡದಲ್ಲೂ, ಮತ್ತೊಬ್ಬರು ಹಿಂದಿ ಮಾತನಾಡುತ್ತಿದ್ದರು. ಅವರಿಗೆ ಸುಮಾರು 40 ವರ್ಷ ವಯಸ್ಸಾಗಿತ್ತು.  ಅವರ ಹೆಸರು ಸಂಜಯ್​ ಬನ್ಸಾರೆ ಅಂತ ತಿಳಿಯಿತು. ನನ್ನನ್ನು ಭೇಟಿಯಾಗಲು ಬಂದವರು ನನಗೆ ಪರಿಚಯವಿಲ್ಲ ಕಾರಣ ಪ್ರವೀಣ್​ ನನ್ನ ಚಹರೆಯನ್ನು ಅವರಿಗೆ ಮತ್ತು ಅವರ ಚಹರೆಯನ್ನು ನನಗೂ ತಿಳಿಸಿದ್ದರು. ಅಲ್ಲದೇ  ಅವರು ಸಿಕ್ಕ ಮೇಲೆ ಮೊಬೈಲ್​ ಸ್ವಚ್​ ಆಪ್​ ಮಾಡುವಂತೆ ತಿಳಿಸಿದರು. ಅವರುಗಳಲ್ಲಿ ಕನ್ನಡ ಮಾತನಾಡುತ್ತಿದ್ದವನು ಬೆಳ್ಳಗೆ, ಕುಳ್ಳಗೆ ದಪ್ಪ ಇದ್ದನು. ಹಿಂದಿ ಮತನಾಡುತ್ತಿದ್ದವನು ಎತ್ತರಾವಗಿದ್ದು, ಕೆಂಚಗಿದ್ದನು. ಅವರು ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು  ಮೊಬೈಲ್​ ಸ್ವೀಚ್​ ಆಫ್​ ಮಾಡಿಸಿದರು.  ನಂತರ ನನ್ನನ್ನು ಅವರ ಬಿಳಿ ಬಣ್ಣದ ಮಾರುತಿ  800 ಕಾರಿನಲ್ಲಿ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಖಡೆಬಜಾರ್​, ಬಸವಣ್ಣ ಸರ್ಕಲ್​ ಹಾಗೂ ಇತರೆ ಕಡೆಗಳಲ್ಲಿ ಸುತ್ತಾಡಿಸಿ ಆ ಸಮಯದಲ್ಲಿ ನನ್ನೊಂದಿಗೆ ಗನ್​ ಮತ್ತು ಮದ್ದುಗುಂಡುಗಳ ಖರೀದಿಯ ಬಗ್ಗೆ ಮಾತನಾಡಿರುತ್ತಾರೆ. ಅವರು ಹಿಂದಿ ಭಾಷೆಯಲ್ಲಿ  ಮಾತನಾಡುತ್ತಿದ್ದು, ಅವರ ಜೊತೆಯಲ್ಲಿ ಮತ್ತೊಬ್ಬ  ವ್ಯಕ್ತಿಯು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿರುತ್ತಾನೆ.  ಅವರು ನನ್ನನ್ನು ಕರೆದುಕೊಂಡು ಹೋಗಿದ್ದ  ಮಾರುತಿ 800 ಕಾರಿನ ಹಿಂಭಾಗದಲ್ಲಿ  ಕೇಸರಿ ಬಣ್ಣದ  ಕುದುರೆ ರಥದಲ್ಲಿರುವ ಶ್ರೀ ಕೃಷ್ಣನ ಚಿತ್ರವಿರುತ್ತದೆ.  ಹಾಗೂ ಅದರ ಮುಂಭಾಗದಲ್ಲಿ ತಿಲಕ ಇಟ್ಟಿರುವ ರೀತಿಯಲ್ಲಿರುತ್ತದೆ. ಕಾರಿನ ನಂಬರ್​ ಅನ್ನು  ನಾನು ಗಮನಿಸಲಿಲ್ಲ. ನನಗೆ ಹಿಂದಿಯಿಂದ ತರ್ಜುಮೆ ಮಾಡುತ್ತಿದ್ದ  ವ್ಯಕ್ತಿಯೇ ಕಾರ್​ ಡ್ರೈವ್​ ಮಾಡುತ್ತಿದ್ದನು. ಪ್ರವೀಣ್​ ಹೇಳಿದಂತೆ ಒಂದು ಗನ್​ ಮತ್ತು ಬುಲೆಟ್​ಗಳು ಬೇಕಾಗಿವೆ,  ಅದರ ಬೆಲೆ ಎಷ್ಟು ಎಂದು ಕೇಳಿದರು, ಆಗ ನಾನು ಒಂದು ಮ್ಯಾಗ್ಜಿನ್​ ಗನ್​ನ ಬೆಲೆ 2,00,00/ ರೂ ಆಗಬಹುದು ಮತ್ತು 50 ಮದ್ದುಗುಂಡುಗಳಿಗೆ ರೂ. 40,000 ರೂಗಳು ಆಗುತ್ತದೆ ಅಂತಾ ತಿಳಿಸಿದೆನು.  