- Uncategorized
- ಬೆಂಗಳೂರು
- ರಾಜಕೀಯ
- ರಾಜ್ಯ
- Like this post: 0
ಇದು ಸರ್ಪೈಸ್ ಬಜೆಟ್: ಚೊಚ್ಚಲ ಬಜೆಟ್ ಸಮರ್ಥಿಸಿಕೊಂಡ ಸಿಎಂ
- by Suddi Team
- July 5, 2018
- 137 Views
ಬೆಂಗಳೂರು:ಈಬಜೆಟ್ ನಲ್ಲಿ ಏನೂ ಇಲ್ಲ ಅಂತ ಅಂದುಕೊಳ್ಳುವುದು ಬೇಡ ಬೇರೆ ರೀತಿಯಲ್ಲಿ ಮಾತನಾಡುವುದು ಬೇಡ.ಇದೊಂದು ಸರ್ಪೈಸ್ ಬಜೆಟ್,ಸೋಮವಾರದಿಂದ ಬಜೆಟ್ ಬಗ್ಗೆ ಚರ್ಚೆ ನಡೆಯಲಿದೆ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾಜಸ್ವ ವೆಚ್ಚ ೧.೬೬.೩೯೩ ಕೋಟಿ ಇದೆ ಬಂಡವಾಳ ವೆಚ್ಚ ಶೇ ೧೮.೭೯ ಕ್ಕೆ ಹೆಚ್ಚಳವಾಗಿದೆ ವಿತ್ತೀಯ ಹೊಣೆಗಾರಿಕೆ ಶಾಸನ ಬದ್ಧವಾಗಿದೆ ಯಾವುದೇ ಆರ್ಥಿಕ ಅಶಿಸ್ತಿಗೆ ಅವಕಾಶ ಕೊಟ್ಟಿಲ್ಲ.೧೧೦ ಕೋಟಿ ಸರ್ ಪ್ಲಸ್ ಚಾರ್ಜ್ ಇಟ್ಟಿದ್ದೇವೆ ೩೪ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದರು.
ಅಶೋಕ್ ಹಾಸನಕ್ಕೆ ಮಾತ್ರ ಅವಕಾಶ ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ ಆದರೆ ಬೆಂಗಳೂರಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅವಕಾಶ ನೀಡಿದ್ದೇವೆ ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರಂ-ಗೊರಗುಂಟೆ ಪಾಳ್ಯ, ರಿಚ್ಮಂಡ್ ಸರ್ಕಲ್,ಸೇರಿ ಒಳಭಾಗಗಳು, ಮಿನರ್ವ ಸರ್ಕಲ್ ನಿಂದ ನೈಸ್ ರೋಡ್ ಜಂಕ್ಷನ್, ಇಲ್ಲಿ ಎಲಿವೆಟೇಡ್ ಕಾರಿಡಾರ್ ಗೆ ಒಪ್ಪಿಗೆ ಕೊಟ್ಟಿದ್ದೇವೆ, ಇದು ಬೆಂಗಳೂರು ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮಾಡಿದ್ದು, ಇದನ್ನ ಅಶೋಕ ಚಕ್ರವರ್ತಿ ತಿಳಿದುಕೊಳ್ಳಬೇಕು ಎಂದು ಟೀಕಿಸಿದ್ರು.
ಬಜೆಟ್ ಓದುವಾಗ ಬಿಜೆಪಿ ನಾಯಕರು ಎಲ್ಲಿ ನೋಡ್ತಿದ್ರೋಆ ರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ೧೦ ಕೋಟಿ ಇಟ್ಟಿದ್ದೇವೆ ಅದನ್ನ ಬಜೆಟ್ ನಲ್ಲಿ ತಿಳಿಸಿಲ್ಲ ಅಷ್ಟೇ ಹಾಸನಕ್ಕೆ ಹೆಚ್ಚಿನ ಕೊಡುಗೆ ಅಂತ ಆರೋಪಿಸ್ತಾರೆ ಹಾಸನದಲ್ಲಿ ಜೆಡಿಎಸ್ ಶಾಸಕರಲ್ಲ,ಬಿಜೆಪಿ ಶಾಸಕರಿರೋದು ಅವರು ಬೇಡ ಅಂದರೆ ವಾಪಸ್ ಪಡೆದುಕೊಳ್ತೇನೆ ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು ನೀಡಿದ್ರು.
