ಉಪ ಸಭಾಪತಿ ಹುದ್ದೆ ಖಾಲಿ: ಮೋದಿ ಪತ್ರ ಬರೆದ ಖರ್ಗೆ

ನವದೆಹಲಿ: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಲೋಕಸಭೆಯಲ್ಲಿ ಉಪ ಸಭಾಪತಿ ಹುದ್ದೆ ಖಾಲಿ ಇರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಂವಿಧಾನದ 93ನೇ ವಿಧಿಯನ್ನು ಉಲ್ಲೇಖಿಸಿ, ಲೋಕಸಭೆಗೆ ಸಭಾಪತಿ ಮತ್ತು ಉಪ ಸಭಾಪತಿಯನ್ನು ಆಯ್ಕೆ ಮಾಡುವುದು ಖಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.

17ನೇ ಲೋಕಸಭೆಯಿಂದ ಉಪ ಸಭಾಪತಿ ಹುದ್ದೆ ಖಾಲಿ ಇದ್ದು, ಪ್ರಸ್ತುತ ನಡೆಯುತ್ತಿರುವ 18ನೇ ಲೋಕಸಭೆಯಲ್ಲೂ ಈ ಹುದ್ದೆ ಖಾಲಿಯಾಗಿಯೇ ಉಳಿದಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಈ ಹಿಂದೆಂದೂ ಕಂಡುಬಂದಿಲ್ಲದ ಸಂಗತಿಯಾಗಿದೆ. ಸಾಂಪ್ರದಾಯಿಕವಾಗಿ, ಪ್ರಮುಖ ವಿರೋಧ ಪಕ್ಷದಿಂದ ಉಪ ಸಭಾಪತಿಯನ್ನು ನೇಮಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲಾಗುತ್ತಿತ್ತು. ಈ ಬೆಳವಣಿಗೆಯು ಸಂವಿಧಾನದ ಸುಸ್ಥಾಪಿತ ನಿಬಂಧನೆಗಳು ಮತ್ತು ಲೋಕಸಭೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಉಪ ಸಭಾಪತಿಯ ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬ ಮಾಡದೆ ಆರಂಭಿಸುವಂತೆ ಅವರು ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಲೋಕಸಭೆ ಮತ್ತು ಸಂಸತ್ತಿನ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಕಾಪಾಡುವ ಮಹತ್ವವನ್ನು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

Related Articles

Comments (0)

Leave a Comment