ಆಗ ಸದರಿ ವ್ಯಕ್ತಿ  ಮದ್ದು ಗುಂಡುಗಳು ಬೇಡ ಮ್ಯಾಗ್ಜಿನ್​ ಗನ್​ ತೋರಿಸಿದರೆ  ನಾವು ಖರೀದಿ ಮಾಡಲು ತಯಾರಿದ್ದೇವೆಂದು ತಿಳಿಸಿದರು. ಮ್ಯಾಗ್ಜಿನ್​ ಗನ್​ ವ್ಯವಸ್ಥೆ ಆದ ನಂತರ ಫೋನ್​ ಮಾಡಲು ತಿಳಿಸಿದರು. ಅಲ್ಲದೆ ಅವರು ಮೈಸೂರಿನ ಭಗವಾನ್​ ಬಗ್ಗೆ ಕೇಳಿದರು.  ಅವರು ಸಾಹಿತಿಯಾಗಿದ್ದು, ಹಿಂದೂ ಧರ್ಮದ ವಿರುದ್ದವಾಗಿ ಮಾತನಾಡುತ್ತಾರೆ ಎಂದು ಹೇಳಿದೆನು.  ಆಗ ಅವರು ಪ್ರೊಫೆಸರ್​ ಭಗವಾನ್​ನನ್ನು  ಮುಗಿಸೋಣವೆಂದು ಹೇಳಿ ಅವನ ಮನೆಯನ್ನು ಅಬ್ಸರ್ವ್​ ಮಾಡುವಂತೆ ನನಗೆ ಹೇಳಿದರು. ಹೇಗೆಂದು ಕೇಳಿದ್ದಕ್ಕೆ  ಅವನ ಮನೆಯ ಬಳಿ ಸಿಸಿ ಕ್ಯಾಮೆರಾಗಳು ಇವೆಯಾ, ಸೆಕ್ಯೂರಿಟಿ ಇದ್ದಾನೆಯೇ ಮುಂತಾದ ವಿಷಯಗಳನ್ನು ಗಮನಿಸಲು ಹೇಳಿದ್ದರು. ಅದಕ್ಕೆ ನಾನು ಒಪ್ಪಿಕೊಂಡೆನು.

ಇದಾದ ನಂತರ ನವೆಂಬರ್​ ತಿಂಗಳಲ್ಲಿ ನಾನು ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಮದ್ದೂರಿನ ಅನ್ನಪೂರ್ಣೇಶ್ವರಿ  ಕಲ್ಯಾಣ ಮಂಟಪದಲ್ಲಿ ಹಿಂದೂ ಧರ್ಮದ ರಕ್ಷಣೆಯ ಬಗ್ಗೆ  ಒಂದು ಧರ್ಮ ಸಭೆ ನಡೆಸಿದ್ದೆ. ಆ ಕಾರ್ಯಕ್ರಮಕ್ಕೆ  ಗುರುಪ್ರಸಾದ್​ ಗೌಡ, ಸುಮಾ ಮಂಗೇಶ್​, ರೇಣುಕಾ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿರುತ್ತಾರೆ.  ಈ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮತ್ತು ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಚರ್ಚೆ ನಡೆಯಿತು.

ಇದಾದ ಸ್ವಲ್ಪ ದಿನಗಳ ನಂತರ  ನಾನು ಮತ್ತೆ ಒಂದು ದಿನ ಭಾನುವಾರದಂದು ಶ್ರೀರಂಗಪಟ್ಟಣದ ಬಸ್​ ನಿಲ್ದಾಣದ ಬಳಿ ಅನಿಯನ್ನು ಭೇಟಿ ಮಾಡಿ ಮೈಸೂರಿಗೆ ಹಿಂದೂ ಸಂಘಟನೆಯ ಸಮಾವೇಶಕ್ಕೆ ಹೋಗಿ ಬರುತ್ತಿರುವುದಾಗಿ ತಿಳಿಸಿದೆನು. ಆಗ ನನ್ನ ಕೈಯಲ್ಲಿ ಒಂದು  ಬ್ಲಾಕ್​ ಕವರ್​ ಇದ್ದು, ಆ ಕವರ್​ ಒಳಗೆ ಕೈ ಹಾಕಿ ನೋಡಿ ಫಿಲ್​ ಮಾಡುವಂತೆ ಅನಿಗೆ ತಿಳಿಸಿದೆನು. ಆಗ ಅನಿಯು ಕೈ ಹಾಕಿ ದಿನಸಿ ಸಾಮಾನುಗಳು ಇವೇ ಅದರ ಮಧ್ಯೆ ಮತ್ತೊಂದು ಕವರ್​ ಇದ್ದು, ಅದರಲ್ಲಿ ಮೊಳೆ  ತರಹದ ಯಾವುದೋ ವಸ್ತು ಇದೆ ಅದು ಮೂಳೆ ಇರಬಹುದು ಅಣ್ಣ ಎಂದನು. ಆಗ ನಾನು ಮೂಳೆ ಅಲ್ಲ ಮಗ ಅದು ಗನ್​ ಇಲ್ಲಿ ಪಬ್ಲಿಕ್​ ಇದ್ದಾರೆ ಪಬ್ಲಿಕ್​ನಲ್ಲಿ ತೋರಿಸಬಾರದೆಂದು ಹೇಳಿದೆನು. ಇದು ಹಿಂದೂ ಧರ್ಮದ ಉಳಿವಿಗಾಗಿ ಉಗ್ರ ಹೋರಾಟ ಮಾಡಲು ಇಟ್ಟುಕೊಂಡಿದ್ದೇನೆಂದು ಹೇಳಿದೆನು.