ಇನ್ನೂ ಆರೇಳು ಸಾವಿರ ಕೋಟಿ ಹಣ ನಾವು ಒದಗಿಸಬೇಕಿದೆ.ಈ ಹಣವನ್ನ ನಾವು,ಪರಮೇಶ್ವರ್ ಹೊಂದಿಸೊಕೆ ಆಗುತ್ತಾ?ಕೇಂದ್ರ ಸರ್ಕಾರ ಏನು ಹೆಚ್ಚಿನ ನೆರವು ಕೊಡುತ್ತಾ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ಹೆಚ್ಚಿಲ್ಲ ದಕ್ಷಿಣ ಭಾರತದಲ್ಲಿ ಅತಿ ಕಡಿಮೆ ದರ ನಮ್ಮದು ಬಿಜೆಪಿ ನಾಯಕರು ಚಪ್ಪಾಳೆಯನ್ನ ಕೇಂದ್ರದಲ್ಲಿ ಹೊಡೆಸಬೇಕು. ೯ಭಾರಿ ಪೆಟ್ರೋಲ್ ಬೆಲೆ ಕೇಂದ್ರದಿಂದ ಏರಿಕೆಯಾಗಿದೆ ಬಿಜೆಪಿ ನಾಯಕರು ಕೇಂದ್ರದಲ್ಲಿ ಟೇಬಲ್ ಕುಟ್ಟಲಿ. ಶೆಟ್ಟರ್ ಕಾಲದಲ್ಲಿ ಸಾಲಮನ್ನಾ ಮಾಡಿದ್ರು ಹಣ ಪಾವತಿ ಮಾಡಿದ್ದು ೮೦೦ ಕೋಟಿ ಮಾತ್ರ.ಉಳಿದ ಹಣವನ್ನ ತೀರಿಸಿದ್ದು ಸಿದ್ದರಾಮಯ್ಯ ಏನು ಹಣವನ್ನ ಹುಬ್ಬಳ್ಳಿಯಿಂದ ತರ್ತಾರಾ ಶೆಟ್ಟರ್ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದರು.
ಕರಾವಳಿ ಭಾಗದ ಜನರಿಗೂ ಹೇಳುತ್ತೇನೆ ಬೆಂಕಿ ಹಚ್ಚುವವರನ್ನ ನಂಬ ಬೇಡಿ ಎಂದು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ ಬೇರೆ ಯಾವ ಕಾರ್ಯಕ್ರಮ ಬೇಕು ಹೇಳಿ ಎಲ್ಲವನ್ನೂ ಕೊಡುತ್ತೇವೆ ಯಾವ ಸೆಕ್ಟರ್ ನಾವು ಕೈಬಿಟ್ಡಿದ್ದೇವೆ ಹೇಳಿ ನೊಡೋಣ ಕಲಬುರಗಿಯಲ್ಲಿ ಸೋಲಾರ್ ಪ್ಲಾಂಟ್ ಹಾಕುತ್ತಿದ್ದೇವೆ ಇದನ್ನ ಮಾಡ್ತಿರೋದು ನಿಮ್ಮ ಯುವಕರಿಗೆ ಉದ್ಯೋಗ ಕೊಡೋಕೆ ಬಳ್ಳಾರಿ,ಕೊಪ್ಪಳಕ್ಕೂ ಯೋಜನೆ ಕೊಟ್ಟಿದ್ದೇವೆ ಸ್ವಲ್ಪ ಹೃದಯ ವೈಶಾಲ್ಯತೆ ತೋರಿಸಿ ಕಲ್ಮಶ ಮನಸ್ಸು ಇಟ್ಟುಕೊಂಡರೆ ಎಲ್ಲವೂ ಅಸತ್ಯವೇ ಕಾಣುತ್ತೆ ಎಂದು ಪದೇ ಪದೇ ಬಿಜೆಪಿ ನಾಯಕರಿಗೆ ಸಿಎಂ ಟಾಂಗ್ ನೀಡಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳನ್ನ ಮುಂದುವರೆಸಿದ್ದೇವೆ ಕಳೆದ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ ಫ್ರೆಬ್ರವರಿ ೧೬ ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ ಸಿದ್ದರಾಮಯ್ಯದ ಎಲ್ಲ ಕಾರ್ಯಕ್ರಮಗಳು ಎಲ್ಲ ಮುಂದುವರೆದಿದೆ ಅವ್ರ ಮಂಡಿಸಿದ್ದ ಬಜೆಟ್ ನಾನು ಇವತ್ತು ಓದಿಲ್ಲ ಅದನ್ನ ಓದಿದ್ರೆ ಇವತ್ತು ಸಂಜೆ ಆರು ಗಂಟೆಯಾಗುತ್ತಿತ್ತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇದಿದಂತೆ ಅನೇಕ ಕಾರ್ಯಕ್ರಮಗಳು ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದ್ರು.
ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನಾವು ನೀಡಿದ್ದೇವೆ. ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಿಯಪುರಕ್ಕೆ ಎಷ್ಟು ಕೊಟ್ಟಿದ್ದೇವೆ ಎಂದು ಸದನದಲ್ಲಿ ಉತ್ತರ ಕೊಡುತ್ತೇನೆ. ಹಾಸನ – ಮಂಡ್ಯಕ್ಕೆ ಸಾಕಷ್ಟು ಹಣ ಕೊಟ್ಟಿದ್ದಾರೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂದಿನ ಸರ್ಕಾರದ ಯಾವ್ ಕಾರ್ಯಕ್ರಮಗಳು ಮೊಟಕುಗೊಳಿಸಿಲ್ಲ ರೈತರ ಸಾಲಮನ್ನಾ ಮಾಡಿರೋವ ಬಗ್ಗೆ ಕೃತಜ್ಞತೆ ಸಲ್ಲಿಸುವ ಹೃದಯ ವೈಶಾಲತೆ ನಿಮಗೆ ಇಲ್ವಾ ಈಗಿನ ಬಜೆಟ್ ಹಾಗು ಕಳೆದ ಕಾಂಗ್ರೆಸ್ ಸರ್ಕಾರದ ಬಜೆಟ್ ನ ಕಾರ್ಯಕ್ರಮಗಳು ಮುಂದುವರೆಯಲಿದೆ ಎನ್ನುತ್ತಾ ಬಿಜೆಪಿ ನಾಯಕರ ವಿರುದ್ದ ಸಿಎಂ ಸಿಡಿಮಿಡಿಗೊಂಡರು.
ಆರ್ಥಿಕ ಶಿಸ್ತು ಕಾಪಡಿಕೊಂಡು ಬಜೆಟ್ ಮಂಡನೆ ಮಾಡಿದ್ದೇನೆ.ಬಿಜೆಪಿ ನಾಯಕರ ಮೆಚ್ಚುಗೆ ನನಗೆ ಬೇಕಾಗಿಲ್ಲ ರಾಜ್ಯದ ಜನತೆಯ ಸರ್ಟಿಫಿಕೇಟ್ ನನಗೆ ಮುಖ್ಯ ಕಾಂಗ್ರೆಸ್ ಬೆಂಬಲದಿಂದಲೇ ನಾನು ಉತ್ತಮ ಬಜೆಟ್ ಮಂಡನೆ ಮಾಡಿದ್ದೇನೆ ರೈತರ ಸಾಲಮನ್ನಾ ವಿಚಾರದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ ಟ್ವೀಟ್ ಸಾಕು ಮೈತ್ರಿ ಸರ್ಕಾರ ಹೇಗೆ ನಡೆಯುತ್ತಿದೆ ಎಂದು ನಿಮಗೆ ಗೊತ್ತಾಗುತ್ತದೆ ಎಂದ್ರು.
Related Articles
Thank you for your comment. It is awaiting moderation.
Comments (0)