ಕೆಆರ್ ಪುರಂ ಉತ್ಸವದಲ್ಲಿ ಸಿದ್ದಗಂಗಾ ಶ್ರೀಗಳ 111 ಅಡಿ ಕಟೌಟ್

ಬೆಂಗಳೂರು, ಫೆಬ್ರವರಿ 20: ಸಿಲಿಕಾನ್ ಸಿಟಿ ಬೆಂಗಳೂರು ಇದೇ ಮೊದಲ ಬಾರಿಗೆ ಅತ್ಯದ್ಭುತವಾದ ಸಾಂಸ್ಕೃತಿಕ ಉತ್ಸವಕ್ಕೆ ಸಾಕ್ಷಿಯಾಗಲಿದೆ.  ಫೆಬ್ರವರಿ  24 ರಿಂದಮಾರ್ಚ್ 10 ರವರೆಗೆ ಕೆ.ಆರ್.ಪುರ ಉತ್ಸವ ನಡೆಯಲಿದೆ.ಒಟ್ಟು15 ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕøತಿಕ ಉತ್ಸವಹಲವಾರು ಅಚ್ಚರಿಗಳು, ಮನೋರಂಜನೆ, ಮಾರ್ಗದರ್ಶಿಉಪನ್ಯಾಸಗಳು  ಸೇರಿದಂತೆ  ಇನ್ನಿತರೆ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸಿಕೊಡಲಿದೆ.

ಬರೋಬ್ಬರಿ 15 ದಿನಗಳ ಕಾಲ ನಡೆಯುತ್ತಿರುವ  ಸಾಂಸ್ಕೃತಿಕ ಉತ್ಸವ ಇದಾಗಿದ್ದು,  ಸಮಾಜ  ಸೇವಕರಾದ  ಕೆ.ಎನ್.ಪ್ರಕಾಶ್ ಅಧ್ಯಕ್ಷತೆಯ ವಲ್ರ್ಡ್  ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್  ನೇತೃತ್ವದಲ್ಲಿ ವೀರ್‍ಗ್ರೂಪ್ ಸಂಸ್ಥೆಯ  ಉಸ್ತುವಾರಿಯಲ್ಲಿ  ಈ  ಉತ್ಸವನಡೆಯುತ್ತಿದೆ.

ಈ ಉತ್ಸವದ ಹಿಂದಿನ ಉದ್ದೇಶ ಸಮಾಜಸೇವೆಯಾಗಿದೆ. ಇದರಿಂದ ಸಂಗ್ರಹವಾಗುವ  ಹಣವನ್ನು  ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತದೆ.  ಗುದ್ದಲಿ ಪೂಜೆಯ ನಂತರ  ಈ ಮಹತ್ವದ ಉತ್ಸವದ  ಬಗ್ಗೆ ಮಾಹಿತಿ ನೀಡಿದ  ವಲ್ರ್ಡ್  ಹೆಲ್ತ್ ಅಂಡ್ಪಾವರ್ಟಿ  ಟ್ರಸ್ಟ್‍ನ ಅಧ್ಯಕ್ಷರಾದ ಕೆ.ಎನ್.ಪ್ರಕಾಶ್,ಇದು ಕೇವಲ ಕೆ.ಆರ್.ಪುರ ಉತ್ಸವವಲ್ಲ. ಇದು ಇಡೀ ಬೆಂಗಳೂರಿನ ಉತ್ಸವವಾಗಿದೆ. ಸತತ 15 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ನಾಡಿನ ವಿವಿಧ  ಕ್ಷೇತ್ರಗಳ ದಿಗ್ಗಜರು ವೇದಿರೆ  ಎಂದರು.

ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಬೃಹತ್ ಕಟೌಟ್‍ಗೆ ಹೈಡ್ರಾಲಿಕ್ ಕ್ರೇನ್ ಮೂಲಕ  ಪುಷ್ಪಾರ್ಚನೆ ನಡೆಸಲಾಗುತ್ತದೆ. ನಾವು ಜನರಿಗೆ  ಮನೋರಂಜನೆ ನೀಡುವುದಷ್ಟಕ್ಕೆ ಈ  ಕಾರ್ಯಕ್ರಮವನ್ನು  ಸೀಮಿತಗೊಳಿಸಿಲ್ಲ. ಬದಲಾಗಿ  ಮನೋರಂಜನೆಯ ಜೊತೆ ಮಾನವತೆಯ
ಸಾರ್ಥಕತೆ ಎಂಬ ಟ್ಯಾಗ್‍ಲೈನ್‍ನೊಂದಿಗೆ  ಕಾರ್ಯಕ್ರಮ ನಡೆಸುತ್ತಿದ್ದೇವೆ. ಈಕಾರ್ಯಕ್ರಮದ  ಮೂಲಕ ಹಲವಾರು ಸಮಾಜಮುಖಿಕಾರ್ಯಕ್ರಮಗಳನ್ನು ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ  ಗ್ರಾಮ ದತ್ತು ತೆಗೆದುಕೊಳ್ಳುವ  ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ಈ ಗ್ರಾಮದಲ್ಲಿ ತುಂಡುಬಟ್ಟೆಗಳಲ್ಲಿ ಹೆಣೆದ ಜೋಪಡಿಗಳಲ್ಲಿ 180ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಜನಸಂಖ್ಯೆ ಸುಮಾರು 3  ಸಾವಿರದಷ್ಟಿದೆ.  ಕಿಂದರಿಜೋಗಿ ಎಂದು ಕರೆಯಲ್ಪಡುವ ಈ ಜನಾಂಗ   ಮೂಲತಃ ಜಾನಪದ ಕಲಾವಿದರನ್ನು ಹೊಂದಿದೆ.  ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕುಟುಂಬಗಳಿವು. ಅಗತ್ಯ ಮೂಲಭೂತ ಸೌಲಭ್ಯಗಳಿಂದ
ವಂಚಿತವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಕುಡಿಯುವ ನೀರು, ವಿದ್ಯುತ್,
ಮಕ್ಕಳಿಗೆ ಶಿಕ್ಷಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿರ್ಧಾರ ಮಾಡಿದ್ದೇವೆ ಎಂದರು.

ಇದಲ್ಲದೇ, ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಕಟೌಟ್‍ಗೆ ಪುಷ್ಪಾರ್ಚನೆ
ಸಲ್ಲಿಸಲಾಗುತ್ತದೆ ಮತ್ತು ಸಿದ್ದಗಂಗಾ ಮಠದಲ್ಲಿ  ವ್ಯಾಸಂಗ ಮಾಡುತ್ತಿರುವ 111ವಿದ್ಯಾರ್ಥಿಗಳ  ಶೈಕ್ಷಣಿಕ ಖರ್ಚು ಮತ್ತು ಅವರ ಇತರೆ ಖರ್ಚುಗಳನ್ನು ವೀರ್ ಗ್ರೂಪ್ ಭರಿಸಲಿದೆ
ಎಂದು ತಿಳಿಸಿದರು.

ಈ ಸಾಂಸ್ಕೃತಿಕ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ರಂಗದ ದಿಗ್ಗಜ ಕ್ರೇಜಿಸ್ಟಾರ್  ರವಿಚಂದ್ರನ್  ಮತ್ತು ಸಂಗೀತ ಮಾಂತ್ರಿಕ ಹಂಸಲೇಖ ಅವರು ಹಲವು ವರ್ಷಗಳ ನಂತರ ಇದೇ ಮೊದಲ  ಬಾರಿಗೆ ಫೆಬ್ರವರಿ 24 ರಂದು ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ.ರವಿಹಂಸ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಇಬ್ಬರೂ ಸಂಗೀತ ರಸಸಂಜೆಯನ್ನು
ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಸಿದ್ದಗಂಗಾ ಮಠದ ಸಿ ಮಹಾಸ್ವಾಮೀಜಿ ಅವರು,“ ವಲ್ರ್ಡ್  ಹೆಲ್ತ್ ಅಂಡ್
ಪಾವರ್ಟಿಟ್ರಸ್ಟ್ ಮತ್ತು ವೀರ್ ಗ್ರೂಪ್ ಸಂಸ್ಥೆಗಳು ಹಲವಾರುಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.  ನಮ್ಮ ಸಿದ್ದಗಂಗಾ  ಮಠದಮ 111 ಮಕ್ಕಳವಿದ್ಯಾಭ್ಯಾಸದ  ಎಲ್ಲಾ ಖರ್ಚುಗಳನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳುತ್ತಿರುವುದು ಆದರ್ಶಪ್ರಾಯವಾಗಿದೆ’’  ಎಂದು ಬಣ್ಣಿಸಿದರು.

“ಇದೇ ರೀತಿ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮ ದತ್ತುತೆಗೆದುಕೊಂಡು ಅಲ್ಲಿನ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನುಒದಗಿಸಲು ಮುಂದಾಗಿರುವುದು ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿಟ್ರಸ್ಟ್‍ನ ಸಮಾಜಮುಖಿ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ’’ಎಂದು ಶ್ಲಾಘಿಸಿದರು.

Related Articles

Comments (0)

Leave a Comment