ನಂತರ ಅದೇ ತಿಂಗಳ  ನವೆಂಬರ್​ ಕೊನೆಯ ವಾರದಲ್ಲಿ ಮೈಸೂರಿನಲ್ಲಿ ನಡೆದ  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರಿನ ಪ್ರೊಫೇಸರ್​  ಭಗವಾನ್​ ರವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ, ಹಿಂದೂ ಧರ್ಮದ ಅಸ್ತಿತ್ವಕ್ಕೆ ಧಕ್ಕೆ  ಉಂಟು ಮಾಡುವ ಪ್ರಚೋದನಕಾರಿ ಹೇಳಿಕೆಯಾಗಿದ್ದು, ಇದನ್ನು ಟಿವಿ ಹಾಗೂ ಪತ್ರಿಕೆಗಳ ಮೂಲಕ ವೀಕ್ಷಿಸಿದ ನನಗೆ ಸದರಿ ಭಗವಾನ್​ರನ್ನು  ಹಿಂದೂ ಧರ್ಮದ ರಕ್ಷಣೆಗಾಗಿ ಕೊನೆಗಾಣಿಸಲೇಬೇಕು ಎಂಬ ತೀವ್ರತರದ ಭಾವನೆ ನನಗೆ ಉಂಟಾಯಿತು.

ಇದಾದ ಮೇಲೆ ಇದೇ ತಿಂಗಳನಲ್ಲಿ ಅನಿ @ ಅನಿಲ್​ ಕುಮಾರ್​ ಈತನನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡು ಮಾತನಾಡಿ ಮಗ ನಿನಗೆ ಧೈರ್ಯ ಇದೆಯಾ ಅಂತ ಕೇಳಿದನು. ಆಗ ಅವನು ಏಕಣ್ಣ ಅಂತಾ ಕೇಳಿದಾಗ ಮೈಸೂರಿನಲ್ಲಿ ಗನ್​, ಏರ್​ ಗನ್​ ಸಿಗುತ್ತೆ ಗೊತ್ತಾ ಅಂತ ಕೇಳಿದೆನು, ಆಗ ಅವನು ಹೂ ಅಣ್ಣ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಸಿಗುತ್ತೆ  ಅಂತ ಹೇಳಿದನು. ಆಗ ನಾನು ಅವನಿಗೆ ನಿನ್ನ ಕೈಯಲ್ಲಿ ತೆಗೆದುಕೊಳ್ಳಲು ಆಗುತ್ತಾ ಅಂತ ಕೇಳಿದೆನು.  ಆಗ ಅವನು ಅದನ್ನು ತೆಗೆದುಕೊಳ್ಳಲು ಲೈಸೆನ್ಸ್​ ಬೇಕಾ ಅಣ್ಣ ಅಂತ ಹೇಳಿದನು, ಅದಕ್ಕೆಲ್ಲಾ ಲೈಸೆನ್ಸ್​ ಬೇಡ ಸಿಗುತ್ತಾ? ತೆಗೆದುಕೊಂಡು ಬಾ ಹೇಳಿ ಅವನಿಗೆ 1.000/ ರೂ ಕೊಟ್ಟು ಇನ್ನು ಉಳಿದ 500/- ಹಾಕಿ ತೆಗೆದುಕೊಂಡು ಬರುವಂತೆ ತಿಳಿಸಿದೆನು.  ನಂತರ ನಾನೇ 3 ದಿನ ಬಿಟ್ಟು  ಅನಿಗೆ ಪೋನ್​ ಮಾಡಿ ಅದು ಹೇಳಿದ್ನಲ್ಲ ಏನಾಯ್ತು ಅದು ಅಂತ ಕೇಳಿದೆನು. ಅಣ್ಣ ಬಂದಿದೆ ಅಂತ ಹೇಳಿದನು. ಅದನ್ನು ತೆಗೆದುಕೊಂಡು  ಬರೋಕೆ ಆಗುತ್ತಾ ಅಂತಾ ಕೇಳಿದನು.  ಆಯ್ತು ಅಂತಾ ಹೇಳಿ ಅನಿ ಮದ್ದೂರಿನ ಟಿಬಿ ಸರ್ಕಲ್​ ಬಳಿಗೆ ಬಂದು ಒಂದು ಬ್ಯಾಗ್​ನಲ್ಲಿ ಏರ್​ ಪಿಸ್ತೂಲ್​ಅನ್ನು ತೆಗೆದುಕೊಂಡು ಬಂದಿದ್ದನು. ಆಗ ನಾನು ಅದನ್ನು ತೆಗೆದು ನೋಡಿ ಅನಿಗೆ ವಾಪಾಸ್ಸು ಕೊಟ್ಟು ಏಮಿಂಗ್​ ಪ್ರಾಕ್ಟೀಸ್​ ಮಾಡುವಂತೆ ತಿಳಿಸಿ ಮೈಸೂರಿನ ಪ್ರೊಪೇಸರ್​ ಭಗವಾನ್​ ಮೇಲೆ ಕಣ್ಣು ಇಡು ಅವನು ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ದೇವರುಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಾನೆ ಅಮತ ತಿಳಿಸಿ  ಭಗವಾನ್​ ಅವರ ಅಡ್ರೆಸ್​ ಅನ್ನು ನಾನು ನಂತರ ಕೊಡುತ್ತೇನೆಂದು ಹೇಳಿದನು.  ನಂತರ ಅನಿ ಅಲ್ಲಿಂದ ಏರ್​ ಪಿಸ್ತೂಲ್​ ಅನ್ನು ತೆಗೆದುಕೊಂಡು ವಾಪಾಸ್ಸು ಹೋದನು.

ಇದಾದ ನಂತರ ಪ್ರವೀಣ್​ ಅಣ್ಣ ಇವರು ಗನ್​ ಬೇಕೆಂದು ಸುಮಾರು ಸಲ ಫೋನ್​ ಮಾಡುತ್ತಿದ್ದರು ನಾನು ಎನಾದರೂ ನೆಪಗಳನ್ನು ಹೇಳಿ ದಿನ ತಳ್ಳುತ್ತಿದ್ದೇನು. ದಿನಾಂಕ 07.01.2018 ರಂದು ಪ್ರವೀಣ್​ ಇವರು ಫೋನ್​ ಮಾಡಿ ಗನ್​ ಬಂದಿದೆಯಾ? ಅಂತಾ ಕೇಳಿದರು. ಆಗ ನಾನು ಬಂದಿದೆ ಅಂತಾ ತಿಳಿಸಿದೆನು, ಅದಕ್ಕೆ ಅವರು ಜನವರಿ 10, 11, 12 ರಂದು ನಮ್ಮವರನ್ನು ಕರೆದುಕೊಂಡು ಬರುವುದಾಗಿ  ತಿಳಿಸಿದರು. ಆಗ ನಾನು ಆಯ್ತು ಬನ್ನಿ ಎಂದು ಹೇಳಿದೆನು.

ನಂತರ ದಿನಾಂಕ 13. 01. 2018 ರಂದು ಬೆಳಗ್ಗೆ ಪ್ರವೀಣ್​ ಅಣ್ಣ ಇವರು ಫೋನ್​ ಮಾಡಿ ಸಂಜೆಯ ವೇಳೆಗೆ ಮದ್ದೂರಿಗೆ ಬರುವುದಾಗಿಯೂ ಮತ್ತು ಅವರು ನಾಲ್ಕು ಜನರು ಇರುವುದಾಗಿಯೂ ತಿಳಿಸಿದರು. ಮದ್ಯಾಹ್ನ ಮತ್ತೊಮ್ಮೆ ಫೋನ್​ ಮಾಡಿ ಅವರು ಕುಣಿಗಲ್​ನಲ್ಲಿ ಇರುವುದಾಗಿ ಮತ್ತು ಸಂಜೆ ವೇಳೆಗೆ ಬರುವುದಾಗಿ ತಿಳಿಸಿದರು. ಅದರಂತೆ ಸಂಜೆ 4. 30 ಗಂಟೆಯ ಸುಮಾರಿಗೆ ಪ್ರವೀಣಣ್ಣ ಮದ್ದೂರಿಗೆ ಬಂದಿರುವುದಾಗಿ ಕಾಯಿನ್​ ಬಾಕ್ಸ್​ನಿಂದ ಕರೆ ಮಾಡಿದರು. ಆಗ ನಾನು ಮದ್ದೂರಿನ ಸಿಪಾಯಿ ಹೋಟೆಲ್​ನ ಸೀನಣ್ಣನ ಮಾರುತಿ ಓಮ್ಮಿ ಪಡೆದು ಅಭಿಯನ್ನು ಗಾಡಿ ಓಡಿಸುವತೆ ಹೇಳಿ ಚಾಲಕನ್ನಾಗಿ ನೇಮಿಸಿ ನಾನು ದ್ವಿಚಕ್ರ ವಾಹನ ತೆಗೆದುಕೊಂಡು ಮದ್ದೂರು ಬಸ್​ ನಿಲ್ದಾಣಕ್ಕೆ ಹೋದೆವು. ಅಲ್ಲಿ ಪ್ರವೀಣ್​ ಅವರೊಂದಿಗೆದ್ದ ಇತರೇ ಹಿಂದಿ ಮಾತಣಾಡುವ ಮೂವರನ್ನು ಪರಿಚಯ ಮಾಡಿಕೊಟ್ಟ. ಅವರು ಹೆಸರು ಸಂಜಯ್​ ಬನ್ಸಾರೆ, ಪ್ರದೀಪ್​ ಮಹಾಜನ್​ ಮತ್ತು ನಿಹಾಲ್​ ಎಂದು ತಿಳಿಯಿತು. ಪ್ರವೀಣ್​ ಕಂಕುಳಲ್ಲಿ ಒಂದು ಸೈಡ್​ ಬ್ಯಾಗ್​ ಇತ್ತು. ಪ್ರವೀಣ್​ ಪರಿಚಯಿಸಿದ್ದ ಸಂಜಯ್​ ಬನ್ಸಾರೆ ಲೈಟಾಗಿ ದಾಡ ಬಿಟ್ಟಿದ್ದು ಸಣ್ಣ ಮೀಸೆ, ಕರ್ಲ್ಸ್​ ಹೇರ್​ ಇತ್ತು. ಈ ಮೂವರು ಮಹಾರಾಷ್ಟ್ರದವರು ಎಂದು ತಿಳಿಯಿತ್ತು. ಇವರನ್ನು ಕರೆದುಕೊಂಡು ಹೋಗಿ ಸೀನಣ್ಣನವರ ಫಾರ್ಮ್​ ಹೌಸ್​ ಬಳಿ ಹೋದೆವು. ಹೋಗುವಾಗ ಮಾರುತಿ ವ್ಯಾನ್​ನಲ್ಲಿ ಅಭಿಯೊಂದಿಗೆ ಬರುವಂತೆ ತಿಳಿಸಿದ್ದು, ತಾವೇ ಸ್ವತಹ ಚಾಲನೆ ಮಾಡಿಕೊಂಬರುವುದಾಗಿ ತಿಳಿಸಿದ್ದರಿಂದ ನಾನು ಮತ್ತು ಅಭಿ ಬೈಕ್​ ನಲ್ಲಿ ಮುಂದೆ ಹೋದೆವು.  ಗಿರಿ ಸಹ ನಮ್ಮ ಜೊತೆ ಸೇರಿ ಕೊಂಡು. ಅದೇ ವೇಳೆ ಸ್ನೇಹಿತ ಯೋಗಿಶ್​ ಸಹ ಅಲ್ಲಿದೆ ಬಂದನು. ನಾನು ಯೋಗಿಶ್​ನನ್ನು ವಾಪಸ್ಸು ಕಳಿಯಿಸುವಂತೆ ಕೈ ಸನ್ಹೆ ಮಾಡಿದೆ. ಅದೇ ಪ್ರಕಾರ ಅಭಿ ಮತ್ತು ಗಿರಿ ಯೋಗೀಶ್​ನನ್ನು ವಾಪಸ್ಸು ಕಳಿಯಿಸಿದ್ರು. ನಾನು ಅದೇ ವೇಳೆಗೆ ಶ್ರೀರಂಗಪಟ್ಟಣದ ಅನಿಲ್​ಗೆ ಬರುವಂತೆ ಹೇಳಿದ್ದೆ. ಈ ಮೂವರಿಗೆ ಅನಿಲ್​ ಕುಮಾರ್​ ಹುಡುಗನಿಗೆ ಪ್ರೋ.ಭಗವಾನ್​ ಬಗ್ಗೆ ವಿಷಯ ಕಲೆಹಾಕುವಂತೆ ನೇಮಿಸಿರುವುದಾಗಿದೆ ತಿಳಿಸಿದೆ. ಆಗ ಅನಿಲ್​ ನೀನು ಪಾರ್ಮ್​ ಹೌಸ್​ ಒಳಗೆ ಕರೆಯಿಸಿಕೊಂಡು ನೀನು ಒಳಗೆ ಸುಮ್ಮನೆ  ಹೋಗು ಅವರು ಮಾತನಾಡುವ ವಿಚಾರವನ್ನುಕೇಳಿ ತಿಳಿದಿಕೋ ನೀನು ನಿನ್ನ ಪ್ಯಾಮಿಲಿ ಬ್ಯಾಕ್​ಗ್ರೌಂಡ್​​ ಬಗ್ಗೆ ಯಾವುದೇ ವಿಚಾರವನ್ನು ಹೇಳ ಬೇಡ. ಅವರು ಏನು ಹೇಳಬೇಡ. ಏನು ಕೇಳುತ್ತಾರೋ ಅಷ್ಟಕ್ಕೆ ಮಾತ್ರ ಉತ್ತರಿಸುವಂತೆ ಹೇಳಿ ಕಳಿಯಿಸಿದೆ.

ಅಷ್ಟರಲ್ಲಿ ಅಲ್ಲಿಗೆ ಸಿಪಾಯಿ ಹೋಟೆಲ್​ ನೀನಣ್ಣ ಸಹ ಬಂದು ಹಿಂದಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗಳೊಂದಿಗೆ ಕೆಲಕಾಲ ಹಿಂದಿಯಲ್ಲಿ ಮತನಾಡಿದ್ರು. ಆ ವೇಳೆ ಪ್ರವೀಣ್​ ಮತ್ತು ಅನಿಕುಮಾರ್​ ಈತನ ಗೆಸರು ಊರು ವಿಳಾಸವನ್ನು ಕೇಳಿದ್ರು. ಏನು ಕೆಲಸ ಮಾಡುತ್ತೀಯಾ ಎಂದು ಕೇಳಿದ್ರು.,ಆದ ಅವನು ತನ್ನ ವಿವರಗಳನ್ನು ಹೇಳಿ ತಾನು ಶ್ರೀರಂಗಪಟ್ಟಣದಲ್ಲಿ ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದು, ಮೊಬೈಲ್​ ಸೇಲ್ಸ್​ ಅಂಡ್​ ಸರ್ವೀಸ್​ ಮಾಡುವುದಾಗಿ ಹೇಳಿದನು. ಆಗ ಅನಿಲ್​ಗೆ ನಿನಗೆ ಮೊಬೈಲ್​ ಬೋರ್ಡ್​ ಎಲ್ಲ ರೆಡಿ ಮಾಡೀಕೋ ಬರುತ್ತಾ? ಎಂದು ಕೇಳಿದ್ರು. ಅನಿಲ್​ ಬೋರ್ಡ್​ ಏನ ಮಾಡಬೇಕು ಎಂದು ಕೇಳಿದ. ಅದಕ್ಕೆ ಅವರು ಬೋರ್ಡ್​ನಲ್ಲಿ ಸೆರ್ಕ್ಯೂಟ್​  ರೆಡಿ ಮಾಡೋಕೆ ಬರುತ್ತಾ ಅಂತಾ ಪ್ರಶ್ನಿಸಿರು. ಅದಕ್ಕೆ ಅನಿಲ್​ ನನಗೆ ಅದೆಲ್ಲಾ ಬರಲ್ಲಾ ಚಿಕ್ಕ ಪಟ್ಟ ಡಿಸ್​ ಪ್ಲೇ ರೆಡಿ ಮಾಡುತ್ತೇನೆಂದು ಬೇಕಾದರೆ ಸರ್ಕ್ಯೂಟ್​ ರೆಡಿ ಮಾಡೋ ಕೆಲ್ಸ್​ ಕಲಿಯುತ್ತೇನೆಂದು ಹೇಳಿದನು. ನಂತರ ಎಲ್ರೂ ಕಾಫಿ  ಮತ್ತು ಮದ್ದೂರು ವಡೆ ತರಿಸಿ ತಿಂದವು. ನಾನು ಅನಿಯನ್ನು ಪ್ರವೀಣ್​ ಮತ್ತು ಹಿಂದಿ ಮಾತನಾಡುತ್ತಿದ್ದ ವ್ಯಕ್ತಿಗಳನ್ನು ತೋರಿಸಿ ಅವರುಗಳ ಬಗ್ಗೆ ನಿನಗೆ ಏನು ಅನಿಸುತ್ತದೆ ಅಂತ ನಾನು ಕೇಳಿದೆ. ಆಗ ಅನುಲ್​ ಅವರು ಡೇಂಜರ್​ ಅನಿಸುತ್ತದೆ.,ನೋಡಲು ಕ್ರಿಮಿನಲ್ಸ್​ ತರ ಕಾಣುತ್ತಾರೆ ಎಂದು ಹೇಳಿದನು. ಆಗ ನಾನು ಅವರು ದೊಡ್ಡ ಡೊಡ್ಡ ಕೆಲಸ ಮಾಡಿರುವವರಾಗಿದ್ದು, ಇನ್ನೂ ದೊಡ್ಡ ಕೆಲಸ ಮಾಡುತ್ತಾರೆ ಆಗ ನಿನಗೆ ಗೊತ್ತಾಗುತ್ತೆ ಅಂತ ತಿಳಿಸಿದ. ಸ್ವಲ್ಪ ಹೊತ್ತು ಬಿಟ್ಟು ನಾವು ಸೀನಣ್ಣ ಸಿಪಾಯಿ ಹೋಟೆಲ್​ನಲ್ಲಿ ಊಟ ಮಾಡಿದೆವು.

ನಾನು ಪ್ರವೀಣ್, ಅಭಿ. ಗಿರಿ ಹಾಗೂ ಮತ್ತಿತರು ಓಮ್ಮಿ ಕಾರಿನಲ್ಲಿ ಗುಂಡಾಲ್​ ಡ್ಯಾಮ್​ ಕಡೆಗೆ ರಾತ್ರಿ 11;30 ಕ್ಕೆ ಹೋದೆವು. ಸತ್ತೆಗಾಲ ಹ್ಯಾಂಡ್​ ಫೋಸ್ಟ್​​ದಾಟಿಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸಿದ್ದು, ಪ್ರವೀಣ್​ ಮುಸ್ಲಿಂ ಜನಾಂಗದ ಜಾಸ್ತಿ ಆಗಿದೆ, ಹಿಂದೂ ಧರ್ಮಕ್ಕೆ ಕುತ್ತು ಬಂದಿದೆ. ಇರದ ವಿರುದ್ಧ ನಾವು ಶಸ್ರ್ತದಾರಿಗಳಾಗಿ ಹೋರಾಟಮಾಡಬೇಕಿದೆ. ಇದಕ್ಕೆ ಗನ್​ ರಿವಾಲ್ವರ್​ ಬೇಕಾಗಿದೆ ಅದಕ್ಕಾಗಿ ಬಂದಿದ್ದು, ಬೇಗ ಅರೇಂಜ್​ ಮಾಡುವಂತೆ ಹೇಳಿದನು. ಆಗ ನಮ್ಮವರು ಬಳಿ  ವಿಚಾರ ಮಾಡಿಕೊಂಡ ರವಿ ಎಂಬುವವರ ತೋಟದ ಬಳಿ  ಅಲ್ಲಿ ಸ್ವಲ್ಪ ಹೊತ್ತು ಇದ್ದು, ನಂತರ ವಾಪಸ್ಸು ಬಂದು ನಮ್ಮವರ ಕಡೆಯಿಂದ ಒಂದು ಸಿಗ್ನಲ್​ ವಂದಲ್ಲ, ಅವರಿಗೆ ನಿಮ್ಮ ಮೇಲೆ ನಂಬಿಕೆ ಇದ್ದಂತಿಲ್ಲ ಎಂದು ತಿಳಿಸಿ, ಅಲ್ಲಿಂದ ಮುಂದೆ ಡ್ಯಾಮ್​ ಕಡೆಕರೆದುಕಂಡು ಹೋಗಿದ್ದು, ಅಲ್ಲಿ ಹಿಂದಿಯ ವ್ಯಕ್ತಿಗಳು ತಮಗೆ ಗನ್​ ಮತ್ತು ಗುಂಡುಗಳನ್ನು ರೆಡಿ ಮಾಡಿದ ನಂತರ ನಮ್ಮಗಳನ್ನು ಕರೆಯಬೇಕು. ನಾವುಗಳು ಅಲ್ಲಿಂದ ಇಲ್ಲಿ ಬಂದ ಮೇಲೆ ಸಬೂಬು ಏಳುವುದು ಸರಿಯಲ್ಲ ಎಂದು ಹೇಳಿದ ಮಾತಿಗೆ ಅವರೊಂದಿಗೆ ಮಾತಿಗೆ ಮಾತು ನಡೆದು ನಂತರ ನಾನು ಅಭಿ ಓಮ್ಮಿ ಕಾರ್​ ಓಡಿಸುವಂತೆ ಹೇಳಿಎ ನಾನು ಅನಿಯೊಂದಿಗೆ ಗಾಡಿಯಲ್ಲಿ ವಾಪ್ಸ್ಉ ಮಂದ್ದೂರಿಗೆ ಬಂದೆವು. ನಂತರ ಮದ್ದೂರಿನಲ್ಲಿದ್ದ ರೂಮ್​ನಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಇದ್ದರಿಂದ ಪ್ರವೀಣ್ ಮತ್ತು ಹಿಂದಿ ಜನರು ಮದ್ದೂರಿನ ಬಸ್​ ನಿಲ್ದಾಣದ ಬಾತ್​ ರೂಮ್​​ನ ಬಳಿ ಮತ್ತೆ ಸುಮಾರು ಹೊತ್ತ ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ, ಧರ್ಮದ ಬಗ್ಗೆ ಮಾತನಾಡಿಕೊಂಡಿದ್ದು, ನಂತರ ಅವರು ಬಸ್​ನಲ್ಲಿ ಬೆಂಗಳುರಿಗೆ ಹೋದ್ರು. ನಾನು ಅನಿ ಅವನ ಬುಲೆಟ್​ ನಲ್ಲಿ ಮೈಸೂರಿಗೆ ಬಿಡುವಂತೆ ಹೇಳಿದೆ. ಅನಿ ಚಳಿ ಆಗಲ್ಲ ಅಣ್ಣ ಕಾರ್​ನಲ್ಲಿ ಆದ್ರೆ ಬೇಗಾ ಹೋಗಬಹುದೆಂದು ಹೇಳಿದನು. ಆಗ ನಂಗೆ ಊರಿಗೆ ಹೋಗವಂತೆ ತಿಳಿಸಿ ಸೀನಣ್ಣನಕಾರಿನಲ್ಲಿ ಅಭಿಗೆ ನನ್ನನ್ನು ಮೈಸೂರಿ ರೈಲ್ವೆ ನಿಲ್ದಾಣಕ್ಕೆ ಡ್ರಾಪ್​ ಮಾಡಿಕೊಂಡದೆ, ಅಲ್ಲಿಂದ ಬೀರೂರಿಗೆ ಹೋಗುವುದಾಗಿ ತಿಳಿಸಿದೆ.ನಾನು ಬೀರೂರಿಗೆ ಹೋಗಿದ ನಂತರ ಪ್ರವೀಣ್​ ಹಲವು ಬಾರಿ ಕಾಲ್​ ಮಾಡಿದ್ದು ನಾನು ಫೋನ್​ ರಿಸೀವ್​ ಮಾಡಿಲ್ಲ.

ಇದಾದ  ಮೂರು ದಿನಗಳ ನಂತರ ಮತ್ತೆ ನಾನು ಅನಿಗೆ ಫೋನ್​ ಮಾಡಿ ಮೈಸೂರಿನ ಬಸ್​ ನಿಲ್ದಾಣಕ್ಕೆ ಕರೆಸಿಕೊಂಡು ಮಾತನಾಡಿ ಶೂಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಿಯಾ? ಎಂದು ಕೇಳಿದೆ.  ಆಗ ಮಾಡ್ತಾ ಇದ್ದೀನಿ ಅಣ್ಣ ಅಂತ ಹೇಳಿದ. ಆಗ ನಾನು ಅನಿಗೆ ಯಾವ ರೀತಿ ಮಾಡುತ್ತಿದ್ದಿಯಾ? ಎಂದೆ. ಆಗ ಕುಳಿತುಕೊಂಡು ಮಾಡುತ್ತಿದ್ದೇನೆಂದು ಹೇಳಿದ. ಅದಕ್ಕೆ ನಾನು ಪ್ರಾಕ್ಟೀಸ್​ ಚೆನ್ನಾಗಿ ಮಾಡು ಅದೇ ರೀತಿ ನಿಂತುಕೊಂಡು ಮಾಡು, ಮಲಗಿಕೊಂಡು , ನಡೆದುಕೊಂಡು ಹೋಗುವಾಗ, ಕುತುಕೊಂಡು ಶೂಟಿಂಗ್​  ಪ್ರಾಕ್ಟೀಸ್​ ಮಾಡು ಅಂತ ಹೇಳಿದೆ. ಅದರಂತೆ ಅನಿಲ್​  ಮಾಡುತ್ತಿದ್ದ. ಪ್ರವೀಣ್​ ನನಗೆ ಪ್ರತಿಬಾರಿ ಕಡೆ ಮಾಡಿದಾಗ ಯಾವುದೋ ಉದ್ದೇಶದಿಂದ ಕೇವಲ ಕಾಯಿನ್​ ಬೂತ್​ ನಿಂದ ಮಾತ್ರ ಕಡೆ ಮಾಡು ಮಾತನಾಡುತ್ತಿದ್ದನು. ನನ್ನ ಬಳಿ ಸಂಭಾಷಣೆಗಳನ್ನು ನಡೆಸುವಾಗಿ ಗೌಪ್ಯತೆಯಿಂದ ಮತ್ತು ಪರೋಕ್ಷವಾಗಿ ಮಾತನಾಡುತ್ತಿದ್ದನು. ನಾನು ಸಹ ಆತನಂಯೇ ನಡೆದುಕೊಳ್ಳುತ್ತದೆ. ಆತನ ಬಳಿ ಮೊಬೈಲ್​ ಇರುವುದು ನಾನು ನೋಡಿಲ್ಲ.

ಈಗ್ಗೆ 7-8 ವರ್ಷಗಳ ಹಿಂದೆ ಕಲಾಸಿಪಾಳ್ಯದ ಗನ್​ ಹೌಸ್​ ಒಂದರಲ್ಲಿ ಕೆಲಸ ಮಾಡುವವ್ಯಕ್ತಿಯೊಬ್ಬನಿಂದ 18 ಗುಂಡುಗಳನ್ನ ಹಾಗೂ ಇನ್ನೊಬ್ಬ ವ್ಕ್ತಿಯಿಂದ 3 ಗುಂಡುಗಳನ್ನು ಖರೀದಿಸಿ ನನ್ನ ಬಳಿ ಅಕ್ರಮವಾಗಿ ಯಾವುದೇ ಲೈಸೆನ್ಸ್​ ಇಲ್ಲದೆ ಇಟ್ಟುಕೊಂಡಿದ್ದು, ಆ ಪೈಕಿ ಉಪ್ಪಾರಪಪೇಟೆ ಪೊಲೀಸರು ನನ್ನನ್ನು ಹಿಡಿದುಕೊಂಡಾಗ 5 ಜೀವಂತ ಮದ್ದುಗುಂಡುಗಳನ್ನು ಬೀರೂರಿನ ನನ್ನ ಮನೆಯಿಂದ 11 ಜೀವಂತ ಗುಂಡಗಳು. 2 ಪ್ರವೀಣ್​ ತೆಗೆದಉಕೊಂಡು ಹೋಗಿದ್ದು, ಇನ್ನು 3 ಗುಂಡುಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗ ನ್ನನ್ನು ಕರೆದುಕೊಂಡು ಹೋದ್ರೆ ಗೌರಿ ಲಂಕೇಶ್​ ಕೊಲೆಗೆ ಸಂಚು ರೋಪಿಸಿದ ವಿಜಯನಗರ ಆರ್ಕ್​, ಬೆಳಗಾಂಗೆ ಹೋಗಿ ಇಬ್ಬರು ವ್ಯಕ್ತಿಗಳನ್ನು ಭೇಟಿ ಮಾಡಿ ಬಿಳಿ ಬಣ್ಣದ ಮಾರುತಿ 800 ಕಾರಿನಲ್ಲಿ ಸುತ್ತಾಡಿದ ಸ್ಥಳಗಳನ್ನು ಮತ್ತು ಪ್ರವೀಣ್​ ಸಿಕ್ಕರ ಆತನನ್ನು ಗುರ್ತಿಸಿ ತೋರಿಸುತ್ತೇನೆ.

Related Articles

Comments (0)

Leave a Comment